ಮನೆ ಕಳ್ಳನ ಬಂಧನ; 12 ಲಕ್ಷ ರೂ. ಮೌಲ್ಯದ ಬಂಗಾರ ವಶ
Team Udayavani, Jun 5, 2022, 2:35 PM IST
ಕಲಬುರಗಿ: ನಗರದ ಹಲವಾರು ಕಡೆಗಳಲ್ಲಿ ಮನೆ ಕಳ್ಳತನ ಮಾಡಿ ಪರಾರಿಯಾಗಿ ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್ ಕಳ್ಳನನ್ನು ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸಾವಳಗಿ ಗ್ರಾಮದ ಲಾಲ್ಯಾ ಅಂಜಿಕ್ಯಾ ಕಾಳೆ (25) ಎಂದು ಗುರುತಿಸಲಾಗಿದೆ. ಒಟ್ಟು 10 ಪ್ರಕರಣಗಳಲ್ಲಿ ಬೇಕಾದ ಕಳ್ಳ ಈತನಾಗಿದ್ದ.
ನಗರದ ಮಾನಸ ರೆಸಿಡೆನ್ಸಿ, ಕುಬೇರ್ ಲೇಔಟ್, ಸಿದ್ಧಗಂಗಾ ನಗರ, ಪೂಜಾ ಕಾಲೋನಿ, ಲಕ್ಷ್ಮೀ ನಗರ, ಎಂ.ಜಿ.ಕಾಲೋನಿ, ಆಜಾದಪುರ, ಎಸ್. ಎಂ.ಲೇಔಟ್ ಕೋಟನೂರು ಪ್ರದೇಶ ದಲ್ಲಿನ ಮನೆಗಳನ್ನು ಕಳ್ಳತನ ಮಾಡಿದ್ದ. ಈತನಿಂದ 12,47,500ರೂ. ಮೌಲ್ಯದ 265ಗ್ರಾಂ ಬಂಗಾರ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸಿಪಿ ಅಡೂರು ಶ್ರೀನಿವಾಸಲು ಮಾರ್ಗದರ್ಶನದಂತೆ ಸಿ ಉಪ ವಿಭಾಗದ ಎಸಿಪಿ ಜೆ.ಎಚ್. ಇನಾಂದಾರ ನೇತೃತ್ವದಲ್ಲಿ ಸಿಪಿಐ ಅರುಣ ಮುರುಗುಂಡಿ, ವಿವಿ ಠಾಣೆಯ ರಾಜು ಟಾಕಳೆ, ಪ್ರಭಾಕರ, ವಿಶ್ವನಾಥ, ಪ್ರಕಾಶ, ಶಶಿಕಾಂತ, ಮಂಜುನಾಥ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್