ಎಗ್ಗಿಲ್ಲದೆ ಸಾಗಿದೆ ಅಕ್ರಮ ಮರಳುಗಾರಿಕೆ
ಕಾನೂನು ನಿಯಮ ಲೆಕ್ಕಕ್ಕಿಲ್ಲ-ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು
Team Udayavani, Jun 2, 2020, 12:17 PM IST
ಸಾಂದರ್ಭಿಕ ಚಿತ್ರ
ಹರಿಹರ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಮರಳು ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಕೆ, ಪರ್ಮಿಟ್ ಕಡ್ಡಾಯ, ಬೋಟ್ -ಜೆಸಿಬಿ ಬಳಸುವುದು ಹಾಗೂ ರಾತ್ರಿ ವೇಳೆ ಮರಳುಗಾರಿಕೆ ನಿಷೇಧ ಇತ್ಯಾದಿ ಅಕ್ರಮ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ನಿಯಮಗಳೆನ್ನೆಲ್ಲ ಗಾಳಿಗೆ ತೂರಿ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ತಡೆಯುವವರಿಲ್ಲದಾಗಿದೆ.
ಎಲ್ಲೆಲ್ಲಿ ಅಕ್ರಮ: ನಗರದ ಹೊಸ ಭರಂಪುರ, ಮೆಟ್ಟಿಲು ಹೊಳೆ ರಸ್ತೆ, ದಾವಣಗೆರೆ ವಾಟರ್ ವಕ್ಸì ಹಿಂಭಾಗ, ನಾರಾಯಣಾಶ್ರಮ ಮುಂತಾದ ನದಿ ದಡದಲ್ಲಿ ರಾತ್ರಿಯಾಗುತ್ತಿದ್ದಂತೆ ಸೀಮೆಂಟ್ ಚೀಲಗಳಲ್ಲಿ ಮರಳು ತುಂಬಿ ಸಾಗಿಸಲಾಗುತ್ತಿದೆ. ಕೆಲ ಪ್ರಭಾವಿಗಳು ಕೈಲಾಸ ನಗರದ ನದಿ ಪಾತ್ರದಲ್ಲೆ ಟ್ರ್ಯಾಕ್ಟರ್, ಮಜಾಡಾ
ಲಾರಿ ನಿಲ್ಲಿಸಿಕೊಂಡು ಮರಳು ತುಂಬುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ. ಗ್ರಾಮೀಣ ಭಾಗದ ಹಳೇಹರ್ಲಾಪುರ, ಗುತ್ತೂರು, ಮಾದಾಪುರಹಳ್ಳ, ದೀಟೂರು
ಮುಂತಾದ ಹಲವು ಗ್ರಾಮಗಳಲ್ಲಿ ಸಂಜೆಯಾಗುತ್ತಲೆ ತೆಪ್ಪ ಮತ್ತು ರಬ್ಬರ್ ಟೂಬ್ ಗಳ ಸಹಾಯದಿಂದ ಮರಳು ತಂಬಲಾಗುತ್ತಿದೆ. ನೀರು ಕಡಿಮೆ ಇರುವುದರಿಂದ ನದಿ ಆಚೆಯ ರಾಣಿಬೆನ್ನೂರು ತಾಲೂಕಿನ ನಲವಾಗಲು, ಹಿರೇಬಿದರಿ, ಐರಣಿ, ಮಾಕನೂರು ಗ್ರಾಮ ವ್ಯಾಪ್ತಿಗೆ ಸೇರಿರುವ ಮರಳನ್ನೂ ಸಹ ಇತ್ತ ತಂದು ಸಾಗಿಸಲಾಗುತ್ತಿದೆ.
ಹೆಸರಿಗಷ್ಟೆ ಟಾಸ್ಕ್ ಪೋರ್ಸ್ : ಅಕ್ರಮ ಮರಳುಗಾರಿಕೆ ತಡೆಗಟ್ಟಲು ತಾಲೂಕಿನಲ್ಲಿರುವ 7 ಅಧಿಕಾರಿಗಳ ಪ್ರತ್ಯೇಕ 7 ತಂಡಗಳು, ಇವುಗಳ ಮೇಲುಸ್ತುವಾರಿಗೆ ತಹಶೀಲ್ದಾರರ ನೇತೃತ್ವದಲ್ಲಿರುವ ಟಾಸ್ಕ್ ಪೋರ್ಸ್ ಸಮಿತಿ ಹೆಸರಿಗಷ್ಟೆ ಎಂಬಂತಾಗಿದೆ. ನೂತನ ಗ್ರಾಮಾಂತರ ಡಿವೈಎಸ್ಪಿ ಇತ್ತೀಚೆಗೆ ರಾತ್ರಿ ವೇಳೆ ಏಕಾಏಕಿ ಹರ್ಲಾಪುರ ಸಮೀಪದ ನದಿ ದಡಕ್ಕೆ ಬಂದು ಆಕ್ರಮ ಸಾಗಣೆಯಲ್ಲಿ ತೊಡಗಿದ ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದು ಹೊರತುಪಡಿಸಿದರೆ ಅಕ್ರಮ ತಡೆಯು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಕಟ್ಟಡ ಕಾಮಗಾರಿ ಕೈಗೊಂಡಿರುವ ಸ್ಥಳೀಯರು ಮರಳಿಗಾಗಿ ಪರದಾಡುತ್ತಿದ್ದಾರೆ,
ಪ್ರಭಾವಿಗಳು ಮಾತ್ರ ಅಕ್ಕಪಕ್ಕದ ಜಿಲ್ಲೆಗಳಿಗೆ ಹಗಲಿರುಳು ಮರಳು ಸಾಗಿಸಿ, ದುರ್ಲಾಭ ಪಡೆಯುತ್ತಿದ್ದಾರೆ. ಮೇಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಂದ ವರದಿ ಸಂಗ್ರಹಿಸದೇ, ಖುದ್ದಾಗಿ ನದಿಪಾತ್ರಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಗಮನಿಸಬೇಕು. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಾತ್ರಿ ವೇಳೆ ಲಾರಿಗಳಲ್ಲಿ ಸಾಗಾಟ
ತಾಲೂಕಿನಲ್ಲಿ ರಾತ್ರಿಯಿಡಿ ಬೃಹತ್ ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಪ್ರಸ್ತುತ ಲಾಕ್ಡೌನ್ ನಿಯಮಗಳಲ್ಲೂ ರಾತ್ರಿ ವೇಳೆ ಇಂತಹ ಚಟುವಟಿಕೆ ನಿಷೇಧಿಸಲ್ಪಟ್ಟಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾತ್ರಿಯಿಡೀ ಪೈಪೋಟಿಗೆ ಬಿದ್ದರಂತೆ ಓಡುವ ಲಾರಿಗಳ ಸದ್ದಿಗೆ ಗ್ರಾಮಸ್ಥರು ನಿದ್ದೆಯಿಲ್ಲದೆ ಜಾಗರಣೆ ಮಾಡಬೇಕಾಗಿದೆ. ರಸ್ತೆ ಅಕ್ಕಪಕ್ಕದ ವಾಸದ ಮನೆಗಳು, ಜಮೀನಿನ ಬೆಳೆಗಳು ಧೂಳುಮಯವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ