ಕೆರೆಯಲ್ಲಿ ಮೀನುಗಳ ಮಾರಣಹೋಮ
ಅಪಾರ್ಟ್ಮೆಂಟ್ಗಳ ಕಲುಷಿತ ನೀರು ಕೆರೆ ಸೇರ್ಪಡೆ; ಅಭಿವೃದ್ಧಿಪಡಿಸಿದ್ದ ಕನ್ನಮಂಗಲ ಕೆರೆ ಇದೀಗ ಕಲುಷಿತ
Team Udayavani, Oct 20, 2022, 1:24 PM IST
ಮಹದೇವಪುರ: ಕಲುಷಿತ ನೀರು ಕನ್ನಮಂಗಲ ಮುಳ್ಳುಕೆರೆಗೆ ಸೇರುತ್ತಿರುವ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನುಗಳು ಕೆರೆಯ ಬದಿಗೆ ಬಂದು ನಿಂತಿದ್ದು, ಕೆರೆ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ.
ಕನ್ನಮಂಗಲ ಸಮೀಪ ನಿರ್ಮಾಣವಾಗಿರುವ ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಶುದ್ಧೀಕರಣ ಮಾಡದೆ ನೇರವಾಗಿ ಕೆರೆಯನ್ನು ಸೇರುತ್ತಿರುವ ಕಾರಣ ಮೀನುಗಳು ಸಾಯುತ್ತಿವೆ.
ಕನ್ನಮಂಗಲ ಮುಳ್ಳು ಕೆರೆಯನ್ನು 2021ರಲ್ಲಿ ಅಭಿವೃದ್ಧಪಡಿಸಲಾಗಿದ್ದು, ಶುದ್ಧ ನೀರಿನಿಂದ ಕೂಡಿತ್ತು. ಆದರೆ, ಇತ್ತೀಚೆಗೆ ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಕೆರೆ ಸೇರ್ಪಡೆಯಾಗಿ ಕಲುಷಿತಗೊಂಡು ಸಾವಿರಾರು ಜಲಚರ ಸಾವನ್ನಪ್ಪಿವೆ.
ಕೆರೆಯಲ್ಲಿ ಮೀನು ಸಾಕಾಣಿಕೆಗ ಮೂರು ವರ್ಷಗಳಿಂದ ಯಾರಿಗೂ ಗುತ್ತಿಗೆ ನೀಡಿಲ್ಲ. ಕೆರೆಯಲ್ಲಿ ಮೀನುಗಳ ಹೆಚ್ಚಾಗಿದ್ದು ಕೊಳಚೆ ಮಿಶ್ರಿತ ನೀರಿನಿಂದ ಆಮ್ಲಜನಕ ಕೊರತೆಯಾಗಿ ಮೀನುಗಳು ಮರಣಹೊಂದಿವೆ ಎನ್ನಲಾಗಿದೆ.
ಅಭಿವೃದ್ಧಿ ಹೊಂದಿದ ಕೆರೆ ಇದೀಗ ಕಲುಷಿತಗೊಂಡರೂ ಮೀನುಗಾರಿಕೆ ಇಲಾಖೆಯಾಗಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ. ಕೆರೆ ಅಭಿವೃದ್ಧಿ ಪ್ರಾಧಿಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಕನ್ನಮಂಗಲ ಕೆರೆಯಲ್ಲಿ ಮೀನುಗಳು ಮರಣ ಹೊಂದಿರುವುದರಿಂದ ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ●ಚೈತ್ರಾ ಯೋಗಾನಂದ, ಗ್ರಾಪಂ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ