ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Feb 13, 2022, 3:42 PM IST
ಶಹಾಬಾದ: ಡಾ| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ನ್ಯಾಯಾಧೀಶರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಸಂವಿಧಾನ ಸರಂಕ್ಷಣಾ ಸಮಿತಿ ವತಿಯಿಂದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಹಣಮಂತರಾವ್ ಪಾಟೀಲಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂವಿಧಾನ ಸರಂಕ್ಷಣಾ ಸಮಿತಿ ಹಿರಿಯ ಮುಖಂಡ ಮಲ್ಲೇಶಿ ಸಜ್ಜನ್, ರಾಯಚೂರು ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿ ಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಸರಂಕ್ಷಣಾ ಸಮಿತಿ ಅಧ್ಯಕ್ಷ ಹರೀಶ ಕರಣಿಕ್, ಕಾರ್ಯಧ್ಯಕ್ಷ ಶಿವಕುಮಾರ ತಳವಾರ, ಉಪಾಧ್ಯಕ್ಷ ವಿಕ್ರಮ ಪ್ರಸಾದ, ಪ್ರಧಾನ ಕಾರ್ಯದರ್ಶಿ ಪ್ರವೀಣ ರಾಮಕೋಟೆ, ಕಾರ್ಯದರ್ಶಿ ಕಿರಣಕುಮಾರ ಚವ್ಹಾಣ ಘಟನೆ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಸ್ನೇಹಲ್ ಜಾಯಿ, ಬಸವರಾಜ ಮಯೂರ, ಪ್ರವೀಣಕುಮಾರ ರಾಜನ್, ಸುರೇಶ ಮೆಂಗನ, ಭರತ್ ಧನ್ನಾ, ಅನಿಲ ಚವ್ಹಾಣ, ಅನಿಲ ದೊಡ್ಡಮನಿ, ವೆಂಕಟೇಶ ಚವ್ಹಾಣ, ನರೇಂದ್ರ ದಂಡಗುಲಕರ್, ಜಗನ್ನಾಥ ಎಸ್. ಎಚ್, ಶಿವನಾಗ, ಆಕಾಶ ಹಿರೇಮಠ, ಶಿವರಾಜ ನಾಟೇಕಾರ, ಜಯರಾಜ, ಪಾರುಷ ಸರ್ಜಾಪುರ, ರಾಕೇಶ ಶಿರೂರಕರ್, ಗುರುಕೃಷ್ಣ, ರವಿಕುಮಾರ, ಚಂದು, ಉತ್ತಪ್ಪ,ಯಲ್ಲಾಲಿಂಗ ಗೋಳಾ(ಕೆ), ರೋಹಿತ ದಂಡಗುಲಕರ್ಮ ಆಕಾಶ ಪಾವನೂರ, ಕೃಷ್ಣ ರ್ಯಾಪನೂರ, ಶ್ರೀನಿವಾಸ ತಳವಾರ, ಶಂಕರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು