Kollegala: ಅಂಬರ್ಗ್ರಿಸ್: ಕರಾವಳಿಯ ನಾಲ್ವರ ಸೆರೆ
Team Udayavani, Feb 9, 2024, 11:03 PM IST
ಕೊಳ್ಳೇಗಾಲ: ಹದಿನಾರು ಕೆ.ಜಿ.ಗಳಷ್ಟು ತಿಮಿಂಗಿಲ ವಾಂತಿಯನ್ನು (ಅಂಬರ್ಗ್ರಿಸ್) ಸಾಗಿಸುತ್ತಿದ್ದ ನಾಲ್ವರನ್ನು ನಗರದ ಅರಣ್ಯ ಸಂಚಾರ ದಳದ ಪೊಲೀಸರು ಶುಕ್ರವಾರ ತಾಲೂಕಿನ ಸತ್ತೇಗಾಲದಲ್ಲಿ ಬಂಧಿಸಿದ್ದಾರೆ.
ಉಡುಪಿ ಮೂಲದ ಇಮಿ¤ಯಾಜ್ ಅಬ್ದುಲ್, ರೆಹಮಾನ್, ಮಂಗಳೂರಿನ ಚಿತ್ರಾಂಜಲಿ ನಗರದ ಚೇತನ್ ಕುಮಾರ್ ಹಾಗೂ ಸುರತ್ಕಲ್ನ ವೆಂಕಟೇಶ್ ಬಂಧಿತರು. ಅವರಿಂದ 16 ಕೆ.ಜಿ. ತಿಮಿಂಗಲ ವಾಂತಿ, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.