ಕಿಮ್ಸ್‌ ಗೆ ಅರವಳಿಕೆ ಕಾರ್ಯಸ್ಥಾನ ಯಂತ್ರಗಳ ಹಸ್ತಾಂತರ

ರೋಟರಿ ಕ್ಲಬ್‌ ಸದಸ್ಯರು ಕಿಮ್ಸ್‌ಗೆ ನಿರಂತರ ನೆರವು:ನಿರ್ದೇಶಕ ಡಾ| ಅಂಟರತಾನಿ ಶ್ಲಾಘನೆ

Team Udayavani, Jun 28, 2022, 12:07 PM IST

7

ಹುಬ್ಬಳ್ಳಿ: ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವಿದ್ಯಾನಗರವು ದಿ ರೋಟರಿ ಫೌಂಡೇಶನ್ಸ್‌ ಗ್ಲೋಬಲ್‌ ಗ್ರ್ಯಾಂಟ್‌ ಪ್ರೊಜೆಕ್ಟ್ ಅಡಿ ರೋಟರಿ ಡಿಸ್ಟ್ರಿಕ್ಟ್ ಕ್ಯಾಲಿಪೋರ್ನಿಯಾ ಹಾಗೂ ಸ್ಥಳೀಯ ರೋಟರಿ ಸದಸ್ಯರ ಧನಸಹಾಯದಿಂದ ಪಡೆದ ಅಂದಾಜು 28ಲಕ್ಷ ರೂ. ವೆಚ್ಚದ ಎರಡು ಅನಸ್ತೇಸಿಯಾ ವರ್ಕ್‌ಸ್ಟೇಶನ್ಸ್‌(ಅರವಳಿಕೆ ಕಾರ್ಯಸ್ಥಾನ)ಯಂತ್ರಗಳನ್ನು ಸೋಮವಾರ ಕಿಮ್ಸ್‌ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಕಿಮ್ಸ್‌ನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್‌ ಗೌರೀಶ ಎಂ. ಧೋಂಡ ಹಾಗೂ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವಿದ್ಯಾನಗರ ಅಧ್ಯಕ್ಷೆ ಡಾ|ಮಹಿಮಾ ಎಂ.ದಂಡ ಅವರು ಕಿಮ್ಸ್‌ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ ಅವರಿಗೆ ಅರಿವಳಿಕೆ ಕಾರ್ಯಸ್ಥಾನ ಯಂತ್ರಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಡಾ| ಅಂಟರತಾನಿ, ರೋಟರಿ ಕ್ಲಬ್‌ ಸದಸ್ಯರು ಕಿಮ್ಸ್‌ಗೆ ನಿರಂತರ ನೆರವು ನೀಡುತ್ತ ಬಂದಿದ್ದರಿಂದ ಆಸ್ಪತ್ರೆಯ ಮೂಲ ಸೌಲಭ್ಯವು ಸಾಕಷ್ಟು ಸುಧಾರಣೆಗೊಂಡಿದೆ. ಕ್ಲಬ್‌ನವರು ಕೋವಿಡ್‌-19ರ ಸಂದರ್ಭದಲ್ಲಿ ಬಹಳಷ್ಟು ವೈದ್ಯಕೀಯ ಉಪಕರಣಗಳನ್ನು ಕೊಟ್ಟಿದ್ದಾರೆ. ಈಗ ಕೊಟ್ಟಿರುವ ಅನಸ್ತೇಸಿಯಾ ವರ್ಕ್‌ಸ್ಟೇಶನ್‌ ಅತ್ಯಾಧುನಿಕವಾಗಿದ್ದು, ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಲಿದೆ. ಶಸ್ತ್ರಚಿಕಿತ್ಸೆ ಕೊಠಡಿ ಹಾಗೂ ಸೂಪರ್‌ ಸ್ಪೆಶಾಲಿಟಿ ವಿಭಾಗದಲ್ಲಿ ಇದು ಬಳಕೆಯಾಗಲಿದೆ. ಇವನ್ನು ಕಾಲಕಾಲಕ್ಕೆ ಸೂಕ್ತ ನಿರ್ವಹಣೆ ಮಾಡಿ 10-15 ವರ್ಷಗಳ ಕಾಲ ಬಳಸುವ ಹಾಗೂ ದಾನಿಗಳು ಕೊಟ್ಟಿರುವ ಉಪಕರಣಗಳನ್ನೆಲ್ಲ ಸಮರ್ಪಕವಾಗಿ ಸುಮಾರು 10 ವರ್ಷಗಳ ಕಾಲ ಬಳಸುವ ಉದ್ದೇಶ ಹೊಂದಿದ್ದೇವೆ. ಕಳೆದ 3 ವರ್ಷಗಳಲ್ಲಿ ಕಿಮ್ಸ್‌ 20ಕ್ಕೂ ಹೆಚ್ಚು ಮಾಡೂಲರ್‌ ಒಟಿಸಿ ಹೊಂದಿದೆ. ನಿಮ್ಮೆಲ್ಲರ ಸಹಕಾರ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದರು.

ಅತಿಥಿಯಾಗಿ ಮಾತನಾಡಿದ ರೋಟರಿ ಡಿಸ್ಟ್ರಿಕ್ಟ್ ಗವರ್ನರ್‌ ಗೌರೀಶ ಧೋಂಡ, ರೋಟರಿಯು ಕಿಮ್ಸ್‌ನ ಒಂದು ಭಾಗವಾಗಿದ್ದು, ದಾನಿಗಳ ನೆರವಿನಿಂದ ಸಾಮಾಜಿಕ ಸೇವಾ ಕಾರ್ಯ ಮಾಡುತ್ತ ಬಂದಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ವತ್ಛ ಶೌಚಾಲಯ ನಿರ್ಮಾಣ, ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟವರ ಪತ್ನಿಯರಿಗೆ ಗೋವಾದಲ್ಲಿ 20 ಇ-ಆಟೋರಿಕ್ಷಾಗಳನ್ನು ಶೇ.3ರ ದರದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಕರ್ನಾಟಕ-ಮಹಾರಾಷ್ಟ್ರದಲ್ಲೂ ಅನುಷ್ಠಾನ ಗೊಳಿಸಲಾಗುವುದು. ಕಿಮ್ಸ್‌ಗೆ ಮುಂದೆಯೂ ಅವಶ್ಯಕ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ರೋಟರಿಯ ಮಾಜಿ ಡಿಸ್ಟ್ರಿಕ್ಟ್ ಗವರ್ನರ್‌ ಮಹೇಶ ರಾಯ್ಕರ, ಲೆಕ್ಕ ಪರಿಶೋಧಕ ಡಾ|ಎನ್‌ .ಎ. ಚರಂತಿಮಠ, ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ|ಅರುಣಕುಮಾರ ಸಿ., ವೈದ್ಯಕೀಯ ಉಪ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಪ್ರಾಚಾರ್ಯ ಡಾ|ಈಶ್ವರ ಹೊಸಮನಿ, ಡಾ|ಮಾಧುರಿ ಕುರಡಿ, ಪ್ರತಿಮಾ ಧೋಂಡ, ಕ್ಲಬ್‌ನ ಕಾರ್ಯದರ್ಶಿ ಜಯಶ್ರೀ ಜಾಧವ ಹಾಗೂ ಸದಸ್ಯರು ಮೊದಲಾದವರಿದ್ದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವಿದ್ಯಾನಗರ ವತಿಯಿಂದ ಇಬ್ಬರು ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಮೂವರು ವಿದ್ಯಾರ್ಥಿನಿಯರಿಗೆ ಬೈಸಿಕಲ್‌, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ ಇಬ್ಬರಿಗೆ ಎಐ ವಿಷನ್‌ ಸ್ಮಾರ್ಟ್‌ಗ್ಲಾಸೆಸ್‌ ಕೊಡುಗೆಯಾಗಿ ನೀಡಲಾಯಿತು. ಕ್ಲಬ್‌ನ ಅಧ್ಯಕ್ಷೆ ಡಾ|ಮಹಿಮಾ ಎಂ.ದಂಡ ಸ್ವಾಗತಿಸಿದರು. ಸಂಜಯ ಶೆಟ್ಟಿ ವಂದಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.