ತೆಕ್ಕಟ್ಟೆಯಲ್ಲಿ ಬೆಂಕಿ ದುರಂತ
Team Udayavani, Apr 24, 2019, 6:32 AM IST
ತೆಕ್ಕಟ್ಟೆ: ರಾ.ಹೆ. 66ರ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಎದುರು ವಿದ್ಯುತ್ ಶಾರ್ಟ್ ಸರ್ಕ್ನೂಟ್ನಿಂದಾಗಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡು ಅರ್ಧ ಎಕರೆಗೂ ಅಧಿಕ ಪ್ರದೇಶ ಸುಟ್ಟು ಹೋಗಿದೆ.
ಬೆಂಕಿ ಸ್ಪರ್ಶವಾಗಿರುವುದನ್ನು ಆ ದಾರಿಯಲ್ಲಿ ಸಾಗುತ್ತಿದ್ದ ಚುನಾವಣೆಯ ಫ್ಲೆಯಿಂಗ್ ಸ್ಕ್ವಾಡ್ ತಂಡದ ಹರೀಶ್ ನಾಯಕ್ ಹಾಗೂ ಕುಂದಾಪುರ ಠಾಣೆಯ ಎಎಸ್ಐ ಸುಧಾ ಪ್ರಭು, ಮಂಜು ಡಿ., ಸುರೇಂದ್ರ ಅವರು ಗಮನಿಸಿ ಕುಂದಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬೆಂಕಿ ನಂದಿಸಲು ಸಾರ್ವಜನಿಕರು ಕೂಡ ಕೈಜೋಡಿಸಿದರು.