ಲಾಡ್ಜ್ ಕೊಠಡಿಯಲ್ಲಿ ತಡರಾತ್ರಿ ವ್ಯಾಪಿಸಿದ ಬೆಂಕಿ- ಮಲಗಿದಲ್ಲಿಯೇ ವ್ಯಕ್ತಿ ಸಜೀವ ದಹನ
Team Udayavani, Nov 24, 2023, 12:35 AM IST
ಮಂಗಳೂರು: ನಗರದ ಲಾಡ್ಜ್ವೊಂದರ ಕೊಠಡಿಯೊಳಗೆ ವ್ಯಕ್ತಿಯೋರ್ವನ ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಬುಧವಾರ ತಡರಾತ್ರಿ ಪತ್ತೆಯಾಗಿದೆ.
ಬಿಕರ್ನಕಟ್ಟೆ ನಿವಾಸಿ ಯಶ್ರಾಜ್ ಸುವರ್ಣ (43) ಮೃತಪಟ್ಟವರು. ರಾತ್ರಿ 12 ಗಂಟೆ ಸುಮಾರಿಗೆ ಕೊಠಡಿಯೊಳಗೆ ಹೊಗೆ ಬರುತ್ತಿರುವುದನ್ನು ಕಂಡ ಲಾಡ್ಜ್ ಸಿಬಂದಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ತಿಳಿಸಿದ್ದರು. ಕೊಠಡಿಯ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು. ಬಾಗಿಲು ತೆರೆದು ಒಳಗೆ ಹೋದಾಗ ಯಶ್ರಾಜ್ ಮೃತಪಟ್ಟಿದ್ದರು.
ಯಶ್ರಾಜ್ ಲಾಡ್ಜ್ನ 2ನೇ ಕೊಠಡಿಯಲ್ಲಿ ಒಬ್ಬರೇ ಉಳಿದುಕೊಂಡಿದ್ದರು. ಬುಧವಾರ ರಾತ್ರಿ ಊಟ ಮಾಡಿದ್ದರು. ಬೆಡ್, ಬಟ್ಟೆ ಬರೆಗಳು ಸೇರಿದಂತೆ ಕೊಠಡಿಯೊಳಗಿನ ಪರಿಕರಗಳು ಸುಟ್ಟು ಹೋಗಿವೆ. ಯಶ್ರಾಜ್ ದೇಹ ಬೆಡ್ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಅರೆ ಸುಟ್ಟು ಹೋಗಿತ್ತು.
ಬೆಂಕಿ ಹೊತ್ತಿಕೊಂಡದ್ದು ಗೊತ್ತೇ ಇರಲಿಲ್ಲ?
ಯಶ್ರಾಜ್ ಮದ್ಯಸೇವನೆ ಮಾಡಿದ್ದರು. ಸಿಗರೇಟ್ ಕೂಡ ಸೇದುತ್ತಿದ್ದರು. ಬುಧವಾರ ಕೂಡ ಮದ್ಯ ಸೇವಿಸಿದ್ದರೆನ್ನಲಾಗಿದೆ. ಮೃತದೇಹ ಮಲಗಿದ ಸ್ಥಿತಿಯಲ್ಲೇ ಇತ್ತು. ಹಾಗಾಗಿ ಅವರಿಗೆ ಬೆಂಕಿ ಹೊತ್ತಿಕೊಂಡಿರುವುದು ತಿಳಿದಿರುವ ಸಾಧ್ಯತೆಗಳು ಕಡಿಮೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರೆ? ಎಂಬುದು ಕೂಡ ಹೇಳಲಾಗದು. ಸಿಗರೇಟ್ನಿಂದ ಅಥವಾ ಶಾರ್ಟ್ ಸರ್ಕ್ನೂಟ್ನಿಂದ ಬೆಂಕಿಯುಂಟಾಗಿ ಅದು ಕೊಠಡಿ ಆವರಿಸಿರುವ ಸಾಧ್ಯತೆ ಇದೆ. ಬೆಂಕಿ ಹೇಗೆ ಹೊತ್ತಿಕೊಂಡಿದೆ, ಅವರು ಹೇಗೆ ಮೃತಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 ದಿನಗಳಿಂದ ವಾಸ್ತವ್ಯ
ಯಶ್ರಾಜ್ ಬಿಕರ್ನಕಟ್ಟೆಯ ಅಪಾರ್ಟ್ಮೆಂಟ್ನಲ್ಲಿ ತಾಯಿ, ಪತ್ನಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದರು. ನ. 15ರಿಂದ ಬೆಂದೂರ್ವೆಲ್ನ ಲಾಡ್ಜ್ಗೆ ಬಂದು ಒಬ್ಬರೇ ಉಳಿದುಕೊಂಡಿದ್ದರು. ಬುಧವಾರ ರಾತ್ರಿ ಊಟ ಮಾಡಿದ್ದರು. ಈ ಹಿಂದೊಮ್ಮೆ ಇವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡಿಕೊಂಡಿದ್ದು, ಅನಂತರ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೆಲವು ಸಮಯದ ಹಿಂದೆ ಪತ್ನಿ ತವರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ