ವಿಶ್ವಾಸಾರ್ಹ ಸುದ್ದಿಗಾಗಿ “ಉದಯವಾಣಿ’ ಮುಂಚೂಣಿಯಲ್ಲಿ : ರಾಮ ನಾಯ್ಕ
Team Udayavani, Dec 20, 2020, 11:07 AM IST
ಉಡುಪಿ : “ಉದಯವಾಣಿ’ ಪತ್ರಿಕೆ 50 ವರ್ಷಗಳಿಂದ ನಿರಂತರವಾಗಿ ತಾಜಾ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಓದುಗರಿಗೆ ನೀಡುತ್ತಿರುವುದರಿಂದ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿಯೂ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡು ಬಂದಿದೆ ಎಂದು ಕೆನರಾ ಬ್ಯಾಂಕ್ (ಹಿಂದಿನ ಸಿಂಡಿಕೇಟ್ ಬ್ಯಾಂಕ್) ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ರಾಮ ನಾಯ್ಕ ಅಭಿಪ್ರಾಯಪಟ್ಟರು.
ಶನಿವಾರ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಉದಯವಾಣಿಯು ಮಂಗಳೂರು ಲೇಡಿಹಿಲ್ನ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಸಹಯೋಗದಲ್ಲಿ ಆಯೋಜಿಸಿದ ದೀಪಾವಳಿ ವಿಶೇಷಾಂಕ ಧಮಾಕಾದ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ನಿರಂತರ ಓದುಗ
ನಾನು ಓದಲು ಆರಂಭಿಸಿದ ದಿನದಿಂದ ಇಂದಿನವರೆಗೂ “ಉದಯವಾಣಿ’ಯನ್ನು ಓದುತ್ತಿದ್ದೇನೆ. ಈಗ ದೀಪಾವಳಿ ವಿಶೇ ಷಾಂಕ ಧಮಾಕಾದ ಅದೃಷ್ಟಶಾಲಿ ಓದುಗರನ್ನು ಆಯ್ಕೆ ಮಾಡುವ ಅವಕಾಶ ನನಗೆ ಒದಗಿಬಂದಿರುವುದು ಭಾಗ್ಯ ಎಂದರು.
ಗುಣಮಟ್ಟದಿಂದ ಉಳಿದ ನಾಯಕತ್ವ
ಉದಯವಾಣಿಯ ಸುದೀರ್ಘ ಇತಿಹಾಸವನ್ನು ಅವಲೋಕಿಸಿ ದಾಗ ಅದರ ಅಕ್ಷರ ಜೋಡಣೆ, ಮುದ್ರಣ, ವಿನ್ಯಾಸ, ಸುದ್ದಿ ಈ ಎಲ್ಲ ಆಯಾಮಗಳಲ್ಲಿಯೂ ಮುಂದಿರುವುದರಿಂದಲೇ ಸ್ಪರ್ಧಾತ್ಮಕ ಯುಗದಲ್ಲಿಯೂ ಅದರ ನಾಯಕತ್ವ ಮುಂದುವರಿಯುತ್ತಿದೆ. ನಮ್ಮ ಬ್ಯಾಂಕಿಗೂ ಉದಯವಾಣಿಗೂ ಸ್ಥಾಪಕರ ಆಯಾಮದಲ್ಲಿ ಅವಿನಾಭಾವ ಸಂಬಂಧವಿದೆ. ಉದಯವಾಣಿಗೆ ಇನ್ನಷ್ಟು ಉತ್ತಮ ಭವಿಷ್ಯ ದೊರಕಲಿ ಎಂದು ರಾಮ ನಾಯ್ಕ ಹಾರೈಸಿದರು.
ಓದುಗರ ವ್ಯಾಪಕತ್ವಕ್ಕೆ ಹರ್ಷ
20 ವರ್ಷಗಳಿಂದ ಉದಯವಾಣಿ ದೀಪಾವಳಿ ವಿಶೇಷಾಂಕ ಧಮಾಕಾವನ್ನು ನಡೆಸಿಕೊಂಡು ಬರುತ್ತಿದೆ. ಓದುಗರು ಮತ್ತು ಸಂಸ್ಥೆಯ ನಡುವಿನ ಸಂಬಂಧ ವೃದ್ಧಿಗಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಈಗ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದಾಗ ನಾಡಿನ ಮೂಲೆ ಮೂಲೆಗಳಿಂದ ಸ್ಪಂದನ ದೊರಕಿರುವುದು ಕಂಡು ಬಂದಿರುವುದು ಓದುಗರು ನಾಡಿನೆಲ್ಲೆಡೆ ಇರುವುದನ್ನು ಖಚಿತ ಪಡಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಎಂಎಂಎನ್ಎಲ್ ಮ್ಯಾಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್ ನ್ಯಾಶನಲ್ ಹೆಡ್ ಆನಂದ್ ಕೆ. ಸ್ವಾಗತಿಸಿ ವ್ಯಾಪಾರಾಭಿವೃದ್ಧಿ ವಿಭಾಗದ ಡಿಜಿಎಂ ಸತೀಶ್ ಶೆಣೈ ವಂದಿಸಿದರು. ಸೀನಿಯರ್ ಪ್ರಾಡಕ್ಟ್ ಇವ್ಯಾಂಜುವಲಿಸ್ಟ್ ಅಶ್ವಿನಿ ಐಗಳ್ ಕಾರ್ಯಕ್ರಮ ನಿರ್ವಹಿಸಿದರು.
ನಿರೀಕ್ಷೆಗೂ ಮೀರಿದ ಓದುಗರ ಸ್ಪಂದನೆ
ದೀಪಾವಳಿ ವಿಶೇಷಾಂಕದಲ್ಲಿ ಐದು ಪ್ರಶ್ನೆಗಳನ್ನು ಕೊಟ್ಟು ಅದಕ್ಕೆ ಉತ್ತರವನ್ನು ಕಳುಹಿಸುವ ಸ್ಪರ್ಧೆ ದೀಪಾವಳಿ ಧಮಾಕಾ ಆಗಿದೆ. ಓದುಗರನ್ನು ಚಿಂತನೆಯಲ್ಲಿ ಸಕ್ರಿಯಗೊಳಿಸುವ ಪ್ರಯತ್ನದ ಅಂಗವಾಗಿ 20 ವರ್ಷಗಳಿಂದ ಧಮಾಕಾವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 3,600 ಓದುಗರು ಪ್ರತಿಕ್ರಿಯೆ ನೀಡಿದ್ದು ಇದರಲ್ಲಿ 2,300 ಓದುಗರ ಉತ್ತರ ಸರಿಯಾಗಿತ್ತು. ಅವರಲ್ಲಿ ಒಟ್ಟು 27 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.
ಬಂಪರ್ ಬಹುಮಾನ ಹುಬ್ಬಳ್ಳಿಗೆ
ಬಂಪರ್ ಬಹುಮಾನ (ಚಿನ್ನದ ನೆಕ್ಲೆಸ್): ನೇತ್ರಾವತಿ ಅಣ್ಣಪ್ಪ, ಚೈತನ್ಯನಗರ, ಹುಬ್ಬಳ್ಳಿ
ಪ್ರಥಮ (ಚಿನ್ನದ ಬ್ರಾಸ್ಲೆಟ್): ಗಾಯತ್ರಿ ನಾಯಕ್, ದೇರೇಬೈಲ್, ಮಂಗಳೂರು
ದ್ವಿತೀಯ (ಚಿನ್ನದ ಉಂಗುರ): 1. ವಿದ್ಯಾಲಕ್ಷಿ$¾à ಎಸ್. ರಾವ್, ಪಲಿಮಾರು, ಉಡುಪಿ, 2. ಆರ್.ವಿ. ಕುಲಕರ್ಣಿ, ಅಂಜನೇಯ ನಗರ, ಬೆಳಗಾವಿ
ತೃತೀಯ (ಚಿನ್ನದ ಪೆಂಡೆಂಟ್): 1. ಶಾಂತಾ, ಶ್ರೀನಗರ, ಬೆಂಗಳೂರು, 2. ಎನ್.ಕೆ. ಆನಂದ ಬಾಬು, ಕೆ.ಆರ್.ರೋಡ್, ಹೊಸಕೋಟೆ, 3. ಚಿತ್ತಾರ ಯು., ಬೈಲೂರು, ಉಡುಪಿ
ಸಮಾಧಾನಕರ (ಜೋಡಿ ಬೆಳ್ಳಿಯ ನಾಣ್ಯ)
– ಪುಷ್ಪಾ ಮಂಜುನಾಥ್ ಆಚಾರ್ಯ, ಮಾರ್ಪಾಡಿ, ಮೂಡುಬಿದಿರೆ
– ಎ. ವಿಜಯಲಕ್ಷಿ$¾à ರಾವ್, 6ನೇ ಕ್ರಾಸ್, ಜೈಲ್ರೋಡ್, ಮಂಗಳೂರು
– ವಿ. ಯೋಗೀಶ್ ಪೇರಂದಡ್ಕ, ಕಾಶಿಪಟ್ಣ, ಬೆಳ್ತಂಗಡಿ
– ಎಸ್.ಎಲ್. ಸುಪ್ರಿಯಾ, ಚೆನ್ನಗಿರಿ ಟೌನ್, ದಾವಣಗೆರೆ
– ಸರಸ್ವತಿ ಕಮಲಾಕರ, ವಾಲಗಳ್ಳಿ, ಕುಮಟಾ
– ಪ್ರಶಾಂತ್ ಜಿ. ಪ್ರಭು, ಪೊಳಲಿ, ಬಂಟ್ವಾಳ
– ಕೆ. ಧನ್ಯಾಶ್ರೀ, ರಾಮ್ನಗರ, ಕಿನ್ನಿಗೋಳಿ
– ವಾಸುದೇವ್ ರಾಮ, ಕಾವೂರು, ಮಂಗಳೂರು
– ಸುರೇಶ್ ಪೂಜಾರಿ, ನೇರಳಕಟ್ಟೆ, ಕುಂದಾಪುರ
– ಯಶ್ವಿà ಆರ್. ಆಚಾರ್ಯ, ಯರ್ಲಪಾಡಿ, ಕಾರ್ಕಳ
– ಕರುಣಾಕರ ಜಿ., ಕಿನ್ನಿಕಂಬÛ, ಮಂಗಳೂರು
– ವಿದ್ಯಾಲಕ್ಷಿ$¾à ಎಸ್. ಭಟ್, ದುರ್ಗ, ಕಾರ್ಕಳ
– ಡಾ| ಶೈಲೇಶ್, ಜಯನಗರ, ಬೆಂಗಳೂರು
– ಲತಾ ಆರ್., ಸಂತೆಕಟ್ಟೆ, ಚೇರ್ಕಾಡಿ, ಬ್ರಹ್ಮಾವರ
– ಮಹಾಲಿಂಗೇಶ್ವರ ದೇಲಂಪಾಡಿ, ಕಾಸರಗೋಡು
– ಆರ್. ಅನಸೂಯ ಕುಮಾರಿ, ಚಿಕ್ಕಲಸಂದ್ರ, ಬೆಂಗಳೂರು
– ವೈ.ವಿ. ವಿಶ್ವಜ್ಞ ಮೂರ್ತಿ, ಬರ್ಕೆ, ಮಂಗಳೂರು
– ವಿಶ್ವನಾಥ್ ನಾಯಕ್ ಕೆ., ಪರ್ಕಳ, ಉಡುಪಿ
– ಶಿವಾನಂದ, ಹುಕ್ರಟ್ಟೆ, ನಲ್ಲೂರು, ಕಾರ್ಕಳ
– ರಾಜೇಶ್ವರಿ ವಾಸುದೇವ್, ಪಡುಅಲೆವೂರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!