Crime: ಓವರ್ ಡೋಸ್ ಸಿರಪ್ ಕುಡಿಸಿ ಮಗುವಿನ ಹತ್ಯೆಗೆ ಸಂಚು?
ಸಿಇಒ ಸುಚನಾ ಸೇಠ್ ಪ್ರಕರಣದಲ್ಲಿ ಹೊಸ ಬೆಳವಣಿಗೆ
Team Udayavani, Jan 11, 2024, 1:30 AM IST
ಪಣಜಿ: ಹೆತ್ತ ಮಗುವನ್ನೇ ಕೊಂದಿರುವ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ನವೋದ್ಯಮ ಸಂಸ್ಥೆಯ ಸಿಇಒ ಸುಚನಾ ಸೇಠ್ ಮಗುವನ್ನು ಕೊಲ್ಲುವ ಮುನ್ನವೇ ತೀವ್ರ ಪ್ರಮಾಣದ ಕೆಮ್ಮಿನ ಸಿರಪ್ ಕುಡಿಸಿರುವ ಸಾಧ್ಯತೆಗಳಿದ್ದು,ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಾದಲ್ಲಿ ಮಗುವನ್ನು ಮಹಿಳೆ ಹತ್ಯೆ ಮಾಡಿದ್ದಾಳೆ ಎನ್ನಲಾಗಿರುವ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಕೆಮ್ಮಿನ ಸಿರಪ್ನ 2 ಖಾಲಿ ಬಾಟಲಿಗಳು ಪತ್ತೆಯಾಗಿವೆ. ಆ ಪೈಕಿ ಒಂದನ್ನು ಆಕೆ ಅಪಾರ್ಟ್ಮೆಂಟ್ಗೆ ತೆರಳುವಾಗಲೇ ಕೊಂಡೊಯ್ದಿದ್ದರು. ಮತ್ತೂಂದು ಬಾಟಲಿಯನ್ನು ಸಿಬಂದಿ ಬಳಿ ಕೇಳಿ ತರಿಸಿಕೊಂಡಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೈ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಈ ಹಿನ್ನೆಲೆಯಲ್ಲಿ ಮಗುವನ್ನು ಮೊದಲೇ ಪ್ರಜ್ಞೆ ತಪ್ಪಿಸಲು ಓವರ್ ಡೋಸ್ ಸಿರಪ್ ನೀಡಿ ರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿರಪ್ ಬಾಟಲಿಯನ್ನು ಮೊದಲೇ ಕೊಂಡೊ ಯ್ದಿರುವ ಹಿನ್ನೆಲೆಯಲ್ಲಿ ಮಗುವಿನ
ಹತ್ಯೆಗೆ ಮೊದಲೇ ಸಂಚು ರೂಪಿಸಲಾಗಿತ್ತೇ ಎಂಬ ಶಂಕೆಯೂ ಮೂಡಿದ್ದು, ಕೃತ್ಯದ ಹಿಂದಿನ ಆಕೆಯ ಉದ್ದೇಶ ಮತ್ತು ಮನಃಸ್ಥಿತಿಯನ್ನು ಅರಿಯಲು ಸುಚನಾಳನ್ನು ಮಾನಸಿಕ ಪರೀಕ್ಷೆಗೂ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!