ಸೋಂಕಿತನ ಸಂಪರ್ಕಿತರಿಗೆ ನೆಗೆಟಿವ್
ಜಿಲ್ಲಾಧಿಕಾರಿ, ಎಸ್ಪಿಯಿಂದ ಚೆಕ್ಪೋಸ್ಟ್ ಪರಿಶೀಲನೆ
Team Udayavani, May 6, 2020, 12:24 PM IST
ಭೇರ್ಯ ಉಪಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ಪೋಸ್ಟ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪರಿಶೀಲಿಸಿದರು.
ಭೇರ್ಯ: ಕೇರಳದ ವೈಯನಾಡು ಜಿಲ್ಲೆಯಿಂದ ಶುಂಠಿ ಖರೀದಿಗೆ ಬಂದಿದ್ದ ಲಾರಿ ಚಾಲಕನಿಗೆ ಕೋವಿಡ್ ಪಾಸಿಟಿವ್ ಹಿನ್ನಲೆಯಲ್ಲಿ ಕೆ.ಆರ್. ನಗರದ ಸಾಲೆಕೊಪ್ಪಲಿನ ಮೂವರು, ಕೇರಳ ಮೂಲದ ವ್ಯಕ್ತಿ ಸೇರಿ 6 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಪಾಸಿಟಿವ್ ಬಂದಿಲ್ಲ ಎಂದು ಡೀಸಿ ಅಭಿರಾಂ ಶಂಕರ್ ತಿಳಿಸಿದರು.
ಭೇರ್ಯ ಉಪ ಠಾಣೆ ವ್ಯಾಪ್ತಿಯ ಜಿಲ್ಲಾ ಗಡಿ ಬಂದ್ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರೊಂದಿಗೆ ಭೇಟಿ ನೀಡಿ, ಎಲ್ಲಾ ಚೆಕ್ಪೊಸ್ಟ್ಗಳ ಪರಿಶೀಲಿಸಿ, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 6 ಮಂದಿಗೆ ನೆಗಟಿವ್ ಎಂದು ವರದಿ ಬಂದಿದೆ. ಮೈಸೂರು ಜಿಲ್ಲೆಗೆ ಬರುವ 4 ಕಡೆ ಬಂದ್ ಮಾಡ ಲಾಗಿದೆ.
ಮಂಡ್ಯ, ಹಾಸನ, ಚಾಮರಾಜ ನಗರ ಜಿಲ್ಲೆಗಳಿಂದ ಬರುವವರು ಮುಖ್ಯ ಹೆದ್ದಾರಿಯಲ್ಲಿ ಬರಬೇಕು. ಸಂಪರ್ಕ ರಸ್ತೆ ಮುಚ್ಚಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಿ.ಬಿ.ರಿಷ್ಯಂತ್, ತಹಶೀಲ್ದಾರ್ ಮಂಜುಳಾ, ಇಒ ರಮೇಶ್, ಆರೋಗ್ಯಾಧಿಕಾರಿ ಡಾ.ಮಹೇಂದ್ರಪ್ಪ, ವೃತ್ತ ನಿರೀಕ್ಷಕ ಪಿ.ಕೆ.ರಾಜು, ಪಿಎಸ್ಐ ಚೇತನ್, ಉಪ ತಹಶೀಲ್ದಾರ್ ಷಣ್ಮುಖ, ಕೃಷ್ಣಮೂರ್ತಿ, ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಿಗರಾದ ರವೀಂದ್ರ, ರಶ್ಮಿ, ಪಿಡಿಒ ಮಂಜುನಾಥ್ ಇದ್ದರು.