Shirva: ವಾಕಿಂಗ್ ವೇಳೆ ಕುಸಿದು ಬಿದ್ದು ಸಾವು
Team Udayavani, Apr 16, 2024, 7:28 PM IST
ಶಿರ್ವ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ವಾಕಿಂಗ್ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಶಿರ್ವ ಪದವು ಬಳಿ ಎ. 15ರ ಸಂಜೆ ವೇಳೆ ನಡೆದಿದೆ.
ಶಿರ್ವ ಸೊಸೈಟಿ ಬಳಿಯ ನಿವಾಸಿ ನಿತ್ಯಾನಂದ (62) ಮೃತಪಟ್ಟವರು.
ಹೃದಯ ಸಂಬಂಧಿ ಕಾಯಿಲೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಸಂಜೆ ಶಿರ್ವ ಪದವು ಶಾಲೆಯ ಬಳಿ ವಾಕಿಂಗ್ಗೆ ಹೋಗಿದ್ದರು. ಅಲ್ಲಿ ಕುಸಿದು ಬಿದ್ದವರನ್ನು ಸತೀಶ್ ಎಂಬವರು ತುರ್ತು ಚಿಕಿತ್ಸೆ ಬಗ್ಗೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.