ಬೈಂದೂರು: ಬಟ್ಟೆ ವ್ಯಾಪಾರಿ ನಾಪತ್ತೆ; ದೂರು ದಾಖಲು
Team Udayavani, Aug 1, 2023, 11:51 PM IST
ಬೈಂದೂರು: ಅಂಕೋಲಾದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ನಾವುಂದ ಗ್ರಾಮದ ಕಿರಿಮಂಜೇಶ್ವರ ಹೈಸ್ಕೂಲ್ ಹತ್ತಿರದ ನಿವಾಸಿ ಮೊಹಮ್ಮದ್ ಖ್ವಾಜಾ ಶೇಖ್ (41) ಅವರು ಜು. 20ರಂದು ಅಂಕೋಲಾಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದು, ಅಂಕೋಲಾಕ್ಕೂ ಹೋಗದೇ ಮರಳಿ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೋಲುಮಖದ ಗಡ್ಡ ಮೀಸೆ ಬಿಟ್ಟಿರುವ ಆರು ಅಡಿ ಎತ್ತರವಿದ್ದು, ಗೋಧಿ ಮೈಬಣ್ಣದ ಸಾಧಾರಣ ಶರೀರ ಹೊಂದಿರುವ ಇವರು ಕನ್ನಡ, ಉರ್ದು, ಮಾತನಾಡುತ್ತಾರೆ. ನೀಲಿ ಬಣ್ಣದ ಜೀನ್ಸ್ ಪ್ಯಾಟ್, ತುಂಬು ತೋಳಿನ ಕಪ್ಪು ಬಣ್ಣದ ಬಿಳಿ ಚುಕ್ಕಿಗಳಿರುವ ಶರ್ಟ್ ಧರಿಸಿದ್ದು, ಇವರ ಮಾಹಿತಿ ತಿಳಿದವರು ಬೈಂದೂರು ಠಾಣೆಗೆ (08254-251033) ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕಿಸುವಂತೆ ಠಾಣಾಧಿಕಾರಿ ನಿರಂಜನ್ ಗೌಡ ಮನವಿ ಮಾಡಿದ್ದಾರೆ.