ಕಾಪು ಲೈಟ್ಹೌಸ್ ಬಳಿಯ ಮೆಟ್ಟಿಲು ದುರಸ್ತಿ
Team Udayavani, Feb 4, 2021, 5:50 AM IST
ಕಾಪು: ಭಾರೀ ಮಳೆ ಮತ್ತು ನೆರೆಯಿಂದಾಗಿ ಹಾನಿಗೊಳಗಾಗಿದ್ದ ಕಾಪು ಲೈಟ್ಹೌಸ್ನ ಬಂಡೆಯನ್ನೇ ರುವ ಮೆಟ್ಟಿಲುಗಳನ್ನು ಲೈಟ್ಹೌಸ್ ಇಲಾಖೆ ಕೊನೆಗೂ ದುರಸ್ತಿಗೊಳಿಸಿದೆ.
ಸೆಪ್ಟಂಬರ್ನಲ್ಲಿ ಮಳೆ ಸುರಿದ ವೇಳೆ ಸಮುದ್ರ ವಿಸ್ತಾರವಾಗಿದ್ದು, ಲೈಟ್ಹೌಸ್ ಪಕ್ಕದಲ್ಲಿ ಹರಿಯುವ ನದಿ ದಿಕ್ಕು ಬದಲಾಯಿಸಿ ಲೈಟ್ಹೌಸ್ನ ಮುಂಭಾಗದಲ್ಲೇ ನೀರು ಹರಿದು ಹೋಗಿತ್ತು. ಇದರಿಂದ ಲೈಟ್ಹೌಸ್ ಏರುವ ಮೆಟ್ಟಿಲು, 10 ಅಡಿಯಷ್ಟು ಮರಳು ಕೊಚ್ಚಿಹೋಗಿದ್ದವು. ಜತೆಗೆ ತಡೆಗೋಡೆಗೂ ಹಾನಿ ಉಂಟಾಗಿತ್ತು. ಇದರಿಂದ ಪ್ರವಾಸಿಗರಿಗೆ ಲೈಟ್ಹೌಸ್ ಏರುವುದು ತ್ರಾಸದಾಯಕವಾಗಿತ್ತು
ಲೈಟ್ ಹೌಸ್ನ ಮೆಟ್ಟಿಲುಗಳನ್ನು ದುರಸ್ತಿಗೊಳಿಸುವಂತೆ ಕಾಪು ಪುರಸಭೆ, ಶಾಸಕರ ಸಹಿತವಾಗಿ ಸ್ಥಳೀಯರು ಕೂಡ ಪ್ರವಾಸೋದ್ಯಮ ಇಲಾಖೆ ಮತ್ತು ಲೈಟ್ ಹೌಸ್ನ
ಆಡಳಿತ ವಿಭಾಗಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಉದಯವಾಣಿ ಪತ್ರಿಕೆಯೂ ವಿಶೇಷ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ:ದಲಿತ ಮಕ್ಕಳಿಗೆ ನಾಲ್ಕು ಸೈನಿಕ ಶಾಲೆ: ಗೋವಿಂದ ಕಾರಜೋಳ
ಕೊನೆಗೂ ಎಚ್ಚೆತ್ತುಕೊಂಡಿರುವ ಇಲಾಖೆ ಇದೀಗ ಲೈಟ್ ಹೌಸ್ ಇಲಾಖೆಯು ಬಂಡೆಯೇರುವ ಮೆಟ್ಟಿಲುಗಳನ್ನು ದುರಸ್ತಿಗೊಳಿಸಲು ಮುಂದಾಗಿದೆ. ಕುಂದಾಪುರ ಮೂಲದ ಗುತ್ತಿಗೆದಾರರ ಮೂಲಕ ಬಂಡೆ ಕೊರೆದು ಕಬ್ಬಿಣದ ಸರಳುಗಳನ್ನು ಹಾಕಿ, ಸಿಮೆಂಟ್ ಮತ್ತು ಕಲ್ಲುಗಳ ಮಿಶ್ರಣದೊಂದಿಗೆ ಪಾರಂಪರಿಕ ಶೈಲಿಯ ಮೆಟ್ಟಿಲುಗಳನ್ನು ನಿರ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ