Kota; ಡೀಸೆಲ್ ಹಣ ಕೇಳಿದಕ್ಕೆ ಮಾಲಕನಿಗೆ ಹಲ್ಲೆ; ಪ್ರಕರಣ ದಾಖಲು
Team Udayavani, Jan 10, 2024, 12:18 AM IST
ಕೋಟ: ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ಹಾಕಿಸಿಕೊಂಡಿದ್ದ ಹಣದ ಬಾಕಿ ಮೊತ್ತ ಕೇಳಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ಕೋಟದಲ್ಲಿ ಜ. 8ರಂದು ಸಂಭವಿಸಿದೆ.
ಯಡ್ತಾಡಿ ನಿವಾಸಿ ಚೇತನ್ ಕುಮಾರ್ ಎನ್ನುವವರು ಅಮಾಸೆಬೈಲ್ನಲ್ಲಿ ಪೆಟ್ರೋಲ್ ಬಂಕ್ ಅನ್ನು ನಡೆಸಿಕೊಂಡಿದ್ದು, ಅವರ ಪೆಟ್ರೋಲ್ ಬಂಕ್ನಿಂದ ಸಚಿನ್ ಎನ್ನುವಾತ 6,800 ರೂ. ಮೌಲ್ಯದ ಡೀಸೆಲ್ ಅನ್ನು ಹಾಕಿಕೊಂಡು ಹಣವನ್ನು ಮರುದಿನ ಕೊಡುತ್ತೇನೆಂದು ತಿಳಿಸಿದ್ದ. ಆದರೆ ಹಣವನ್ನು ಕೊಟ್ಟಿರುವುದಿಲ್ಲ.
ಈ ಬಗ್ಗೆ ಕರೆ ಮಾಡಿ ಹಣ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೆ„ದು, ಜೀವ ಬೆದರಿಕೆ ಹಾಕಿದ್ದ. ಈ ವಿಚಾರವನ್ನು ಪರಿಚಯಸ್ಥರ ಮೂಲಕ ರಾಜಿಯಲ್ಲಿ ಇತ್ಯರ್ಥಗೊಳಿಸಲು ಜ. 8ರಂದು ಕೋಟ ಶಾಲೆಯ ಮೈದಾನಕ್ಕೆ ಬಂದಾಗ ಸಚಿನ್ ತನ್ನ ಸಹಚರರಾದ ಶಂಕರ ಕೊಡ್ಲಾಡಿ, ನಾಗ, ಅಂಬರೀಶ್ ಅವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ.
ಗಲಾಟೆಯ ಸಂದರ್ಭ ಚಿನ್ನದ ಸರ ಕಳೆದು ಹೋಗಿದೆ ಎಂದು ಚೇತನ್ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿಕ ಸಮಸ್ಯೆ:
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಕೋಟ: ಹಾರ್ದಳ್ಳಿ ಮಂಡಳ್ಳಿ ನಿವಾಸಿ ಗೀತಾ (60) ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಜ. 7ರಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ
MLC ಚುನಾವಣೆ ಬಿಜೆಪಿ, ಎನ್ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೋಟ
ಕುಂದಾಪುರದ ವ್ಯಕ್ತಿ ಮುಂಬಯಿಯಲ್ಲಿ ಸಾವು
Byndoor ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು
MUST WATCH
ಹೊಸ ಸೇರ್ಪಡೆ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್ ಲಾರಿ; ಟ್ರಾಫಿಕ್ ಜಾಮ್
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ