ಕೆದೂರು: ರಾಜ್ಯಮಟ್ಟದ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಗೆ ಆದೇಶ್ ಕಾಮತ್ ಆಯ್ಕೆ
ಗ್ರಾಮೀಣ ಭಾಗದ ವಿದ್ಯಾರ್ಥಿಯಿಂದ ಆವಿಷ್ಕೃತಗೊಂಡ ತ್ರಿ ಇನ್ ಒನ್ ಮಾದರಿಯ ವಾಕಿಂಗ್ ಸ್ಟಿಕ್ !
Team Udayavani, Jan 15, 2022, 7:11 PM IST
ತೆಕ್ಕಟ್ಟೆ : 2020-21ನೇ ಸಾಲಿನ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಕೆದೂರು ಸರಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಆದೇಶ್ ಕಾಮತ್ ಅವರು ಉಡುಪಿ ಜಿಲ್ಲೆಯಿಂದ ರಾಜ್ಯಮಟ್ಟದ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ವಯಸ್ಸಾದವರು ಹಾಗೂ ಅಂಗವೈಕಲ್ಯತೆಯಲ್ಲಿ ಬಳಲುತ್ತಿರುವವರಿಗೆ ಆಸರೆಯಾಗಬಲ್ಲ ವಾಕಿಂಗ್ ಸ್ಟಿಕ್ ವಿತ್ ಸೀಟ್ ಎಂಡ್ ಅಂಬ್ರಲಾ ಎನ್ನುವ ವಾಕಿಂಗ್ ಸ್ಟಿಕ್ ಸುಧಾರಿತ ಮಾದರಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮಾದರಿಯಲ್ಲಿ ಕಡಿಮೆ ತೂಕದ ಅಲ್ಯೂಮಿನಿಯಂ ಮೂರು ರಾಡ್, ಸೀಟ್( ಅಲ್ಯೂಮಿನಿಯಂ ಪ್ಲೇಟ್) ಹಾಗೂ ಕೊಡೆಯನ್ನು ಜೋಡಿಸಲಾಗಿದೆ. ಇದು ಸಂಪೂರ್ಣ ಹಗುರವಾಗಿರುವ ಪರಿಣಾಮ ವಯಸ್ಕರಿಗೆ ನಡೆಯುವಾಗ ಆಯಾಸವಾದಾಗ ಸುಧಾರಿಸಿಕೊಳ್ಳಲು ವಿಶೇಷವಾಗಿ ಸೀಟ್ ವ್ಯವಸ್ಥೆಯೊಂದಿಗೆ ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆಯನ್ನು ಅಳವಡಿಸಲಾಗಿದೆ.
ಈತ ಕೆದೂರು ಉಮೇಶ್ ಕಾಮತ್ ಹಾಗು ಉಷಾ ಕಾಮತ್ ದಂಪತಿಗಳ ಪುತ್ರ. ವಿಜ್ಞಾನ ಶಿಕ್ಷಕಿ ವಸುಧಾ ಅವರ ಜತೆ ಶಿಕ್ಷಕಿ ದೀಪಾವತಿ ಅವರು ಮಾರ್ಗದರ್ಶನ ನೀಡಿದರು.
-ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ
ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ
Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ
UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ
Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ