ಪತಿ, ಅತ್ತೆಯ ಕೊಂದು ಫ್ರಿಡ್ಜ್ ನಲ್ಲಿಟ್ಟಳು; ಪತ್ನಿಯಿಂದಲೇ ಕಿಡಿಗೇಡಿತನ
ಚಿರಾಪುಂಜಿಯಲ್ಲಿ ದೇಹ ಎಸೆಯಲು ಚಿಂತನೆ
Team Udayavani, Feb 21, 2023, 7:35 AM IST
ಗುವಾಹಟಿ : ಪ್ರಿಯಕರನಿಂದಲೇ ನವದೆಹಲಿಯಲ್ಲಿ ಶ್ರದ್ಧಾ ವಾಕರ್, ನಿಕ್ಕಿ ಯಾದವ್ ಎನ್ನುವ ಯುವತಿಯರ ಹತ್ಯೆ ನಡೆದಿರುವ ಬೆನ್ನಲ್ಲೇ, ಇದಕ್ಕೆ ತದ್ವಿರುದ್ಧವಾಗಿ, ಅಸ್ಸಾಂನಲ್ಲಿ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಅತ್ತೆಯನ್ನೇ ಹತ್ಯೆಗೈದು, ದೇಹ ತುಂಡರಿಸಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟಿದ್ದಾಳೆ!.
ನೂನ್ಮತಿ ನಿವಾಸಿಯಾಗಿರುವ ವಂದನಾ ಕಲಿತಾ, ತನ್ನ ಪ್ರಿಯಕರನ ಜತೆ ಸೇರಿ ಪತಿ ಅಮರಜ್ಯೋತಿ ದೇ ಹಾಗೂ ಅತ್ತೆ ಶಂಕರಿ ದೇ ಎಂಬವರನ್ನು ಕೊಂದುಹಾಕಿದ್ದಾರೆ. ಬಳಿಕ ಅವರ ದೇಹಗಳನ್ನು ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದು, 3 ದಿನಗಳ ಬಳಿಕ ಪ್ರಿಯಕರನ ಜತೆ ಸೇರಿ ದೇಹವನ್ನು ವಿಲೇವಾರಿ ಮಾಡಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಯ ಮೇಘಾಲಯದ ಚಿರಾಪುಂಜಿಯಲ್ಲಿ ದೇಹಗಳನ್ನು ವಿಲೇವಾರಿ ಮಾಡಲು ವಂದನಾ ಹಾಗೂ ಆಕೆಯ ಪ್ರಿಯಕರ ತೆರಳಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ಎಂದು ಬಿಂಬಿಸಲು ಯತ್ನ:
ಇದೇ ವೇಳೆ, ನವದೆಹಲಿಯಲ್ಲಿ ಪ್ರಿಯಕರನಿಂದಲೇ ಹತ್ಯೆಗೊಳಗಾದ ನಿಕ್ಕಿಯಾದವ್ ಪ್ರಕರಣದಲ್ಲಿ ಪೊಲೀಸರು ಮತ್ತೊಂದು ವಿಚಾರ ಬಹಿರಂಗ ಪಡಿಸಿದ್ದು, ನಿಕ್ಕಿ ಹತ್ಯೆಯನ್ನು ಕಾರು ಅಪಘಾತ ಎಂದು ಬಿಂಬಿಸಲು ಸಾಹಿಲ್ ಗೆಹ್ಲೋಟ್ ಯೋಜಿಸಿದ್ದ ಎಂದಿದ್ದಾರೆ. ತನಿಖೆಯಲ್ಲಿ ವಿಚಾರ ಬಾಯಿಬಿಟ್ಟಿರುವ ಸಾಹಿಲ್, ಕಾರಿನಲ್ಲಿರುವಾಗಲೇ ಆಕೆಯನ್ನು ತಳ್ಳಿ, ಅಪಫಾತವೆಂದು ಬಿಂಬಿಸಲು ಪ್ರಯತ್ನ ಪಟ್ಟೆ ಆದರೆ ಸಾಧ್ಯವಾಗಲಿಲ್ಲ. ಬಳಿಕ ತನ್ನ ಸಂಬಂಧಿಯಾಗಿದ್ದ ಪೊಲೀಸ್ ಪೇದೆ ನವೀನ್, ಹೆಣವನ್ನು ಫ್ರಿಡ್ಜ್ ನಲ್ಲಿಡುವಂತೆ ಸಲಹೆ ನೀಡಿದ ಎಂದು ಸಾಹಿಲ್ ಒಪ್ಪಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ