ಮುಂಬೈ ತಂಡ ಕೂಡಿಕೊಳ್ಳುವತ್ತ ಧವಳ್‌ ಕುಲಕರ್ಣಿ


Team Udayavani, Apr 21, 2022, 5:30 AM IST

ಮುಂಬೈ ತಂಡ ಕೂಡಿಕೊಳ್ಳುವತ್ತ ಧವಳ್‌ ಕುಲಕರ್ಣಿ

ಮುಂಬಯಿ: ಐಪಿಎಲ್‌ ಪಂದ್ಯಾವಳಿಯ ತಾಜಾ ಬೆಳವಣಿಗೆಯಂತೆ ಹಿರಿಯ ಪೇಸ್‌ ಬೌಲರ್‌ ಧವಳ್‌ ಕುಲಕರ್ಣಿ ಮುಂಬೈ ಇಂಡಿಯನ್ಸ್‌ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.

ಮೂಲತಃ ಮುಂಬಯಿಯವರೇ ಆದ ಧವಳ್‌ ಕುಲಕರ್ಣಿ ಕಳೆದ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

ಹೀಗಾಗಿ ಅವರು ಸ್ಟಾರ್‌ ನ್ಪೋರ್ಟ್ಸ್ ಕಮೆಂಟ್ರಿ ಟೀಮ್‌ ಸೇರಿಕೊಂಡರು. ಈಗ, ಮುಂಬೈ ಬೌಲಿಂಗ್‌ ವಿಭಾಗವನ್ನು ಗಟ್ಟಿಗೊಳಿಸಲು ಕುಲಕರ್ಣಿ ಅವರನ್ನು ಸೇರಿಸಿಕೊಳ್ಳುವ ಕುರಿತು ಬಿರುಸಿನ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ನಾಯಕ ರೋಹಿತ್‌ ಶರ್ಮ ಈ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

“ಮುಂಬೈ ತಂಡದ ಪೇಸ್‌ ಬೌಲಿಂಗ್‌ ವಿಭಾಗವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನಾಯಕ ರೋಹಿತ್‌ ಶರ್ಮ ಅವರು ಧವಳ್‌ ಕುಲಕರ್ಣಿ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಅವರು ಮುಂಬಯಿಯವರೇ ಆಗಿರುವ ಕಾರಣ ತವರಿನ ಹಾಗೂ ಪುಣೆ ಟ್ರ್ಯಾಕ್‌ನಲ್ಲಿ ಹೇಗೆ ಬೌಲಿಂಗ್‌ ನಡೆಸಬೇಕು ಎಂಬುದನ್ನು ಚೆನ್ನಾಗಿ ಬಲ್ಲರು’ ಎಂದು ಮೂಲವೊಂದು ಹೇಳಿದೆ.

2020ರಲ್ಲಿ ಧವಳ್‌ ಕುಲಕರ್ಣಿ 75 ಲಕ್ಷ ರೂ. ಮೊತ್ತಕ್ಕೆ ಮುಂಬೈ ಪಾಲಾಗಿದ್ದರು. 2021ರಲ್ಲೂ ಮುಂಬೈ ತಂಡದಲ್ಲಿದ್ದರು. ಆದರೆ ಈ ಅವಧಿಯಲ್ಲಿ ಇವರಿಗೆ ಆಡಲು ಸಿಕ್ಕಿದ್ದು ಒಂದು ಪಂದ್ಯ ಮಾತ್ರ. ಕುಲಕರ್ಣಿ ಅತ್ಯಂತ ವೇಗಿಯೇನಲ್ಲ, ಆದರೆ ಹೊಸ ಚೆಂಡನ್ನು ಸ್ವಿಂಗ್‌ ಮಾಡುವ ಜಾಣ್ಮೆ ಇವರಲ್ಲಿದೆ.

92 ಪಂದ್ಯಗಳ ಅನುಭವಿ
33 ವರ್ಷದ ಧವಳ್‌ ಕುಲಕರ್ಣಿ 2008ರಿಂದಲೇ ಐಪಿಎಲ್‌ ಆಡಲಾರಂಭಿಸಿದ್ದರು. ಮುಂಬೈ, ರಾಜಸ್ಥಾನ್‌ ಮತ್ತು ಗುಜರಾತ್‌ ಲಯನ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದು, 92 ಐಪಿಎಲ್‌ ಪಂದ್ಯಗಳಿಂದ 86 ವಿಕೆಟ್‌ ಕೆಡವಿದ್ದಾರೆ.

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.