ಬ್ಯಾಡರಹಳ್ಳಿ: ಪತ್ನಿ ಕೊಂದು ಹೃದಯಾಘಾತ ಸಾವು ಎಂದ ಪತಿ
ವರದಕ್ಷಿಣೆ ತರಲಿಲ್ಲವೆಂದು ವೇಲ್ನಿಂದ ಕುತ್ತಿಗೆಗೆ ಬಿಗಿದು ಹತ್ಯೆ, ಪ್ರೀತಿಸಿ ವಿವಾಹವಾಗಿದ್ದ ಪತಿಯ ಕಿರುಕುಳ
Team Udayavani, Mar 27, 2022, 10:38 AM IST
ಬೆಂಗಳೂರು: ಪ್ರೀತಿಸಿ ಮದುವೆಯಾದ ಪತಿಯನ್ನು ತವರು ಮನೆಯಿಂದ ವರದಕ್ಷಿಣೆ ತರಲಿಲ್ಲವೆಂದು ಪತಿಯೇ ವೇಲ್ನಿಂದ ಹತ್ಯೆಗೈದು, ಬಳಿಕ ಹೃದಯಘಾತವೆಂದು ಬಿಂಬಿಸಿದ ಘಟನೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಕೃತ್ಯ ಎಸಗಿದ ಪತಿಯನ್ನು ಬಂಧಿಸಲಾಗಿದೆ.
ಬ್ಯಾಡರಹಳ್ಳಿ ಮುನೇಶ್ವರ ನಗರ ನಿವಾಸಿ ಸೌಮ್ಯ (25) ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಲೆಗೈ ದ ಪತಿ ಯೋಗೇಶ್ (25) ಬಂಧಿತ. ನಾಗಮಂಗಲದ ಸಮೀಪದ ಬೆಳ್ಳೂರು ಕ್ರಾಸ್ನ ಕಾರು ಚಾಲಕ ಯೋಗೇಶ್ ಹಾಗೂ ಮಂಚೇನಹಳ್ಳಿಯ ಸೌಮ್ಯ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದ. 3 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು. ದಂಪತಿ ಮುನೇಶ್ವರ ನಗರದಲ್ಲಿ ವಾಸವಿದ್ದರು. ಯೋಗೇಶ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಸೌಮ್ಯ ಮನೆಯಲ್ಲೇ ಇರುತ್ತಿದ್ದರು. ಯೋಗೇಶ್ ತನ್ನ ಪತ್ನಿಗೆ ಪದೇ ಪದೆ ತವರು ಮನೆಯಿಂದ ಹಣ ಹಾಗೂ ಚಿನ್ನಾಭರಣ ತರುವಂತೆ ಪೀಡಿಸುತ್ತಿದ್ದ. ಅದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಕಲಹ ನಡೆಯುತ್ತಿತ್ತು. ಅದನ್ನು ಗಮನಿಸುತ್ತಿದ್ದ ಸೌಮ್ಯ ಪೋಷಕರು ಕೂಡ ಎರಡು ಬಾರಿ ಯೋಗೇಶ್ಗೆ ಹಣ ನೀಡಿದ್ದರು. ಅದು ಸಾಲುವುದಿಲ್ಲ ಎಂದು ಪದೇ ಪದೆ ಪತ್ನಿಗೆ ಕಿರುಕುಳ ನೀಡುತ್ತಿದ್ದ.
2 ಲಕ್ಷ ರೂ. ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಅದರಿಂದ ಸೌಮ್ಯ ಮನನೊಂದಿದ್ದರು. ಶುಕ್ರವಾರ ಸಂಜೆ ಹಣದ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಆಕ್ರೋಶಗೊಂಡ ಪತಿ ವೇಲ್ನಿಂದ ಪತ್ನಿಯ ಕೊರಳು ಬಿಗಿದು ಕೊಲೆಗೈದಿದ್ದಾನೆ. ಆಕೆ ಮೃತಪಟ್ಟಿರುವು ದನ್ನು ದೃಢಪಡಿಸಿಕೊಂಡ ಬಳಿಕ, ಗಾಬರಿಗೊಂಡು ಹೃದಯಘಾತದಿಂದ ಮೃತಪಟ್ಟಿದ್ದಾಳೆ ಎಂದು ಕಥೆ ಸೃಷ್ಟಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಸ್ಥಳಕ್ಕೆ ಬಂದ ಪೊಲೀಸರು ಯೋಗೇಶ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಹೇಳಿಕೆ ನೀಡಿದ್ದಾನೆ. ಮೃತ ಸೌಮ್ಯ ತಾಯಿ ಜಯಮ್ಮ ನೀಡಿದ ದೂರಿನನ್ವಯ ಎಫ್ಐಆರ್ ದಾಖಸಲಾಗಿದೆ ಎಂದು ಪೊಲೀಸರು ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ