ಅಂದು ಬ್ಲ್ಯಾಕ್‌ ಸ್ಪಾಟ್‌, ಇಂದು ಗ್ರೀನ್‌ ಸ್ಪಾಟ್‌;  ಕಟಪಾಡಿ ಗ್ರಾ.ಪಂ. ರುದ್ರಭೂಮಿ ಮಾದರಿ


Team Udayavani, Feb 5, 2022, 4:56 PM IST

ಅಂದು ಬ್ಲ್ಯಾಕ್‌ ಸ್ಪಾಟ್‌, ಇಂದು ಗ್ರೀನ್‌ ಸ್ಪಾಟ್‌;  ಕಟಪಾಡಿ ಗ್ರಾ.ಪಂ. ರುದ್ರಭೂಮಿ ಮಾದರಿ

ಕಟಪಾಡಿ: ಬ್ಲ್ಯಾಕ್‌ ಸ್ಪಾಟ್‌ ಆಗಿ ಗುರುತಿಸಲ್ಪಡುತ್ತಿದ್ದ ಕಟಪಾಡಿ ಗ್ರಾ.ಪಂ.ನ ಸರಕಾರಿಗುಡ್ಡೆ ಸಾರ್ವಜನಿಕ ಹಿಂದೂ ರುದ್ರಭೂಮಿಯ ಪ್ರದೇಶವು ಇದೀಗ ಗ್ರೀನ್‌ಸ್ಪಾಟ್‌ ಆಗಿ ಅಭಿವೃದ್ಧಿ ಹೊಂದುತ್ತಿದೆ. ಸುಮಾರು ಎರಡು ಎಕರೆಯಷ್ಟು ಸ್ಥಳಾವಕಾಶವುಳ್ಳ ಈ ಶ್ಮಶಾನದಲ್ಲಿ ಈ ಹಿಂದೆ ಎಲ್ಲೆಂದರಲ್ಲಿ ಎಸೆದ ತ್ಯಾಜ್ಯ ರಾಶಿ, ಕೊಳೆತು ನಾರುವ ದುಸ್ಥಿತಿ ಕಂಡು ಬಂದಿತ್ತು. ಸಾಕಷ್ಟು ಸೂಚನಾ ಫಲಕಗಳನ್ನು ಅಳವಡಿಸಿದರೂ ತ್ಯಾಜ್ಯ ಎಸೆಯುವುದು ಮಾತ್ರ ಕಡಿತಗೊಂಡಿರಲಿಲ್ಲ.

ಇದೀಗ ಕಟಪಾಡಿ ಗ್ರಾ.ಪಂ. ಆಡಳಿತ ಮಂಡಳಿಯು ಸೂಕ್ತ ರೂಪುರೇಖೆಯೊಂದಿಗೆ ಸರಕಾರಿಗುಡ್ಡೆ ಸಾರ್ವಜನಿಕ ಹಿಂದೂ ರುದ್ರಭೂಮಿಯ ತ್ಯಾಜ್ಯ ಭರಿತ ಬ್ಲ್ಯಾಕ್‌ ಸ್ಪಾಟ್‌ನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಗ್ರೀನ್‌ ಸ್ಪಾಟ್‌ ಆಗಿ ಬದಲಾಯಿಸಿದೆ.

ಹನಿ ನೀರಾವರಿ ತಂತ್ರಜ್ಞಾನ
ಇಲ್ಲಿ ಕಹಿಬೇವು, ಲಿಂಬೆ, ಮಟ್ಟುಗುಳ್ಳ, ನೆಲ್ಲಿಕಾಯಿ ಸಹಿತ ಆಯುರ್ವೇದಿಕ್‌, ಔಷಧೀಯ ಗುಣವುಳ್ಳ ಅನೇಕ ಗಿಡಗಳನ್ನು ನೆಡಲಾಗಿದೆ. ಅದಕ್ಕೆ ಸೂಕ್ತ ಕಟ್ಟೆಯನ್ನು ಕಟ್ಟಿ ಪ್ರತಿಯೊಂದೂ ಗಿಡದ ಬುಡಕ್ಕೆ ಪೈಪ್‌ಲೈನ್‌ ಕೂಡ ಅಳವಡಿಸಿ ಹನಿ ನೀರಾವರಿ ತಂತ್ರಜ್ಞಾನದ ಮೂಲಕ ಗಿಡಗಳ ಬೆಳವಣಿಗೆಗೆ ಪ್ರಾಶಸ್ತ್ಯವನ್ನು ನೀಡಲಾಗಿದೆ.

ಮಟ್ಟುಗುಳ್ಳದ ಫಸಲು
ಇಲ್ಲಿ ನೆಡ ಲಾಗಿರುವ ಮಟ್ಟುಗುಳ್ಳದ ಗಿಡದಲ್ಲಿ ಈಗಾಗಲೇ ಮಟ್ಟುಗುಳ್ಳದ ಫಸಲು ಲಭಿಸಿದೆ. ಪ್ರಥಮ ಫಸಲನ್ನು ಗ್ರಾಮ ದೇಗುಲಕ್ಕೆ ಸಮರ್ಪಿಸಲಾಗಿದೆ ಎನ್ನುವ ಶ್ಮಶಾನ ನಿರ್ವಾಹಕ ಕಿಶೋರ್‌ ಪೂಜಾರಿ ಹಾಗೂ ಸಿಬಂದಿ ಹಸುರು ವಲಯವನ್ನು ಪಾಲನೆ ಮಾಡುತ್ತಿದ್ದಾರೆ.

ಬಾನಾಡಿಗಳಿಗೆ ಆಶ್ರಯ
ಸುಮಾರು ವಿವಿಧ ಬಗೆಯ 85 ಗಿಡಗಳನ್ನು ನೆಡಲಾಗಿದ್ದು, ಸುಸಜ್ಜಿತ ಹಸುರುವನದ ನಿರ್ಮಾಣಗೊಂಡಿದೆ. ಹಣ್ಣು ಹಂಪಲುಗಳ ಗಿಡಗಳು ಬಾನಾಡಿಗಳಿಗೂ ಆಹಾರ, ಆಶ್ರಯ ನೀಡು ತ್ತಿದೆ. ಕಹಿಬೇವಿನ ಸೊಪ್ಪುಗಳನ್ನು ಈಗಾ ಗಲೇ ಕೆಲವು ಮಂದಿ ಕೇಳಿ ಪಡೆದುಕೊಂಡು ಉಪಯೋಗಿಸುತ್ತಿದ್ದಾರೆ.

ಗ್ರಾಮದ ಸ್ವಚ್ಛತೆಗೆ ಸಹಕರಿಸಿ
ಈ ಭಾಗದಲ್ಲಿ ಕಸದ ರಾಶಿಗೆ ಮುಕ್ತಿ ಹಾಗೂ ಸ್ವಚ್ಛತೆಗೆ ಮಹತ್ವ ನೀಡುವ ದೃಷ್ಟಿಯಿಂದ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಪಂಚಾಯತ್‌ ಆಡಳಿತವು ಕಾರ್ಯೋ ನ್ಮುಖವಾಗಿದ್ದು, ಆ ನಿಟ್ಟಿನಲ್ಲಿ ಪ್ರಥಮವಾಗಿ ಶ್ಮಶಾನ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಗ್ರೀನ್‌ ಸ್ಪಾಟ್‌ ನಿರ್ಮಾಣ ಮಾಡಿದ್ದು, ಯಶಸ್ವಿಯಾಗಿದ್ದೇವೆ. ಸಾರ್ವಜನಿಕರು, ಗ್ರಾಮಸ್ಥರು ನಮ್ಮ ಗ್ರಾಮದ ಸ್ವಚ್ಛತೆಗಾಗಿ ಇನ್ನಷ್ಟು ಹೆಚ್ಚು ಸಹಕರಿಸಿರಿ
– ಇಂದಿರಾ ಎಸ್‌. ಆಚಾರ್ಯ, ಅಧ್ಯಕ್ಷೆ,, -ಅಬೂಬಕರ್‌ ಎ.ಆರ್‌., ಉಪಾಧ್ಯಕ್ಷ,
ಮಮತಾ ವೈ.ಶೆಟ್ಟಿ., ಪಿ.ಡಿ.ಒ., ಕಟಪಾಡಿ ಗ್ರಾ.ಪಂ.

– ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.