ಕಾಡು ಹಂದಿ ಕಾಟ; ಸೀರೆ ಕಟ್ಟಿ ಬೆಳೆ ರಕ್ಷಣೆ
Team Udayavani, Jan 16, 2022, 12:25 PM IST
ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಜೋಳದ ಬೆಳೆಯು ಉತ್ತಮವಾಗಿ ಸಮೃದ್ಧಿಯಾಗಿ ಬೆಳೆದಿದ್ದು, ಕಾಡುಹಂದಿಗಳು ಜೋಳದ ಬೆಳೆ ತಿಂದು ಹಾಳು ಮಾಡುತ್ತಿರುವುದರಿಂದ ರೈತರು ಹಳೆಯ ಸೀರೆಗಳನ್ನು ಕಟ್ಟಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾಗಾಇದಲಾಯಿ ಗ್ರಾಮದ ರೈತ ಉದಯಕುಮಾರ ಪಾಟೀಲ ತಿಳಿಸಿದ್ದಾರೆ.
ತಾಲೂಕಿನ ನಾಗಾಇದಲಾಯಿ, ತುಮಕುಂಟಾ, ಕುಸರಂಪಳ್ಳಿ, ಕೊಳ್ಳುರ, ಪಟಪಳ್ಳಿ, ಎಂಪಳ್ಳಿ, ಚಂದ್ರಂಪಳ್ಳಿ, ಐನೋಳಿ, ಶಿಕಾರ ಮೋತಕಪಳ್ಳಿ, ಸಾಲೇಬೀರನಳ್ಳಿ ಗ್ರಾಮಗಳಲ್ಲಿ ಜೋಳದ ಬೆಳೆ ಉತ್ತಮವಾಗಿ ಬೆಳೆದಿದ್ದು, ಕೆಲವು ಕಡೆ ತೆನೆ ಬಿಟ್ಟಿವೆ.
ಜೋಳದ ಬೆಳೆ ಸಮೃದ್ಧಿಯಾಗಿ ತೆನೆಗಳಿಂದ ಕೂಡಿದ ಜೋಳದ ಬೆಳೆ ನಳನಳಿಸುತ್ತಿವೆ. ಆದರೆ ಹಂದಿಗಳು ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿರುವುದರಿಂದ ಸಾಕಷ್ಟು ಹಣ ಖರ್ಚು ಮಾಡಿ ಬೆಳೆದ ಬೆಳೆ ಹಾಳಾಗುತ್ತಿರುವುದರಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ.
ಕಾಡು ಹಂದಿಗಳ ಹಿಂಡು ಹೆಚ್ಚಾಗಿವೆ. ಜೋಳ ಮತ್ತು ತೊಗರಿ ಹೊಲಗಳಲ್ಲಿ ಕಾಡು ಹಂದಿಗಳು ಬೀಡು ಬಿಟ್ಟಿವೆ. ರೈತರು ಹೊಲಗಳಿಗೆ ಹೋಗಲು ಆತಂಕಪಡಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ