Kundapura; ಹಲ್ಲೆ, ಜೀವ ಬೆದರಿಕೆ: ತಂಗಿ ವಿರುದ್ಧ ಅಕ್ಕ ದೂರು
Team Udayavani, Sep 12, 2023, 12:09 AM IST
ಕುಂದಾಪುರ: ಜಾಗ ಹಾಗೂ ಚಿನ್ನದ ತಕರಾರಿನಲ್ಲಿ ತಂಗಿಯು ಜೀವ ಬೆದರಿಕೆ ಒಡ್ಡಿರುವುದಾಗಿ ಮೂಡ್ಲಕಟ್ಟೆಯ ರಾಘವೇಂದ್ರ ಅವರ ಪತ್ನಿ ಸುಮನಾ ಗ್ರಾಮಾಂ ತರ ಠಾಣೆಗೆ ದೂರು ನೀಡಿದ್ದಾರೆ.
ಸುಮನಾ ಅಮೆರಿಕದಲ್ಲಿ ಹೊಟೇಲ್ ವ್ಯವಹಾರ ನಡೆಸಿಕೊಂಡಿ ದ್ದು, ಹಬ್ಬ ಹರಿದಿನಗಳಲ್ಲಿ ಮೂಡ್ಲ ಕಟ್ಟೆಯ ಮೂಲ ಮನೆಗೆ ಬರುತ್ತಿದ್ದರು. 2005ರಲ್ಲಿ ಕೋಣಿ ವಾಸುದೇವ ಹೆಬ್ಟಾರ್ ಅವರ 70 ಸೆಂಟ್ಸ್ ಜಾಗವನ್ನು 8 ಲಕ್ಷ ರೂ.ಗೆ ಖರೀದಿಸಿದ್ದು ಜಾಗದ ಮಾಲಕ ವಾಸುದೇವ ಹೆಬ್ಟಾರ್ ಅನಾರೋಗ್ಯದಿಂದ ಇರುವುದು ಹಾಗೂ ತಾನು ವಿದೇಶದಲ್ಲಿರುವ ಕಾರಣ ತಂಗಿ ರೋಹಿಣಿ ಹೆಸರಿಗೆ ನೋಂದಣಿ ಮಾಡಿಸಿ ಮುಂದಿನ ದಿನಗಳಲ್ಲಿ ವರ್ಗಾಯಿಸುವುದು ಎಂದು ಒಪ್ಪಂದ ಮಾಡಿಕೊಂಡಿದ್ದರು.
ಆ ಜಾಗದಲ್ಲಿ 65 ಲಕ್ಷ ರೂ.ಗಳ ಮನೆ ಕಟ್ಟಿಸಲಾಗಿತ್ತು. 2016ರಲ್ಲಿ ಚಿನ್ನದ 4 ಬಳೆ, 9 ಪವನ್ ತೂಕದ ಸರವನ್ನು ತೆಗೆದಿಡುವಂತೆ ಹಾಗೂ ರೋಹಿಣಿ ಅವರ ಪುತ್ರಿ ವಿನುತಾ ಕುಮಾರಿಗೆ ಚಿನ್ನದ 4 ಬಳೆ, 3 ಜೊತೆ ಬೆಂಡೋಲೆ, 1 ಉಂಗುರವನ್ನು ಧರಿಸಲು ಕೊಟ್ಟು ಕೇಳಿದಾಗ ವಾಪಸು ಕೊಡುವಂತೆ ತಿಳಿಸಿದ್ದರು. ಅದರಂತೆ ಇತ್ತೀಚೆಗೆ ಆಸ್ತಿ ಮತ್ತು ಚಿನ್ನವನ್ನು ಮರಳಿ ಕೇಳಿದಾಗ ಅವರು ಮರಳಿಸಿರಲಿಲ್ಲ. ಸುಮನಾ ರವಿವಾರ ಮೂಲ ಮನೆಗೆ ಬಂದಾಗ ರೋಹಿಣಿ ಮತ್ತು ಆಕೆಯ ಪತಿ ಜೀವ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ