ತೆರಿಗೆ ಸಂಗ್ರಹಕ್ಕೆ ತೊಡಕಾದ ಸಾಫ್ಟ್ ವೇರ್‌


Team Udayavani, Apr 30, 2022, 11:03 AM IST

tax-collection

ಕುಂದಾಪುರ: ರಾಜ್ಯಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರೀಕ್ಷಿತ ತೆರಿಗೆ ಸಂಗ್ರಹಕ್ಕೆ ಸಾಫ್ಟ್ವೇರ್‌ ಸಮಸ್ಯೆಯಿಂದಾಗಿ ತೊಡಕಾಗಿದೆ. ಎಪ್ರಿಲ್‌ ತಿಂಗಳಲ್ಲಿ ಸಾಧ್ಯವಾದಷ್ಟು ಗುರಿ ಸಾಧಿಸಬೇಕು ಎನ್ನುವ ಸರಕಾರ ಅದಕ್ಕೆ ಪೂರಕ ತಂತ್ರಾಂಶ ವ್ಯವಸ್ಥೆ ಕಲ್ಪಿಸದೆ, ಸಿದ್ಧತೆ ಮಾಡದೇ ಎಡವಟ್ಟು ಮಾಡಿಕೊಂಡ ಕಾರಣ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನಂತಹ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಮಸ್ಯೆಯಾಗಿದೆ.

ಗುರಿ

ಸಾಮಾನ್ಯವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತೆರಿಗೆ ಸಂಗ್ರಹಕ್ಕೂ ಶೇ. 100ರ ಗುರಿಯನ್ನೇ ನೀಡಲಾಗುತ್ತದೆ. ಆದರೆ ಪೂರ್ಣಪ್ರಮಾಣ ತಲುಪುವ ಸಂಸ್ಥೆಗಳು ಕಡಿಮೆ. ಹಾಗಿದ್ದರೂ ಗುರಿ ಸಾಧಿಸಬೇಕು ಎನ್ನುವ ದೃಷ್ಟಿಯಲ್ಲಿ ಎಪ್ರಿಲ್‌ ತಿಂಗಳಿನಲ್ಲಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ನೀಡಲಾಗುತ್ತದೆ. ಶೇ.5 ರಿಯಾಯಿತಿ ನೀಡುವುದರಿಂದ ಲಕ್ಷಗಟ್ಟಲೆ ತೆರಿಗೆ ಇರುವ ಕಟ್ಟಡಗಳ ಮಾಲಕರಿಗೆ, ಮಾಣಿಜ್ಯ ವ್ಯವಹಾರಸ್ಥರಿಗೆ ಅನುಕೂಲವಾಗುತ್ತದೆ.

ಸಮಸ್ಯೆ

ತಿಂಗಳಿನಲ್ಲಿ ಸರಿಸುಮಾರು ಅರ್ಧದಷ್ಟು ದಿನ ತಂತ್ರಾಂಶ ಸಮಸ್ಯೆ ಇತ್ತು. ಇದರಿಂದ ತೆರಿಗೆ ಪಾವತಿ ಸಾಧ್ಯವಾಗಲಿಲ್ಲ. ತಂತ್ರಾಂಶ ಮೇಲ್ದರ್ಜೆಗೇರಿಸಲು 3 ದಿನಗಳು ಹಿಡಿದಿದ್ದವು. ಶೇ.10 ತೆರಿಗೆ ಏರಿಕೆಗೆ ಮತ್ತಷ್ಟು ದಿನ ಆಯಿತು. ಮತ್ತೆ 3 ದಿನ ಸರಿ ಇರಲಿಲ್ಲ. ಮತ್ತೆ 3 ದಿನ ಪ್ರತೀ ಗಂಟೆಗೊಮ್ಮೆ ಹ್ಯಾಂಗ್‌ ಆಗುತ್ತಿತ್ತು. ಒಟ್ಟು 9 ಸರಕಾರಿ ರಜೆಗಳು ಸಾಲು ಸಾಲು ಇದ್ದವು. 1 ದಿನ ಬ್ಯಾಂಕ್‌ ವ್ಯವಹಾರ ಇರಲಿಲ್ಲ. ಈ ಎಲ್ಲ ಕಾರಣಗಳಿಂದ ಒಟ್ಟು 16 ದಿನಗಳ ಕಾಲ ತೆರಿಗೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ.

ವಿಸ್ತರಣೆ ಇಲ್ಲ

ಸಾಮಾನ್ಯವಾಗಿ ಎ.30ರ ವರೆಗೆ ಮಾತ್ರ ಶೇ.5ರ ರಿಯಾಯಿತಿ ಇರುತ್ತದೆ. ಆದರೆ ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಇದ್ದ ಕಾರಣ ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಮತ್ತೂ 2 ತಿಂಗಳು ರಿಯಾಯಿತಿ ಅವಧಿ ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಲಾಕ್‌ಡೌನ್‌ ಇಲ್ಲದ ಕಾರಣ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ. ಈವರೆಗೂ ಅಂತಹ ಆದೇಶವೂ ಬಂದಿಲ್ಲ.

ಮೊದಲೇ ಯಾಕೆ

ಒಟ್ಟು ತೆರಿಗೆ ಶೇ.30ರಷ್ಟಾದರೂ ಆರ್ಥಿಕ ವರ್ಷದ ಮೊದಲ ತಿಂಗಳು ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗು ತ್ತದೆ. ಏಕೆಂದರೆ ಪುರಸಭೆಯ ಅನೇಕ ಖರ್ಚು ವೆಚ್ಚಗಳಿಗೆ ಈ ತೆರಿಗೆ ಹಣವೇ ಆಧಾರವಾಗುತ್ತದೆ. ವೇತನ, ನಿರ್ವಹಣೆ, ತುರ್ತು ಕಾಮಗಾರಿ ಸೇರಿದಂತೆ ಸ್ಥಳೀಯ ಅನುದಾನ ಬಳಕೆಗೆ ತೆರಿಗೆ ಹಣವೇ ಮೂಲ. ಮೊದಲೇ ಸಂಗ್ರಹ ಮಾಡಿಟ್ಟುಕೊಳ್ಳದಿದ್ದರೆ ವೇತನ ಕೊಡಲೂ ದುಡ್ಡಿಲ್ಲ ಎಂದಾಗುತ್ತದೆ.

ರಜಾದಿನವೂ ಕೆಲಸ

ತೆರಿಗೆ ಸಂಗ್ರಹದಲ್ಲಿ ಪ್ರಗತಿ ಇರಬೇಕೆಂಬ ಕಾರಣದಿಂದ ಇಲ್ಲಿನ ಪುರಸಭೆ ರಜಾ ಅವಧಿಯಲ್ಲೂ ಕೆಲಸ ಮಾಡಿದ್ದಾರೆ. ಕೆಲಸದ ದಿನಗಳಲ್ಲಿ ಫಾರಂ ಭರ್ತಿ ಮಾಡಿದ್ದಾರೆ. ದೊಡ್ಡ ವಾಣಿಜ್ಯ ಪತಿಗಳ ಬಳಿ ತೆರಳಿ ಚೆಕ್‌ ಸಂಗ್ರಹಿಸಲು ಸ್ವತಃ ಮುಖ್ಯಾಧಿಕಾರಿ, ಕಂದಾಯ ನಿರೀಕ್ಷಕರ ತಂಡ ತೆರಳಿದೆ. ಇದೆಲ್ಲ ಕಾರಣದಿಂದ 1 ಕೋ.ರೂ. ಗುರಿ ಹಾಕಿಕೊಂಡಿದ್ದರೂ 60 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದೆ. ವರ್ಷಾಂತ್ಯದೊಳಗೆ 3 ಕೋ. ರೂ.ಗಳನ್ನು ಒಟ್ಟು 13,289 ಆಸ್ತಿಗಳ ಮೇಲೆ ಸಂಗ್ರಹಿಸಬೇಕಿದೆ.

ಸಂಗ್ರಹ ಕಾರ್ಯ ನಡೆದಿದೆ

ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಕಂದಾಯ ವಿಭಾಗ ಹಾಗೂ ನಾವು ಪ್ರತ್ಯೇಕ ತಂಡಗಳಾಗಿ ತೆರಳಿ ವಿನಂತಿ ಮಾಡಿ ಮುಂಗಡ ಪಾವತಿಗೆ ಶ್ರಮಿಸಿದ್ದೇವೆ. ತಂತ್ರಾಂಶದ ಸಮಸ್ಯೆ ಇದ್ದರೂ ರಜಾ ದಿನಗಳಲ್ಲೂ ಕೆಲಸ ನಿರ್ವಹಿಸಿ ತೆರಿಗೆ ಸರಕಾರಕ್ಕೆ ಸರಿಯಾಗಿ ಪಾವತಿಯಾಗುವಂತೆ ಸಿಬಂದಿ ಮಾಡಿದ್ದಾರೆ. ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.