ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ


Team Udayavani, May 4, 2022, 8:10 AM IST

ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ

ಪುಣೆ: ಈ ಸಲ ತಂಡದ ಹಣೆಬರಹ ಬದಲಾದಂತಿದೆ ಎಂಬ ರೀತಿಯಲ್ಲಿ ಆಟ ಆರಂಭಿಸಿ, ಈಗ ಸೋಲಿನೊಂದಿಗೆ ಗಾಢ ನಂಟು ಬೆಳೆಸಿರುವ ಆರ್‌ಸಿಬಿ ಬುಧವಾರದ ಮಹತ್ವದ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಇಲ್ಲಿ ಗೆದ್ದು, ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರೆ ಡು ಪ್ಲೆಸಿಸ್‌ ಬಳಗದ ಪ್ಲೇ ಆಫ್ ಮೇಲೆ ಒಂದು ಹಂತದ ತನಕ ನಿರೀಕ್ಷೆ ಇರಿಸಿಕೊಳ್ಳಬಹುದು. ಸದ್ಯ ಹತ್ತರಲ್ಲಿ 5 ಪಂದ್ಯಗಳನ್ನಷ್ಟೇ ಜಯಿಸಿರುವ ಆರ್‌ಸಿಬಿ ಉಳೆದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಜಯಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ.

ಚೆನ್ನೈ ತಂಡದ್ದು ಇದಕ್ಕೆ ತದ್ವಿರುದ್ಧ ಕೇಸ್‌. ಅದು ಆರಂಭದಲ್ಲಿ ಸತತವಾಗಿ ಸೋತು, ಇನ್ನೇನು ಹೊರಬೀಳಲಿದೆ ಎನ್ನುವಾಗಲೇ ಗೆಲುವಿನ ಲಯ ಕಾಣಲಾರಂಭಿಸಿದೆ. ಮಹೇಂದ್ರ ಸಿಂಗ್‌ ಧೋನಿಗೆ ಮರಳಿ ನಾಯಕತ್ವ ಲಭಿಸಿದ ಬಳಿಕ ತಂಡದ ಚಹರೆ ಹಾಗೂ ಆಟದ ರೀತಿಯೆರಡೂ ಬದಲಾಗಿದೆ. ಎರಡರಲ್ಲೂ ಧನಾತ್ಮಕ ಸಂಗತಿಗಳೇ ಗೋಚರಿಸುತ್ತಿವೆ.

ಆದರೂ ಚೆನ್ನೈ ಮುಂದಿರುವ ಸವಾಲು ಸುಲಭದ್ದಲ್ಲ. ಅದು 9 ಪಂದ್ಯಗಳಲ್ಲಿ ಗೆದ್ದದ್ದು 3 ಮಾತ್ರ. ಉಳಿದ ಐದೂ ಪಂದ್ಯಗಳನ್ನು ಗೆದ್ದು, ರನ್‌ರೇಟ್‌ ಸುಧಾರಿಸಿಕೊಂಡರೆ 4ನೇ ಸ್ಥಾನಕ್ಕೆ ಪೈಪೋಟಿ ನೀಡಬಹುದು. ಆದರೂ ಇದು ಖಾತ್ರಿಯೇನಲ್ಲ. ಆದರೆ ಉಳಿದ ತಂಡಗಳ ಮುನ್ನಡೆಗೆ ಅಡ್ಡಗಾಲಿಕ್ಕಬಹುದು. ಚೆನ್ನೈಯಿಂದ ಇಂಥ ಸ್ಥಿತಿ ಎದುರಿಸುತ್ತಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು!

ಆರ್‌ಸಿಬಿ ಸಾಧನೆ ಸಾಲದು
ಆರ್‌ಸಿಬಿಯ ಆರಂಭ ಹೇಗೆಯೇ ಇರಲಿ, ಈ 10 ಪಂದ್ಯಗಳ ಒಟ್ಟು ಸಾಧನೆಯನ್ನು ಗಮನಿಸುವಾಗ ಕರ್ನಾಟಕದ ಫ್ರಾಂಚೈಸಿಯ ಪ್ರದರ್ಶನ ಏನೂ ಸಾಲದು. ಈವರೆಗೆ ತಂಡದಿಂದ ದಾಖಲಾದದ್ದು 6 ಅರ್ಧ ಶತಕ ಮಾತ್ರ. ಇದರಲ್ಲಿ ಎರಡನ್ನು ನಾಯಕ ಡು ಪ್ಲೆಸಿಸ್‌ ಅವರೇ ಹೊಡೆದಿದ್ದಾರೆ. ಆದರೀಗ ಅವರೂ ಬೇಗನೇ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಹೀಗಾಗಿ ಉಳಿದ ಬ್ಯಾಟರ್‌ಗಳಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಸಾಕಷ್ಟು ಪರದಾಡಿದ ಬಳಿಕ ವಿರಾಟ್‌ ಕೊಹ್ಲಿ ಕಳೆದ ಪಂದ್ಯದಲ್ಲಿ ಐವತ್ತರ ಗಡಿ ದಾಟಿದರು. ಇದಕ್ಕಿಂತ ಉತ್ತಮ ಮಟ್ಟದ ಪ್ರದರ್ಶನವನ್ನು ಅವರಿಂದ ತಂಡ ಬಯಸುತ್ತದೆ. ಯುವ ಆಟಗಾರ ರಜತ್‌ ಪಾಟಿದಾರ್‌ ಓಕೆ. ಆದರೆ ಸ್ಥಿರ ಪ್ರದರ್ಶನ ಅಗತ್ಯ. ದಿನೇಶ್‌ ಕಾರ್ತಿಕ್‌ ಅವರ ಅಬ್ಬರದ ಆಟ ಈಗ ಗೋಚರಿಸುತ್ತಿಲ್ಲ. ಮ್ಯಾಕ್ಸ್‌ವೆಲ್‌ ಕೂಡ ಮಂಕಾಗಿದ್ದಾರೆ. ಇವರಿಬ್ಬರು ಸಿಡಿದು ನಿಂತರೆ ಆರ್‌ಸಿಬಿಯನ್ನು ತಡೆಯುವುದು ಕಷ್ಟ.

ಆರ್‌ಸಿಬಿಯ ಬೌಲಿಂಗ್‌ ಯೂನಿಟ್‌ನಲ್ಲೂ ಸಾಕಷ್ಟು ದೌರ್ಬಲ್ಯಗಳಿವೆ. ಸಿರಾಜ್‌ ಯಾವುದೇ ಪರಿಣಾಮ ಬೀರದಿರುವುದು, ಹರ್ಷಲ್‌ ಪಟೇಲ್‌ ಡೆತ್‌ ಓವರ್‌ಗಳಲ್ಲಿ ಕ್ಲಿಕ್‌ ಆಗದಿರುವುದು ತಂಡದ ಪ್ರಮುಖ ಸಮಸ್ಯೆ.

ಧೋನಿಯೇ ತಂಡದ ಸ್ಫೂರ್ತಿ
ಧೋನಿ ಮರಳಿ ತಂಡದ ಚುಕ್ಕಾಣಿ ಹಿಡಿದದ್ದೇ ಚೆನ್ನೈ ತಂಡಕ್ಕೊಂದು ಸ್ಫೂರ್ತಿ. ಹಾಗೆಯೇ ಕಳೆದ ಋತುವಿನ ಬ್ಯಾಟಿಂಗ್‌ ಹೀರೋ ಋತುರಾಜ್‌ ಗಾಯಕ್ವಾಡ್‌ ಫಾರ್ಮ್ ಕಂಡುಕೊಂಡಿರುವುದೊಂದು ಶುಭ ಸೂಚನೆ. ಡೇವನ್‌ ಕಾನ್ವೆ ಕೂಡ ಭರವಸೆ ಮೂಡಿಸಿದ್ದಾರೆ. ಆದರೂ ಬ್ಯಾಟಿಂಗ್‌ ವಿಭಾಗದಲ್ಲಿ ಫಾರ್ಮ್ನಲ್ಲಿಲ್ಲದ ಆಟಗಾರ ಸಂಖ್ಯೆಯೇ ದೊಡ್ಡದಿದೆ. ನಾಯಕತ್ವದ ಒತ್ತಡದಿಂದ ಮುಕ್ತರಾದ ರವೀಂದ್ರ ಜಡೇಜ ಫಾರ್ಮ್ಗೆ ಮರಳಿಯಾರೇ ಎಂಬುದು ದೊಡ್ಡ ನಿರೀಕ್ಷೆ.

ತಂಡದ ಬೌಲಿಂಗ್‌ ಘಾತಕವೇನಲ್ಲ. ಮುಕೇಶ್‌ ಚೌಧರಿ ಮೋಡಿಗೈಯುತ್ತಿದ್ದಾರೆ. ಮಹೀಶ್‌ ತೀಕ್ಷಣ ಪರಾÌಗಿಲ್ಲ. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.

ಆರ್‌ಸಿಬಿ ವಿರುದ್ಧವೇ ಮೊದಲ ಜಯ
ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ, ಈ ಋತುವಿನ ಮೊದಲ ಜಯ ಸಾಧಿಸಿದ್ದೇ ಆರ್‌ಸಿಬಿ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ. ಎ. 12ರಂದು ನವೀ ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ 23 ರನ್ನುಗಳ ಗೆಲುವು ಕಂಡಿತ್ತು.

ರಾಬಿನ್‌ ಉತ್ತಪ್ಪ (88) ಮತ್ತು ಶಿವಂ ದುಬೆ (ಅಜೇಯ 95) ಬ್ಯಾಟಿಂಗ್‌ ಶೌರ್ಯದಿಂದ ಚೆನ್ನೈ 4ಕ್ಕೆ 216 ರನ್‌ ರಾಶಿ ಹಾಕಿತು. ಆರ್‌ಸಿಬಿ 9 ವಿಕೆಟಿಗೆ 193ರ ತನಕ ಬಂದು ಶರಣಾಯಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ, ಒಂದೂ ಅರ್ಧ ಶತಕ ದಾಖಲಿಸದ ಹೊರತೂ ಆರ್‌ಸಿಬಿ ಇಷ್ಟೊಂದು ರನ್‌ ಗಳಿಸಿದ್ದೇ ಅಚ್ಚರಿಯಾಗಿ ಕಂಡಿತು. 41 ರನ್‌ ಮಾಡಿದ ಶಬಾಜ್‌ ಅಹ್ಮದ್‌ ಅವರದೇ ಗರಿಷ್ಠ ಗಳಿಕೆಯಾಗಿತ್ತು.ಈ ಸೋಲನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಸೇಡು ತೀರಿಸಿಕೊಂಡೀತೇ ರಾಯಲ್‌ ಚಾಲೆಂಜರ್?

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.