ಚಂದ್ರನಗರ: ಅಕ್ರಮ ಕಸಾಯಿಖಾನೆಗೆ ದಾಳಿ; ಓರ್ವ ವಶಕ್ಕೆ, ಮೂವರು ಪರಾರಿ
Team Udayavani, Jun 13, 2022, 1:28 AM IST
ಶಿರ್ವ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೂರು ಚಂದ್ರನಗರದ ಬಳಿ ದನ ಕಡಿದು ಮಾಂಸ ಮಾಡುತ್ತಿದ್ದ ವೇಳೆ ಅಕ್ರಮ ಕಸಾಯಿಖಾನೆಗೆ ಜೂ. 12ರ ಮುಂಜಾನೆ 1.30ಕ್ಕೆ ಶಿರ್ವ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಕಳತ್ತೂರು ಸೂರ್ಯನಗರ ನಿವಾಸಿ ಸಂಶುದ್ದೀನ್(53) ಬಂಧಿತ ಆರೋಪಿ. ಚಂದ್ರನಗರ ನಿವಾಸಿ ಅಬೂಬಕ್ಕರ್, ಕಳತ್ತೂರು ಪೈಯಾರು ನಿವಾಸಿ ನಜೀರ್ ಅವರ ಪುತ್ರ ಆಶೀರ್ ಮತ್ತು ಉಮರಬ್ಬನ ಪುತ್ರ ಅಶ್ರಫ್ ಪರಾರಿಯಾಗಿದ್ದಾರೆ.
ಪಾದೂರು ಗ್ರಾಮದ ಚಂದ್ರನಗರದ ಬಳಿ ಖಾಲಿ ಜಾಗದಲ್ಲಿ ತಗಡು ಶೀಟು ಹಾಕಿ ಅಶ್ರಫ್ ಮತ್ತು ಆಶೀರ್ ಕದ್ದು ತಂದ ದನ ಕಡಿದು ಮಾಂಸ ಮಾಡಿ ಪ್ಲಾಸ್ಟಿಕ್ ಬಕೆಟ್ನಲ್ಲಿ ಇರಿಸಿದ್ದರು. ಸ್ಥಳಕ್ಕೆ ಶಿರ್ವ ಪಿಎಸ್ಐ ರಾಘವೇಂದ್ರ ಸಿ. ನೇತೃತ್ವದ ತಂಡ ದಾಳಿ ನಡೆಸಿ ದನದ ಮಾಂಸ, ಆರು ಕತ್ತಿ, ತೂಕದ ಎಲೆಕ್ಟ್ರಾನಿಕ್ ಯಂತ್ರ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿ: ಮಹಿಳೆ ಆತ್ಮಹತ್ಯೆ
ಕಾಪು: ಅನಾ ರೋಗ್ಯದಿಂದ ಬಳಲುತ್ತಿದ್ದ ಕಟಪಾಡಿ ಮೂಡಬೆಟ್ಟು ನಿವಾಸಿ ಶರ್ಮಿಳಾ ಕರ್ಕಡ (36) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜೂ. 11ರಂದು ಸಂಜೆ ನಡೆದಿದೆ.
ಕೆಲವು ವರ್ಷಗಳಿಂದ ಭುಜ ನೋವಿನಿಂದ ಬಳಲುತ್ತಿದ್ದ ಶರ್ಮಿಳಾ ಕರ್ಕಡ ಅವರಿಗೆ ಕಳೆದ 7 ತಿಂಗಳಿನಿಂದ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂ. 11ರಂದು ಮಧ್ಯಾಹ್ನ ಮನೆಯ ಎಲ್ಲರೂ ಸೇರಿ ಊಟ ಮಾಡಿದ್ದು ಶರ್ಮಿಳಾ ಬೇಗ ಊಟ ಮುಗಿಸಿ ತಾನು ಉಳಿದಿದ್ದ ರೂಂನೊಳಗೆ ಹೋಗಿದ್ದರು.
ಸಂಜೆ 4 ಗಂಟೆಗೆ ಅವರ ತಾಯಿ ಪುಷ್ಪಾ ಸಾಲಿನ್ಸ್ ಅವರು ರೂಮ್ ಬಾಗಿಲು ತೆರೆಯಲು ಹೋದಾಗ ಒಳಗಿನಿಂದ ಚಿಲಕ ಹಾಕಿದ್ದು ಗಮನಕ್ಕೆ ಬಂದಿದ್ದು ನೆರೆಕೆರೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಶರ್ಮಿಳಾ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಪರಿಶೀಲಿಸಿದ ವೈದ್ಯರು ಅವರು ಮೃತಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೃತರ ಸಹೋದರಿ ಸರಳಾ ಅಮ್ಮನ್ನ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ: ಪಾರ್ಕ್ ಮಾಡಿದ್ದ ಬೈಕ್ ಕಳವು
ಉಡುಪಿ: ನಗರದ ಮೈತ್ರಿ ಕಾಂಪ್ಲೆಕ್ಸ್ ಎದುರುಗಡೆ ನಿಲ್ಲಿಸಿದ್ದ ಬೈಕ್ ಕಳವಾದ ಘಟನೆ ನಡೆದಿದೆ.
ಕೊಡವೂರು ನಿವಾಸಿ ಕೆ. ಚಂದ್ರ ಶೆಟ್ಟಿ ಅವರು ಜೂ. 3ರಂದು ಬೈಕ್ ಅನ್ನು ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ್ದರು. ಬಳಿಕ ಬಂದು ನೋಡಿದಾಗ ಬೈಕ್ ನಾಪತ್ತೆ ಯಾಗಿತ್ತು. ಕಳವಾದ ಬೈಕ್ನ ಮೌಲ್ಯ 50 ಸಾವಿರ ರೂ.ಆಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…