“ರಥ ಚಲಿಸುವ ಧರ್ಮ ಸಭಾ ಮಂಟಪ’ : ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಬಡಗ ಬಸದಿ ರಥೋತ್ಸವ ಧಾರ್ಮಿಕ ಸಭೆ :
Team Udayavani, Feb 28, 2021, 4:10 AM IST
ಮೂಡುಬಿದಿರೆ: ಬಡಗ ಬಸದಿ ರಥೋತ್ಸವವು ಮೂಡುಬಿದಿರೆ ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ ಜರಗಿತು.
ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವ ಚನದಲ್ಲಿ, “ಬಸದಿ ಸಮವಸರಣದ ಸ್ಥಿರ ಪ್ರತೀಕ; ರಥ ಚಲಿಸುವ ಧರ್ಮ ಸಭಾ ಮಂಟಪ. ಭಗವಂತನನ್ನು ರಥದಲ್ಲಿ ಇರಿಸಿ ಉತ್ತಮ ವಿಚಾರಗಳೆಂಬ ಹಗ್ಗ ವನ್ನು ಎಳೆದು ಮೋಕ್ಷ ಮಾರ್ಗದಲ್ಲಿ ಮುನ್ನಡೆಯಲು ರಥೋತ್ಸವ ಪ್ರೇರಣೆ ನೀಡುತ್ತದೆ ಎಂದು ನುಡಿದರು.
ಡಿ. ಸುರೇಂದ್ರ ಕುಮಾರ್ ಧರ್ಮಸ್ಥಳ ಅವರು ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕೋವಿಡ್ ಸಂದರ್ಭ ಜೈನ ಸಂಘಟ ನೆಗಳು ವಿವಿಧೆಡೆ ಆಹಾರ ಸಾಮಗ್ರಿ ವಿತರಣೆ ಸಹಿತ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ಗಮನ ಸೆಳೆವ ಕಾರ್ಯ ಮಾಡಿವೆ ಎಂದು ಅವರು ಶ್ಲಾಘಿಸಿದರು.
ಡಿ. ಸುರೇಂದ್ರ ಕುಮಾರ್, ಪಟ್ಟಾಭಿ ಷೇಕದ ರಜತ ಸಂಭ್ರಮದಲ್ಲಿರುವ ಅಳದಂ ಗಡಿ ಅರಸರಾದ ಡಾ| ಪದ್ಮಪ್ರಸಾದ್ ಅಜಿಲ ಅವರನ್ನು ಸ್ವಾಮೀಜಿಯವರು “ಪರಂಪರಾ ಭೂಷಣ’ ಬಿರುದು ನೀಡಿ ಹರಸಿದರು.
ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಪ್ರವೀಣ್ ಇಂದ್ರ ವೇಣೂರು, ಸುರೇಶ ದೇವಾಡಿಗ, ಮಕ್ಕಿಮನೆ ಸುದೇಶ್, ವೀರೇಂದ್ರ ಕಂಬ್ಳಿ ಅವರನ್ನು ಸ್ವಾಮೀಜಿ ಅಭಿನಂದನ ಪತ್ರ ನೀಡಿ ಹರಸಿದರು.
ಸಮ್ಮಾನ
ತುಳು ನಾಮಫಲಕ ವಿನ್ಯಾಸಕಾರ ಜಿ.ವಿ.ಎಸ್. ಉಳ್ಳಾಲ ಹಾಗೂ ದಾನಿ ರಾಜೇಶ್ ಆಳ್ವ ಅವರನ್ನು ಸ್ವಾಮೀಜಿ ಅಭಿನಂದಿಸಿ ಹರಸಿದರು.
ಮಾಜಿ ಸಚಿವ ಅಭಯಚಂದ್ರ, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಬೆಟೆRàರಿ, ಆದರ್ಶ್ ಕೊಂಡೆಮನೆತನ ಹಾಗೂ ಭರತ್ ಇಂದ್ರ, ಉಪಸ್ಥಿತರಿದ್ದರುಪ್ರಭಾತ್ ಬಲಾ°ಡು ನಿರೂಪಿಸಿದರು. ನೇಮಿರಾಜ್ ವಂದಿಸಿದರು.
ನೃತ್ಯ ವೈವಿಧ್ಯ
ಧವಲತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಮಕ್ಕಿ ಮನೆ ಬಳಗದ 60 ಜನ ಮಕ್ಕಳ ತಂಡದ ಭಾರತೀಯ ನೃತ್ಯ ವೈವಿ ಧ್ಯಮಯ ಕಾರ್ಯಕ್ರಮ ನೆರವೇರಿತು.
ಉತ್ಸವ 1008 ಭ| ಚಂದ್ರನಾಥ ಸ್ವಾಮಿಗೆ ಶ್ರೀ ಮಠದ ವತಿಯಿಂದ 108 ಕಲಶ ಅಭಿಷೇಕ, ಶ್ರೀ ಬಲಿ ಸರ್ವಾಹ್ನ ಯಕ್ಷ ವಿಹಾರ ಉತ್ಸವ ಮಹಾ ಮಂಗಳ.
ತುಳು ಲಿಪಿ ನಾಮಫಲಕ ಅನಾವರಣ
ರಾಜೇಶ್ ಆಳ್ವ, ತುಳು ವರ್ಲ್ಡ್ ನೀಡಿರುವ, “ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ, ಮೂಲ ಸಂಘ, ಕುಂದ ಕುಂದ ಅಮ್ನಾಯ ಸ್ಥಾಪನೆ ಜಗದ್ಗುರು ಅದ್ಯಶ್ರೀ ಚಾರುಕೀರ್ತಿ 1221 ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸಂಸ್ಥಾನ’ ಎಂದು ತುಳು ಲಿಪಿಯಲ್ಲಿ ಬರೆಯಲಾದ ನಾಮ ಫಲಕವನ್ನು ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅನಾವರಣ ಗೊಳಿಸಿ, ಮೆರವಣಿಗೆಯಲ್ಲಿ ಬಡಗ ಬಸದಿಯ ವರೆಗೆ ಒಯ್ದು ರಥೋತ್ಸವ ಧಾರ್ಮಿಕ ಸಭೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…