ಮಹಿಳೆಯ ಕೈಯಲ್ಲಿ ಕಸ ನಿರ್ವಹಣೆಯ ಟೆಂಪೋ ಸ್ಟೇರಿಂಗ್‌!

ನಂದಳಿಕೆ ಗ್ರಾ.ಪಂ. : ಸ್ವಚ್ಛ ವಾಹಿನಿಗೆ ದಕ್ಷ ಸಾರಥಿ

Team Udayavani, Mar 29, 2022, 10:38 AM IST

chalaki

ಬೆಳ್ಮಣ್‌: ನಂದಳಿಕೆ ಗ್ರಾ.ಪಂ.ನ ಎಸ್‌ಎಲ್‌ಆರ್‌ಎಂ ಘಟಕದ ಟೆಂಪೋ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಶೋದಾ ಕಾರ್ಕಳ ತಾಲೂಕಿನಲ್ಲಿಯೇ ಏಕೈಕ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಂದಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1276 ಮನೆಗಳಿದ್ದು ಈ ಪೈಕಿ 1265 ಮನೆಗಳ ಕಸ ನಿರ್ವಹಣೆ ಇಲ್ಲಿನ ಎಸ್‌ ಎಲ್‌ಆರ್‌ಎಂ ಘಟಕದಿಂದ ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ನಂದಳಿಕೆಯ ಬಳಿ ಸಂಗ್ರಹಿಸಿ ಬಳಿಕ ನಿಟ್ಟೆಯ ಘಟಕ್ಕೆ ಕಳುಹಿಸಲಾಗುತ್ತಿದೆ. ಸ್ವತ್ಛ ಭಾರತ ಪರಿಕಲ್ಪನೆ ಉತ್ತಮವಾಗಿ ಅಳವಡಿಕೆಯಾಗುತ್ತಿದೆ. ಇಲ್ಲಿನ ಕಸ ನಿರ್ವಹಣೆಯ ಸ್ವತ್ಛ ವಾಹಿನಿ ಟೆಂಪೋ ಚಾಲಿಕಯಾಗಿ ಪ್ರತಿಮಾ ಕಳೆದ 6 ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಹಿಳಾ ಚಾಲಕರೇ ಈ ಘಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುವ ಆದೇಶ ಇಲಾಖೆಯಿಂದ ಈ ಹಿಂದಿನಿಂದಲೇ ಜಾರಿಯಾಗಿದ್ದು ಈಗ ಉಳಿದ ಪಂಚಾಯತ್‌ಗಳ ಘಟಕಗಳಲ್ಲಿ ಇತರ ಮಹಿಳೆಯರು ಚಾಲನಾ ತರಬೇತಿ ಪಡೆಯುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಈ ಕಸ ನಿರ್ವಹಣೆಯ ಸಿಬಂದಿ ವ್ಯವಸ್ಥೆ ನಡೆಯುತ್ತಿದ್ದು ಯಶೋದಾ ಈ ಹಿಂದೆಯೇ ಚಾಲನಾ ತರಬೇತಿ ಹೊಂದಿದ್ದರು. ಒಣ ಕಸ ಮಾತ್ರ ಈಗಾಗಲೇ ನಂದಳಿಕೆ ಪಂ.ವ್ಯಾಪ್ತಿಯಲ್ಲಿ ಒಣ ಕಸ ಮಾತ್ರ ನಿರ್ವಹಣೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಂಚಾಯತ್‌ ಸ್ವಂತ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಗೊಂಡರೆ ಹಸಿ ಕಸ ನಿರ್ವಹಣೆಯೂ ಸಾಧ್ಯ ಎಂದು ನಂದಳಿಕೆಯ ಘಟಕದ ಮೇಲ್ವಿಚಾರಕಿ ಪ್ರತಿಮಾ ತಿಳಿಸಿದ್ದಾರೆ.

ಜಿ.ಪಂ. ಈ ಯೋಜನೆಯ ಕಾರಣದಿಂದ ಈ ಕಸ ಸಂಗ್ರಹದಿಂದ ಸುಮಾರು 13,000 ರೂ. ಸಂಗ್ರಹವಾಗುತ್ತಿದ್ದು ಸಿಬಂದಿ ವೇತನ ಪಂಚಾಯತ್‌ ವತಿಯಿಂದ ಪಾವತಿಯಾಗುತ್ತಿದೆ ಎಂದು ಯಶೋದಾ ಹೇಳುತ್ತಾರೆ. ಪ್ರಸ್ತುತ ವಾರದ ಮೂರು ದಿನಗಳಲ್ಲಿ ಸಾವಿರಕ್ಕೂ ಮಿಕ್ಕಿ ಮನೆ ಮನೆಗಳಿಂದ ಹಾಗೂ 125 ಅಂಗಡಿಗಳಿಂದ ಕಸ ಸಂಗ್ರಹವಾಗುತ್ತಿದ್ದು ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಹಾಯಕಿ ಅಶ್ವಿ‌ತಾ ತಿಳಿಸುತ್ತಾರೆ.

ಯಾವುದೆ ಅಳುಕಿಲ್ಲದೆ ನಂದಳಿಕೆಯ ಮುಖ್ಯ ರಾಜ್ಯ ಹೆದ್ದಾರಿ ಸಹಿತ ವಿವಿಧೆಡೆ ಚಾಲನೆ ನಡೆಸುವ ಯಶೋದಾ ಹಾಗೂ ಇತರ ಮಹಿಳೆಯದ ಈ ಸಾಧನೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಪವಿತ್ರ ಕೆಲಸ

ಕಳೆದ 6 ತಿಂಗಳ ಹಿಂದೆ ಚಾಲನಾ ತರಬೇತಿ ಪಡೆದಿದ್ದೆ. ಈ ಕೆಲಸಕ್ಕೆ ಪೂರಕವಾಯಿತು. ಕಸ ನಿರ್ವಹಣೆ ಅತ್ಯಂತ ಪವಿತ್ರ ಕೆಲಸ ಹಾಗೂ ಕರ್ತವ್ಯ ಎಂದು ನಂಬಿದ್ದೇನೆ. ಯಶೋದಾ , ಚಾಲಕಿ

ಗುರಿ ಮೀರಿದ ಸಾಧನೆ

ನಂದಳಿಕೆ ಗ್ರಾ.ಪಂ. ಸ್ವತ್ಛತೆಗೆ ಪ್ರಮುಖ ಆದ್ಯತೆ ನೀಡಿದೆ. ಅದರಲ್ಲೂ ಕಸ ನಿರ್ವಹಣೆ ಗುರಿ ಮೀರಿದ ಸಾಧನೆ ತೋರುತ್ತಿದೆ. ನಿತ್ಯಾನಂದ ಅಮೀನ್‌, ನಂದಳಿಕೆ ಗ್ರಾ.ಪಂ. ಅಧ್ಯಕ್ಷ

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.