ರಸ್ತೆಯಿಲ್ಲದ ಗದ್ದೆಯಲ್ಲಿ ಬಂದು ನಿಂತಿದೆ ಮಾಯಾವಿ ಕಾರು! ಪರ್ಕಳದ ಗದ್ದೆಯಲ್ಲಿ ನಿಗೂಢ ಕಾರು!
Team Udayavani, Nov 15, 2020, 11:33 AM IST
ಉಡುಪಿ: ಇಲ್ಲಿನ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಎದುರು ತಗ್ಗಿನಲ್ಲಿರುವ ಗದ್ದೆಯಲ್ಲಿ ನಿಗೂಢ ರೀತಿಯಲ್ಲಿ ಎರಡು ದಿನಗಳಿಂದ ನಿಂತರುವ ಕಾರು ಜನರ ಕುತೂಹಲಕ್ಕೆ ಕಾರಣವಾಗಿದೆ.
ತಿರುವನಂತಪುರ ನೋಂದಣಿಯ (KL 01 AV 4981) ಕಾರು ಇದಾಗಿದ್ದು, ಕಾರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಆದರೂ ರಸ್ತೆಯೂ ಇಲ್ಲದ ಆ ಗದ್ದೆಗೆ ಕಾರು ಹೇಗೆ ಬಂತು? ಯಾರು ತಂದು ನಿಲ್ಲಿಸಿದರು? ನಿಲ್ಲಿಸಿದವರು ಎಲ್ಲಿ ಹೋದರು? ಎನ್ನುವುದೇ ಸದ್ಯ ಜನರನ್ನು ಕಾಡುತ್ತಿರುವ ಪ್ರಶ್ನೆ.
ಒಂದು ವೇಳೆ ಅಪಘಾತವಾಗಿ ಕಾರು ಅಲ್ಲಿ ಬಿದ್ದಿದ್ದರೆ, ಅಷ್ಟು ಆಳಕ್ಕೆ ಉರುಳುವಾಗ ಹಾನಿಯಾಗಬೇಕಿತ್ತು, ಆದರೆ ಕನಿಷ್ಠ ಕೆಸರು-ಮಣ್ಣು ಕೂಡ ಹಿಡಿದಿಲ್ಲ. ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಎದುರು ತಗ್ಗಿನಲ್ಲಿರುವ ಗದ್ದೆಯಲ್ಲಿ ಹುಲ್ಲು ಪೊದೆ ಬೆಳೆದಿದೆ. ಕಾರು ಬಂದ ಜಾಗದ ಗುರುತು ಮೂಡಬೇಕಿತ್ತು. ಆದರೆ ಕಾರು ನಿಂತಿರುವ ಜಾಗದ ಹೊರತು ಒಂದಿಂಚೂ ಹುಲ್ಲು/ಪೊದೆಗೆ ಹಾನಿಯಾಗಿಲ್ಲ.
ಇದನ್ನೂ ಓದಿ:ಇಂದಿನಿಂದ ತೆರೆಯಲಿದೆ ಶಬರಿಮಲೆ ದೇವಸ್ಥಾನ: ಈ ಬಾರಿ ಭಕ್ತರು ಈ ನಿಯಮಗಳನ್ನು ಪಾಲಿಸಲೇಬೇಕು
ಅಪರಾಧ ಪ್ರಕರಣ ಶಂಕೆ: ಕೇರಳದ ಕಾರನ್ನು ಉಡುಪಿ ಸಮೀಪದ ಪರ್ಕಳದಲ್ಲಿ ಈ ರೀತಿ ನಿಗೂಢವಾಗಿ ಬಿಟ್ಟು ಹೋಗಿರುವ ಹಿನ್ನಲೆಯಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೊಲೆ ಅಥವಾ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಇಲ್ಲಿ ಈ ರೀತಿ ಕಾರನ್ನು ಬಿಟ್ಟು ಹೋಗಿರಬಹುದು ಎನ್ನುವ ಶಂಕೆ ಬಲವಾಗಿ ವ್ಯಕ್ತವಾಗುತ್ತಿದೆ.
ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್