Gangolli ರಿಕ್ಷಾಗೆ ಕಾರು ಢಿಕ್ಕಿ ; ಚಾಲಕನಿಗೆ ಗಾಯ
Team Udayavani, Apr 17, 2024, 10:12 PM IST
ಗಂಗೊಳ್ಳಿ: ಮರವಂತೆ ಸರಕಾರಿ ಕಚೇರಿ ಸಮೀಪದ ಯುಟರ್ನ್ ಬಳಿ ರಿಕ್ಷಾಗೆ ಕಾರು ಢಿಕ್ಕಿಯಾಗಿ, ರಿಕ್ಷಾ ಚಾಲಕ ರಘು ಗಾಯಗೊಂಡ ಘಟನೆ ಎ. 15 ರಂದು ಸಂಭವಿಸಿದೆ.ಗಾಯಗೊಂಡ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಗಂಗೊಳ್ಳಿ: ಮುಳ್ಳಿಕಟ್ಟೆ ಜಂಕ್ಷನ್ನಿಂದ ಸ್ವಲ್ಪ ಮುಂದಕ್ಕೆ ಲಾರಿಗೆ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ನವೀನ ಅಯ್ಯಂಗಾರ್, ಕಾರಿನಲ್ಲಿದ್ದ ಜಯಂತ್ ಗಾಯಗೊಂಡ ಘಟನೆ ಎ. 16ರಂದು ರಾತ್ರಿ ಸಂಭವಿಸಿದೆ.
ಗಾಯಗೊಂಡ ಇಬ್ಬರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.