Chandrayaan-3: ಇಸ್ರೋ ವಿಜ್ಞಾನಿಗಳ ವಿಶೇಷ ಪ್ರಯೋಗ ಯಶಸ್ವಿ
ಭೂಕಕ್ಷೆಗೆ ಬಂದ ಪ್ರೊಪಲ್ಶನ್ ಮಾಡ್ನೂಲ್
Team Udayavani, Dec 6, 2023, 12:28 AM IST
ಹೈದರಾಬಾದ್: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಪ್ರೊಪಲ್ಶನ್ ಮಾಡ್ನೂಲ್ ಅನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ತರಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಇದೊಂದು ವಿಶೇಷ ಪ್ರಯೋಗ ಎಂದು ವಿಜ್ಞಾನಿಗಳು ವರ್ಣಿಸಿದ್ದಾರೆ.
“ಚಂದ್ರಯಾನ-3 ಯೋಜನೆಯ ಗುರಿಯನ್ನು ಯಶ್ವಸಿಯಾಗಿ ಮುಟ್ಟಿದ್ದೇವೆ. ಅಲ್ಲದೇ ವಿಜ್ಞಾನಿಗಳು ನಡೆಸಿದ ಪ್ರಯೋಗದಲ್ಲಿ ಚಂದ್ರಯಾನ-3 ನೌಕೆಯೊಂದಿಗೆ ಕಳುಹಿಸಲ್ಪಟ್ಟಿದ್ದ ಪ್ರೊಪಲ್ಶನ್ ಮಾಡ್ನೂಲ್ ಅನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ತರಲಾಗಿದೆ. ಆರ್ಬಿಟ್ ರೈಸಿಂಗ್ ಮ್ಯಾನೆವರ್ ಮತ್ತು ಟ್ರಾನ್ಸ್ ಅರ್ಥ್ ಇಂಜೆಕ್ಷನ್ ಮ್ಯಾನೆವರ್ಗಳು ಪ್ರೊಪಲ್ಶನ್ ಮಾಡ್ನೂಲ್ ಅನ್ನು ಭೂಮಿಯ ಕಕ್ಷೆಗೆ ತಂದು ನಿಲ್ಲಿಸಿವೆ’ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.
ಈ ವರ್ಷದ ಜು. 14ರಂದು ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3ರ ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತ ಎಲ್ವಿಎಂ3 ಎಂ4 ಉಡಾವಣ ವಾಹನ ಯಶಸ್ವಿ ಉಡ್ಡಯನ ನಡೆಸಿತ್ತು. ಆ.17ರಂದು ಪ್ರೊಪಲ್ಶನ್ ಮಾಡ್ನೂಲ್ನಿಂದ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಆ.23ರಂದು ಶಿಶಿರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ “ವಿಕ್ರಮ್’ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಮುಖ ಮೈಲುಗಲ್ಲು ಸ್ಥಾಪಿಸಿತು. ಜತೆಗೆ ಯೋಜನೆಯಂತೆ ನಿಗದಿತ ಅವಧಿಯಲ್ಲಿ ಶಿಶಿರನ ವೈಜ್ಞಾನಿಕ ಅಧ್ಯಯನ ನಡೆಸಿತು.
ಚಂದ್ರನಲ್ಲಿಗೆ ಶೀಘ್ರ ಖಾಸಗಿ ನೌಕೆ
ವಾಷಿಂಗ್ಟನ್: ಭಾರತದ ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ವಿಶ್ವದ ಚಿತ್ತವೆಲ್ಲ ಚಂದ್ರನತ್ತ ನೆಟ್ಟಿದ್ದು, ಇದೀಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಖಾಸಗಿ ಉಪಕ್ರಮದ ಭಾಗವಾಗಿರುವ ನೌಕೆಯೊಂದು ಚಂದ್ರನನ್ನು ತಲುಪಲು ಸಜ್ಜುಗೊಂಡಿದೆ. ಅಲ್ಲದೇ ಈ ಮೂಲಕ ಚಂದ್ರನಲ್ಲಿಗೆ ತಲುಪಿದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಎಂಬ ಗರಿಯನ್ನೂ ಮುಡಿಗೇರಿಸಿಕೊಳ್ಳಲು ಸಿದ್ದವಾಗಿದೆ. ನಾಸಾದ ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್ ಉಪಕ್ರಮದ ಭಾಗವಾಗಿ ಪೆರಿಗ್ರಿನ್ ಎನ್ನುವ ಖಾಸಗಿ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಲು ಯೋಜಿಸಲಾಗಿದೆ. ಇದಕ್ಕಾಗಿ ಡಿ.24ರಂದು ಉಡಾವಣೆ ದಿನಾಂಕವನ್ನೂ ನಿಗದಿ ಮಾಡಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ 2024ರ ಜನವರಿ 25ರಂದು ಲ್ಯಾಂಡರ್ ಚಂದ್ರನ ಮೇಲಿಳಿಯಲಿದೆ. ಈ ಮೂಲಕ ಚಂದ್ರನಲ್ಲಿಗೆ ತಲುಪಿದ ಖಾಸಗಿ ಕ್ಷೇತ್ರದ ಮೊದಲ ಲ್ಯಾಂಡರ್ ಎಂಬ ಇತಿಹಾಸ ಸೃಷ್ಟಿಸುವುದರ ಜತೆಗೆ ಪರಿಗ್ರಿನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ರೇಸ್ ಸೃಷ್ಟಿ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ