Hunsur: ಬೇಟೆಗಾಗಿ ಹೊಂಚು ಹಾಕುತ್ತಿರುವ ವ್ಯಾಘ್ರ
Team Udayavani, Nov 2, 2023, 12:00 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕೆರೆ ಬಳಿಯ ಮರದ ಮೇಲೆ ಹುಲಿಯೊಂದು ಬೇಟೆಗಾಗಿ ಹೊಂಚು ಹಾಕುತ್ತಿರುವ ದೃಶ್ಯವನ್ನು ಸಫಾರಿ ಸಿಬ್ಬಂದಿಗಳು ಮೊಬೈಲ್ ಮೂಲಕ ಸೆರೆ ಹಿಡಿದಿದ್ದರೆ. ಹುಲಿಯನ್ನು ಕಣ್ಣಾರೆ ಕಂಡ ಸಂತಸ ಪ್ರವಾಸಿಗರದ್ದಾಗಿತ್ತು.
ನಾಗರಹೊಳೆ ಉದ್ಯಾನವನದಲ್ಲಿ ಬುಧವಾರ ಸಂಜೆ ಜೆಎಲ್ಆರ್ ವಾಹನದಲ್ಲಿ ಸಫಾರಿಗೆ ತೆರಳಿದ್ದ ವನ್ಯಪ್ರೀಯರಿಗೆ ನಾಗರಹೊಳೆ ವಲಯದ ಕುಂತೂರು ಕೆರೆಯಲ್ಲಿ ನೀರು ಕುಡಿಯಲು ಬಂದಿದ್ದ ಪ್ರಾಣಿಯನ್ನು ಬೇಟೆಯಾಡಲು ಕೆರೆ ಬಳಿಯ ಮರದ ರೆಂಬೆಯೊಂದರ ಮೇಲೆ ನಿಂತು ಹೊಂಚು ಹಾಕುತ್ತಿರುವ ದೃಶ್ಯವನ್ನು ಜೆಎಲ್ ಆರ್ ವಾಹನ ಚಾಲಕ ಹರೀಶ್ ಮೊಬೈಲ್ ನಲ್ಲಿ ಸೆರೆ ಹಿಡಿದು ಉದಯವಾಣಿಗೆ ಕಳುಸಿಕೊಟ್ಟಿದ್ದಾರೆ.
ಮರದ ಕೊಂಬೆ ಮೇಲೆ ನಿಂತಿದ್ದ ವ್ಯಾಘ್ರನನ್ನು ಕಂಡ ವನ್ಯಜೀವಿ ಪ್ರವಾಸಿಗರು ದಿಲ್ ಖುಷ್ ಆಗಿ ತೆರಳಿದರು.