ಮರ ಮಟ್ಟುಗಳು ಮೀನಿಗೆ ಉತ್ತಮ ಆಹಾರ

ಕಡಲಬ್ಬರದ ಅಲೆಗೆ ಮಲ್ಪೆ ಸಮುದ್ರ ತೀರದಲ್ಲಿ ರಾಶಿ ಕಸ

Team Udayavani, Jul 14, 2022, 2:37 PM IST

12

ಮಲ್ಪೆ: ನದಿ ಹೊಳೆಗಳ ಮೂಲಕ ಸಮುದ್ರ ಸೇರಿದ್ದ ಕಸಕಡ್ಡಿಗಳು, ಪ್ಲಾಸ್ಟಿಕ್‌ ಇನ್ನಿತರ ಮರಮಟ್ಟುಗಳು ಸಮುದ್ರದ ಅಲೆಗಳೊಂದಿಗೆ ಮಲ್ಪೆ ಕಡಲತೀರದಲ್ಲಿ ಹೇರಳ ಪ್ರಮಾಣದಲ್ಲಿ ಬಿದ್ದಿವೆ.

ಕಳೆದ 10ದಿನಗಳಿಂದ ಬಿದ್ದ ಭಾರೀ ಪ್ರಮಾಣದ ಮಳೆಗಾಳಿಯಿಂದಾಗಿ ನದಿ ಹೊಳೆಗಳಲ್ಲಿ ಪ್ರವಾಹ ಉಂಟಾಗಿ ಸಮುದ್ರ ಸೇರಿತ್ತು. ಸಮುದ್ರದ ಆಲೆಗಳೊಂದಿಗೆ ಬಂದ ಕಸಕಡ್ಡಿಗಳು ಕಡಲತೀರದಲ್ಲಿ ರಾಶಿ ಕಂಡು ಬಂದಿವೆ. ಇದರಲ್ಲಿ ಕೊಳೆತ ಮರಗಿಡಗಳ ಎಲೆಗಳು, ಪ್ಲಾಸಿಕ್‌ ಬಾಟಲುಗಳು, ಚಪ್ಪಲಿಗಳು ಸೇರಿವೆ.

ಇದೊಂದು ನೈಸರ್ಗಿಕ ಪ್ರಕ್ರಿಯೆ ಆಗಿದ್ದು ಮಳೆಗಾಲದಲ್ಲಿ ಮಾತ್ರ ಸಂಭವಿಸುತ್ತದೆ. ಕಡಲ ಅಬ್ಬರ ಹೆಚ್ಚಿದಾಗ ಆದರ ಆಲೆಯೊಂದಿಗೆ ಕಸಕಡ್ಡಿಗಳು ಮೇಲೆ ಬರುತ್ತವೆ. ಕಳೆದ ಕೆಲವು ವರ್ಷಗಳಿಂದ ತೀರಕ್ಕೆ ಬಂದು ಬೀಳುವ ಕಸದಲ್ಲಿ ಕಿಲೋಗಟ್ಟಲೆ ಪ್ಲಾಸ್ಟಿಕ್‌ ಇರುತ್ತದೆ. ಈ ಹಿಂದೆ ಉರುವಲುಗಳನ್ನು ಕರಾವಳಿ ತೀರದ ಜನರು ಬೆಂಕಿ ಕಾಯಿಸಲು ಕಾದು ಕುಳಿತು ಮನೆಗೆ ಒಯ್ಯುತ್ತಿದ್ದರು. ಈಗ ಪ್ರತೀ ಮನೆಯಲ್ಲಿ ಗ್ಯಾಸ್‌ ಇರುವುದರಿಂದ ಇದು ಕಡಲತೀರದಲ್ಲಿಯೇ ಉಳಿಯುತ್ತದೆ.

ಔಷಧೀಯ ಗುಣ

ಈ ಹಿಂದೆ ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಕೆಲವೊಂದು ಔಷಧೀಯ ಗುಣಗಳಿರುವ ಮರ, ಗೆಲ್ಲು, ಎಲೆಗಳು, ಕಾಯಿಗಳು ನದಿ ನೀರಿ ನೊಂದಿಗೆ ತೇಲಿ ಬಂದು ಸಮುದ್ರ ಸೇರುತ್ತಿತ್ತು. ಇದು ಸಂತಾನೋತ್ಪತ್ತಿಯಲ್ಲಿರುವ ಮೀನುಗಳಿಗೆ ಉತ್ತಮ ಆಹಾರವಾಗುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ನದಿಗಳೊಂದಿಗೆ ಬಂದ ಈ ಮರಮಟ್ಟುಗಳು ನಗರ ಪ್ರದೇಶದಲ್ಲಿ ನದಿಗಳಿಗೆ ಎಸೆಲಾಗುವುವ ಪ್ಲಾಸಿಕ್‌ ಹಾಗೂ ಇನ್ನಿತರ ವಿಷಯುಕ್ತ ಪದಾರ್ಥಗಳೊಂದಿಗೆ ಸೇರಿ ಸಮುದ್ರ ಸೇರುವುದರಿಂದ ಮೀನುಗಳಿಗೆ ಹಾನಿಕಾರಕ ವಾಗುತ್ತಿದೆ. ಕಣ್ಣಿಗೆ ಕಾಣದ ಕೆಲವೊಂದು ಸಣ್ಣಗಾತ್ರದ ಪ್ಲಾಸ್ಟಿಕ್‌ಗಳು ಮೀನಿನ ಹೊಟ್ಟೆ ಸೇರಿ ಮೀನು ನಾಶವಾಗುತ್ತಿದೆ ಎನ್ನಲಾಗಿದೆ.

ಕಡಲ ಅಬ್ಬರದ ಸಮಯದಲ್ಲಿ ಸಮುದ್ರವು ಕಸದ ರಾಶಿಯನ್ನೆ ತೀರಕ್ಕೆ ತಂದು ಹಾಕುತ್ತದೆ. ಇದಕ್ಕೆ ಮಡಿ ಬೀಳುವುದು ಎಂದು ಹೇಳಲಾಗುತ್ತದೆ. ಈ ವೇಳೆ ಸಮುದ್ರವು ಶಾಂತ ಸ್ವರೂಪವನ್ನು ಪಡೆದುಕೊಳ್ಳುವುರಿಂದ ಮೀನುಗಾರಿಕೆಗೂ ಇದು ಪೂರಕ. ಕಸಗಳು ಕೊಳೆತು ಮತ್ತೆ ಸಮುದ್ರ ಸೇರುವುದರಿಂದ ಮೀನುಗಳಿಗೆ ಆಹಾರವೂ ಆಗುತ್ತದೆ ಎಂದು ಮಲ್ಪೆ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್‌ ತಿಳಿಸುತ್ತಾರೆ.

ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯದಿರಿ: ಹೇರಳ ಪ್ರಮಾಣದಲ್ಲಿ ಮಡಿ ಕಸ ಬೀಳುತ್ತಿದೆ. ಕಡಲತೀರದಲ್ಲಿರುವ ಮಡಿ ಕಸವನ್ನು ಬಿಟ್ಟು ಪ್ಲಾಸ್ಟಿಕ್‌ ಬಾಟಲಿ, ಬಲೆ ತುಂಡುಗಳನ್ನುಅಲ್ಲಿಂದ ತೆರವು ಮಾಡುತ್ತಿದ್ದೇವೆ. ಹೊಳೆ ನದಿಗಳಿಗೆ ಪ್ಲಾಸ್ಟಿಕ್‌, ಇನ್ನಿತರ ಜಲಚರಗಳಿಗೆ ಹಾನಿಕಾರಕವಾಗುವ ವಸ್ತುಗಳನ್ನು ಎಸೆಯುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತಾಗಬೇಕು.- ಸುದೇಶ್‌ ಶೆಟ್ಟಿ, ಬೀಚ್‌ ನಿರ್ವಹಕರು,ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ

ಟಾಪ್ ನ್ಯೂಸ್

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.