ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ನವೀಕರಿಸದ ಸಮಿತಿ, ನೇಮಕಕ್ಕೆ ಮೀನಮೇಷ, ಭಕ್ತರಲ್ಲಿ ತಳಮಳ

Team Udayavani, Oct 24, 2020, 6:09 AM IST

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ಸಾಂದರ್ಭಿ ಚಿತ್ರ

ಕಾರ್ಕಳ: ಲಾಕ್‌ಡೌನ್‌ ತೆರವಿನ ಬಳಿಕ ದೇವಸ್ಥಾನಗಳು ಭಕ್ತರಿಗೆ ತೆರೆದುಕೊಂಡಿದ್ದರೂ, ರಾಜ್ಯದ ಮುಜರಾಯಿ ಇಲಾಖೆಯಡಿ ಬರುವ ಅವಧಿ ಮುಕ್ತಾಯಗೊಂಡ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕವಾಗಿಲ್ಲ. ಒಂದು ವರ್ಷದಿಂದ ಆಡಳಿತಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ಭಕ್ತರ ಮೂಲಸೌಕರ್ಯ, ದೇಗುಲದ ಬೆಲೆಬಾಳುವ ಸೊತ್ತುಗಳ ಭದ್ರತೆ ಕುರಿತು ಆತಂಕ ಎದುರಾಗಿದೆ.

ಸಮಿತಿ ನವೀಕರಿಸಿಲ್ಲ
ರಾಜ್ಯದಲ್ಲಿ 90, ಉಡುಪಿ ಜಿಲ್ಲೆಯಲ್ಲಿ 25 ಮತ್ತು ದ.ಕ.ದಲ್ಲಿ 36 “ಎ’ ಗ್ರೇಡ್‌ ದೇವಸ್ಥಾನಗಳಿವೆ. ಉಡುಪಿಯಲ್ಲಿ 20 ಮತ್ತು ದ.ಕ. ಜಿಲ್ಲೆಯಲ್ಲಿ 25ರಷ್ಟು ಅವಧಿ ಪೂರ್ಣಗೊಂಡ “ಎ’ ಗ್ರೇಡ್‌ ದೇವಸ್ಥಾನಗಳಲ್ಲಿ ಹೊಸ ವ್ಯವಸ್ಥಾಪನ ಸಮಿತಿ ರಚನೆಗೆ ಸಂಬಂಧಿಸಿ ಅರ್ಜಿ ಸ್ವೀಕೃತವಾಗಿದೆ.

ಚಟುವಟಿಕೆ ಕುಂಠಿತ
ಅವಿಭಜಿತ ಜಿಲ್ಲೆಗಳ ಬಿ’ ಮತ್ತು ಸಿ’ ವರ್ಗದ ಬಹುತೇಕ ದೇವಸ್ಥಾನಗಳಿಗೂ ವ್ಯವಸ್ಥಾಪನ ಸಮಿತಿ ನೇಮಕವಾಗಿಲ್ಲ. ಅರ್ಜಿ ಸ್ವೀಕೃತಗೊಂಡಿದೆಯಷ್ಟೆ. ಈ ಎಲ್ಲ ಶ್ರೇಣಿಯ ದೇವಸ್ಥಾನಗಳು ಲಕ್ಷಾಂತರ ಬೆಲೆಬಾಳುವ ಆಸ್ತಿಪಾಸ್ತಿ ಹೊಂದಿವೆ. ತೋಟವನ್ನು ಹೊಂದಿರುವ ದೇವಸ್ಥಾನಗಳು ಇವೆ. ಇಲ್ಲೆಲ್ಲ ಪೂಜೆ ವಿಧಿವಿಧಾನಗಳು ನಡೆದರೂ ವ್ಯವಸ್ಥಾಪನ ಸಮಿತಿಗಳಿಲ್ಲದೇ ಕೃಷಿ ಉತ್ಪನ್ನಗಳ ಏಲಂ ಇತ್ಯಾದಿ ಜತೆ ಅಭಿವೃದ್ಧಿಯೂ ಕುಂಠಿತವಾಗಿವೆ.

ರಕ್ಷಣೆ, ಭದ್ರತೆ ಮುಖ್ಯ
ಉಭಯ ಜಿಲ್ಲೆಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಮಂದಾರ್ತಿ ಸಹಿತ ಅನೇಕ ದೇಗುಲಗಳು ಭಾರೀ ಆದಾಯ ತಂದು ಕೊಡುತ್ತಿವೆ. ಅಪಾರ ಬೆಲೆಬಾಳುವ ಸೊತ್ತುಗಳನ್ನು ಹೊಂದಿದ್ದು, ಕೋಟ್ಯಂತರ ರೂ. ಬೆಲೆಬಾಳುವ ಆಭರಣ, ಮೂರ್ತಿ ಸ್ಥಿರ ಮತ್ತು ಚರಾಸ್ಥಿಗಳನ್ನು ಹೊಂದಿವೆ. ಇಲ್ಲೆಲ್ಲದರ ರಕ್ಷಣೆ ಜತೆಗೆ ಭದ್ರತೆ ಕಾಪಾಡುವುದು ಅತಿಮುಖ್ಯವಾಗಿದೆ.

“ಬಿ’ ಮತ್ತು “ಸಿ’ ದರ್ಜೆ ದೇವಸ್ಥಾನಗಳಲ್ಲಿ ಭದ್ರತೆ ಎನ್ನುವುದೇ ಇಲ್ಲ. ರಾತ್ರಿ ಒಮ್ಮೆ ಪೊಲೀಸರು ಗಸ್ತು ತಿರುಗಿ ಬರುವುದೇ ಈ ದೇವಸ್ಥಾನಗಳಿಗಿರುವ ದೊಡ್ಡ ಭದ್ರತೆ. ದೇಗುಲ ಭದ್ರತೆ, ಹುಂಡಿ ಹಣ ಸಂಗ್ರಹ, ಅಭಿವೃದ್ಧಿ ಮೇಲೆ ವ್ಯವಸ್ಥಾಪನ ಸಮಿತಿ ಕಣ್ಣಿಟ್ಟಿರುತ್ತದೆ. ಹೀಗಾಗಿ ಸಮಿತಿ ಇರಬೇಕೆಂದು ಭಕ್ತರ ಆಶಯವಾಗಿದೆ.

ಕುಕ್ಕೆ: ಸಿಎಂ ಅಂಗಳದಲ್ಲಿ ಚೆಂಡು!
ಬೆಂಗಳೂರಿನಲ್ಲಿ ಧಾರ್ಮಿಕ ಪರಿಷತ್‌ ಸಭೆ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಕುಕ್ಕೆ ದೇಗುಲದ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಪ್ರಾಧಿಕಾರ ರಚನೆಗೂ ಮೊದಲು 5 ಮಂದಿಯ ಅಭಿವೃದ್ಧಿ ಸಲಹಾ ಸಮಿತಿ ರಚನೆ ಪ್ರಸ್ತಾವವಿದ್ದರೂ, ಅದಿನ್ನು ಅಂತಿಮವಲ್ಲ. ಮುಖ್ಯಮಂತ್ರಿಗಳು ವ್ಯವಸ್ಥಾಪನ ಸಮಿತಿ ನೇಮಿಸುವ ಬಗ್ಗೆ ಒಲವು ಹೊಂದಿದ್ದು. ಅವರೇ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.

ಹುದ್ದೆ ನಿಯೋಜನೆಗೊಂಡ ಬಳಿಕ ಇತ್ತೀಚೆಗಷ್ಟೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಆಡಳಿತ ಮಂಡಳಿ ನೇಮಕಾತಿಗೆ ಸಂಬಂಧಿಸಿ ಪ್ರಕ್ರೀಯೆಗಳು ನಡೆಯುತ್ತಿವೆ.
-ಕೆ.ಎ. ದಯಾನಂದ್‌ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ-ಬೆಂಗಳೂರು

ಸಭೆಯಲ್ಲಿ ನಿರ್ಧಾರ
ಶೀಘ್ರ 90ರಷ್ಟು ದೇಗುಲಗಳ ನೇಮಕಾತಿಯಾಗಲಿವೆ. ಉಳಿದಿರುವುದು ಮುಂದಿನ ಹಂತದಲ್ಲಿ ಆಗಲಿದೆ.
-ಕಶೆಕೋಡಿ ಸೂರ್ಯನಾರಾಯಣ ಭಟ್‌ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರು

ಅಂಕಿಅಂಶ
ದ.ಕ. ಮತ್ತು ಉಡುಪಿ ದೇವಸ್ಥಾನಗಳು-1,304
ದ.ಕ. ಜಿಲ್ಲೆ – 494
“ಎ’ ಗ್ರೇಡ್‌ – 39
“ಬಿ’ ಗ್ರೇಡ್‌ – 44
“ಸಿ’ ಗ್ರೇಡ್‌ – 411
ಉಡುಪಿ ಜಿಲ್ಲೆ – 810
“ಎ’ ಗ್ರೇಡ್‌ – 25
“ಬಿ’ ಗ್ರೇಡ್‌ – 19
“ಸಿ’ ಗ್ರೇಡ್‌ – 766

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.