ಜಿಲ್ಲೆಯಲ್ಲಿ ಮೀನು ಅಗ್ಗ; ಕೋಳಿ ಮಾಂಸ- ಮೊಟ್ಟೆ ದುಬಾರಿ!
ರಫ್ತಿನ ಏರುಪೇರಿನಿಂದ ಭಾರೀ ಪ್ರಮಾಣದಲ್ಲಿ ಮೀನು ಸ್ಥಳೀಯ ಮಾರುಕಟ್ಟೆಗೆ
Team Udayavani, Oct 14, 2020, 5:53 AM IST
ಉಡುಪಿ: ಮಾರುಕಟ್ಟೆಯಲ್ಲಿ ಕೋಳಿ ಹಾಗೂ ಮೊಟ್ಟೆಯ ದರದಲ್ಲಿ ಮತ್ತೆ ಭಾರೀ ಏರಿಕೆ ಕಂಡಿದ್ದು ಮೀನು ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಮೀನಿನ ಋತು ಆರಂಭ ವಾಗಿದ್ದು ಭಾರೀ ಪ್ರಮಾಣದಲ್ಲಿ ಮೀನು ಲಭ್ಯವಾಗುತ್ತಿದೆ. ಇದರಿಂದಾಗಿ ಈ ಬಾರಿ ನವರಾತ್ರಿ ಹಬ್ಬದ ಮುನ್ನ ನಗರದಲ್ಲಿ ಮೀನಿನ ಬೆಲೆ ತೀವ್ರ ಕುಸಿತವಾಗಿದೆ.
ಮೀನಿನ ದರ
ಬಂಗುಡೆ ಕೆ.ಜಿ.ಗೆ 100 ರೂ., ಬೂತಾಯಿ ಕೆ.ಜಿ. 80 ರೂ., ಅಂಜಲ್ಗೆ 50 ರೂ. ಮಾರಾಟವಾಗುತ್ತಿದ್ದು, 300 ರೂ.ಯಷ್ಟು ಕುಸಿದಿದೆ. ಬಿಳಿ ಮೀನು (ಸಿಲ್ವರ್ ಫಿಶ್) ಕೆ.ಜಿ.ಗೆ 50 ರೂ.ಗೆ ಇಳಿಕೆಯಾಗಿದ್ದು, 100 ರೂ.ಗೆ ಮಾರಾಟವಾಗುತ್ತಿದೆ. ದೊಡ್ಡ ಮೀನುಗಳನ್ನು ಹೊರತು ಪಡಿಸಿ, ಉಳಿದ ಚಿಕ್ಕಪುಟ್ಟ ಮೀನು ಕೆ.ಜಿ.ಗೆ 50ರಿಂದ 100ರೂ. ಒಳಗೆ ಸಿಗುತ್ತಿದೆ.
ದರ ಇಳಿಕೆಗೆ ಕಾರಣ?
ಪ್ರಸ್ತುತ ಮಲ್ಪೆ ಬೋಟ್ಗಳಿಗೆ ಮೀನು ಹೇರಳವಾಗಿ ಲಭ್ಯವಾಗುತ್ತಿದೆ. ಜತೆಗೆ ಕೊರೊನಾ ಹಿನ್ನೆಲೆಯಲ್ಲಿ ರಫ್ತಿನಲ್ಲಿ ಏರುಪೇರಾದ ಕಾರಣ ಹೆಚ್ಚಿನ ಮೀನುಗಳು ಸ್ಥಳೀಯವಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಮೀನುಗಳು ಮಾರುಕಟ್ಟೆಗೆ ಬರುತ್ತಿವೆ.
ಕೋಳಿ-ಮೊಟ್ಟೆ ದುಬಾರಿ!
ಕೋವಿಡ್ ಆರಂಭದ ದಿನದಲ್ಲಿ ಕೋಳಿ ಮಾಂಸದ ಬೆಲೆ ಭಾರೀ ಇಳಿಕೆ ಯಾಗಿತ್ತು. ಅನ್ಲಾಕ್ ಆದ ಬಳಿಕ ಗ್ರಾಹಕರ
ಬೇಡಿಕೆಗೆ ತಕ್ಕಂತೆ ಕೋಳಿ, ಮೊಟ್ಟೆ ಪೂರೈಕೆ ಇಲ್ಲದ ಕಾರಣದಿಂದ ಬೆಲೆ ಹಂತ ಹಂತ ವಾಗಿ ಗಗನಕ್ಕೇರುತ್ತಿದೆ.. ಕೋಳಿಯ ಧಾರಣೆ ಒಂದು ಕೆ.ಜಿ. (ಸ್ಕಿನ್ ಸಹಿತ ಮಾಂಸದ ಕೋಳಿಗೆ) 160 ರೂ. ನಿಂದ 180 ರೂ., (ಸ್ಕಿ® ರಹಿತ ಮಾಂಸದ ಕೋಳಿಗೆ) 200ರಿಂದ 240 ರೂ.ಗೆ
ಏರಿಕೆಯಾಗಿದೆ. ಹೋಲ್ಸೇಲ್ನಲ್ಲಿ ಒಂದು ಮೊಟ್ಟೆಗೆ 6 ರೂ. ಇದ್ದರೆ ಅಂಗಡಿ ಗಳಲ್ಲಿ 6.50 ರೂ.ನಿಂದ 7 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಬೆಲೆ ಏರಿಕೆಗೆ ಕಾರಣವೇನು?
ಲಾಕ್ಡೌನ್ ಅವಧಿಯಲ್ಲಿ ಹಕ್ಕಿ ಜ್ವರ ಹಾಗೂ ಸುಳ್ಳು ಸುದ್ದಿಯಿಂದ ಕೋಳಿಗಳನ್ನು ಸಾಯಿಸಿದ ಪರಿಣಾಮ ಇದೀಗ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯಾಗುತ್ತಿಲ್ಲ. ಅನ್ಲಾಕ್ ಬಳಿಕ ಕೋಳಿ ಫಾರಂಗಳಿಗೆ ಫೀಡ್ (ಕೋಳಿ ಆಹಾರ) ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿದೆ. ಇದೀಗ ಫೀಡ್ ಪೂರೈಕೆ ಯಥಾಸ್ಥಿತಿಗೆ ಬಂದರೂ, ಕೋಳಿ ಉತ್ಪಾದನೆ ಸಹಜ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕು ಎಂದು ಕೋಳಿ ಫಾರಂ ಮಾಲಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಾರ ಕಡಿಮೆ
ಮೀನಿನ ಬೆಲೆಯಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ವ್ಯಾಪಾರ ತುಂಬಾ ಕಡಿಮೆ ಇದೆ. ನವರಾತ್ರಿ ಸಂದರ್ಭದಲ್ಲಿ ಇನ್ನೂ ಇಳಿಕೆಯಾಗುವ ಸಾಧ್ಯತೆ ಇದೆ.
-ಬೇಬಿ ಸಾಲಿಯಾನ್, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ, ಉಡುಪಿ ತಾಲೂಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ