ನಲಸೋಪರ ಶ್ರೀ ಅಯ್ಯಪ ಭಕ್ತ ವೃಂದ : ವಾರ್ಷಿಕ ಮಹಾಪೂಜೆ, ಅರಸಿನ ಕುಂಕುಮ
Team Udayavani, Jan 26, 2021, 3:42 PM IST
ಮುಂಬಯಿ : ನಲಸೋಪರ ಶ್ರೀ ಅಯ್ಯಪ್ಪ ಭಕ್ತವೃಂದ ಇದರ 24ನೇ ವಾರ್ಷಿಕ ಮಹಾಪೂಜೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ್ ಎನ್. ರೈ ಮತ್ತು ಅಧ್ಯಕ್ಷ ಸದಾಶಿವ ಕರ್ಕೇರ ಗುರುಸ್ವಾಮಿ
ಅವರ ನೇತೃತ್ವದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಹಾಗಣಪತಿ ದೇವರಿಗೆ ಪೂಜೆ ನಡೆದ ಬಳಿಕ ಶ್ರೀ ಅಯ್ಯಪ್ಪ ಭಜನ ಮಂಡಳಿಯ ಭುವಾಜಿಗಳಾದ ದಯಾನಂದ ಕುಂದರ್ ಮತ್ತು ಸುಭಾಶ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಮಂಡಳಿಯ ಮಕ್ಕಳು ಹಾಗೂ ಮಹಿಳಾ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಸಮಿತಿಯ ಮಾಲಾಧಾರಿಗಳಿಂದ ಶರಣು ಘೋಷ, ಪಡಿಪೂಜೆ ನಡೆದು ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮಿಗೆ ಕರ್ಪೂರಾರತಿ ನಡೆಯಿತು.
ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ಜರಗಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಾ ಶ್ರೀನಿವಾಸ್ ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ದೇವಕಿ ಸದಾಶಿವ ಕರ್ಕೇರ, ಕಾರ್ಯದರ್ಶಿ ಹರಿಣಾಕ್ಷೀ
ಹರೀಶ್ ಪೂಜಾರಿ, ಸದಸ್ಯೆ ಪಾವನಾ ವೇಣುಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಸ್ಯೆಯರಾದ ಸೌಮ್ಯಾ ಬಂಗೇರ, ಗೀತಾ ಪುತ್ರನ್, ಜ್ಯೋತಿ ಪೂಜಾರಿ, ಸುನೀತಾ ಕೋಟ್ಯಾನ್, ಪ್ರಮೀಳಾ ಪೂಜಾರಿ, ಸರಿತಾ ಪೂಜಾರಿ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ:ವಾಲ್ಕೇಶ್ವರ ಕಾಶೀ ಮಠದಲ್ಲಿಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣತಿಥಿ ಆಚರಣೆ
ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಎನ್.ರೈ, ಅಧ್ಯಕ್ಷ ಸದಾಶಿವ ಕರ್ಕೇರ, ಗುರುಸ್ವಾಮಿ ಪದ್ಮನಾಭ ಪೂಜಾರಿ, ಹಿರಿಯರಾದ ಮೋಹನ್ ಬಿ. ಶೆಟ್ಟಿ, ಕಮಲಾ ಆರ್. ಬಂಗೇರ ಇವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ
ಮೋಹನ್ ವಿ. ಶೆಟ್ಟಿ, ಗಂಗಾಧರ ಜೆ. ಪೂಜಾರಿ, ಭಾರತ್ ಬ್ಯಾಂಕ್ ವಸಾಯಿ ಶಾಖೆಯ ಪ್ರಬಂಧಕಿ ಪ್ರಭಾವತಿ ಜೆ. ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ನಲಸೋಪರ ವಿರಾರ್ ಇದರ ಗೌರವ ಕಾರ್ಯಾಧ್ಯಕ್ಷ ಜಗದೀಶ್ ಆರ್. ಅಮೀನ್, ವಸಾಯಿ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್, ಕಾರ್ಯದರ್ಶಿ ಲೋಹಿತಾಕ್ಷ ಅಂಚನ್, ಕೋಶಾಧಿಕಾರಿ ನಾಗೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಸದಸ್ಯರಾದ ರವೀಂದ್ರ ಮೂಜಾರಿ ದಂಪತಿ, ವಿರಾರ್-ನಲಸೋಪರ ಕರ್ನಾಟಕ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಲಯನ್ ಕೃಷ್ಣಯ್ಯ ಹೆಗ್ಡೆ ಅಡಂದಾಲು ದಂಪತಿ, ಕೋಶಾಧಿಕಾರಿ ಗೋಪಾಲ್ ಕೋಟ್ಯಾನ್, ಅಶೋಕ್ ಎಂ. ಕೋಟ್ಯಾನ್, ಸುಧಾಕರ ಪೂಜಾರಿ, ಶ್ರೀ ಗುರುನಾರಾಯಣ ಸಮಿತಿ ವಸಾಯಿ ಗೌರವ ಕಾರ್ಯದರ್ಶಿ ಒ. ಪಿ. ಪೂಜಾರಿ, ವಸಾಯಿ ಕರ್ನಾಟಕ
ಸಂಸ್ಥೆಯ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ, ವಿರಾರ್ ನಲಸೋಪರ ಕರ್ನಾಟಕ ಸಂಸ್ಥೆಯ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಶುಭಾ ಸತೀಶ್ ಶೆಟ್ಟಿ, ಉದ್ಯಮಿ ದಯಾನಂದ ಬಿ. ಶೆಟ್ಟಿ, ಪ್ರಸನ್ನ ಜೆ. ಶೆಟ್ಟಿ, ಸಂತೋಷ್ ಭಿಮನ್, ಪ್ರಕಾಶ್ ಕೋಟ್ಯಾನ್, ಶೇಖರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯರಾದ ಪ್ರೀತಮ್ ಪೂಜಾರಿ, ಸಂತೋಷ್ ಸ್ವಾಮಿ, ಶೈಲೇಶ್ ಸ್ವಾಮಿ, ಸತೀಶ್ ಎಸ್. ಕರ್ಕೇರ, ಶೇಖರ್ ಪೂಜಾರಿ, ಸುನಿಲ್ ಪುತ್ರನ್, ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರು, ಭಜನ ಮಂಡಳಿಯ
ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್