Fruad: ಸ್ಟಾರ್ ಹೋಟೆಲ್ನಲ್ಲಿ ಪಾರ್ಟಿ ಟಿಕೆಟ್ ಕೊಡಿಸುವುದಾಗಿ ವಂಚನೆ: ಕೇಸು ದಾಖಲು
Team Udayavani, Jan 5, 2024, 2:40 PM IST
ಬೆಂಗಳೂರು: ಹೊಸ ವರ್ಷದ ಪಾರ್ಟಿಗೆ ಸ್ಟಾರ್ ಹೋಟೆಲ್ನಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್ ಕೊಡಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಪರಿಚಯಸ್ಥ ಮಹಿಳೆಗೆ 20 ಸಾವಿರ ರೂ. ಪಡೆದು ವಂಚಿಸಿದ್ದಾನೆ.
ಈ ಸಂಬಂಧ ಹೇಮಮಾಲಿನಿ ಎಂಬವರು ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸುರೇಂದ್ರ ಕುಮಾರ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಡಿ.30ರಂದು ಹೇಮಮಾಲಿನಿ, ಪರಿಚಯಸ್ಥ ಸುರೇಂದ್ರ ಕುಮಾರ್ಗೆ ಕರೆ ಮಾಡಿ ಸ್ಟಾರ್ ಹೋಟೆಲ್ನಲ್ಲಿ ಪಾರ್ಟಿ ಮಾಡಲು 10 ಟಿಕೆಟ್ ಕೊಡಿಸು ವಂತೆ ಕೇಳಿದ್ದಾರೆ. ಆಗ ಆರೋಪಿ, ಕಬ್ಬನ್ಪಾರ್ಕ್ ಬಳಿಯ ಹೋಟೆಲ್ ನಲ್ಲೇ ರಿಯಾಯಿತಿ ದರದಲ್ಲಿ ಟಿಕೆಟ್ ಕೊಡಿಸುತ್ತೇನೆಂದು ಆನ್ಲೈನ್ ಮೂಲಕ 20 ಸಾವಿರ ರೂ. ಪಡೆದುಕೊಂಡಿದ್ದಾನೆ.
ಬಳಿಕ ಹೇಮಮಾಲಿನಿ, ಆರೋಪಿ ಸೂಚಿಸಿದ ಹೋಟೆಲ್ಗೆ ಹೊಸ ವರ್ಷದ ದಿನ ಹೋಗಿ, ಸುರೇಂದ್ರ ಕುಮಾರ್ ಹೆಸರು ಹೇಳಿ ದ್ದಾರೆ. ಆದರೆ, ಹೋಟೆಲ್ ಸಿಬ್ಬಂದಿ ಆ ಹೆಸರಿನ ವ್ಯಕ್ತಿ ಪರಿಚಯವಿಲ್ಲ ಎಂದಿ ದ್ದಾರೆ ಎಂದು ಹೇಮಮಾಲಿನಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.