ಪೊಲೀಸ್ ವಸತಿ ಗೃಹದಲ್ಲೇ ಹಣ್ಣಿನ ತೋಟ ನಿರ್ಮಿಸಿದ ಡಿವೈಎಸ್ಪಿ
Team Udayavani, Jun 5, 2022, 4:25 PM IST
ಬೈಲಹೊಂಗಲ: ಬಂದೋಬಸ್ತ್, ರೌಂಡ್ಸ್, ಸ್ಟೇಷನ್ ಡ್ನೂಟಿ, ವಿಐಪಿ ಭದ್ರತೆ ಹೀಗೆ ವರ್ಷವಿಡೀ ಪೊಲೀಸ್ ಸಿಬ್ಬಂದಿಗೆ ಒತ್ತಡದ ಕೆಲಸ ಸಹಜ. ಇಷ್ಟೆಲ್ಲ ಒತ್ತಡದ ಕೆಲಸದ ನಡುವೆ ಅಧಿಕಾರಿಯೊಬ್ಬರು ಸಮಯ ಮಾಡಿಕೊಂಡು ಪೊಲೀಸ್ ವಸತಿ ಗೃಹದಲ್ಲಿ ಹಣ್ಣಿನ ತೋಟ ಮಾಡಿದ್ದಾರೆ.
ಹೌದು, ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಪಕ್ಕದ ವಸತಿ ಗೃಹದಲ್ಲಿ ಡಿವೈಎಸ್ಪಿ ಶಿವಾನಂದ ಕಟಗಿ ಅವರೇ ಈ ಪರಿಸರ ಕಾಳಜಿ ತೋರಿದ ಅಧಿಕಾರಿ.
ಅಲ್ಲಿ ವಿವಿಧ ಹಣ್ಣಿನ ಸಸಿ ನೆಟ್ಟು ಗಿಡವಾಗಿಸಿದ್ದಾರೆ. ಹಲವಾರು ಹಣ್ಣಿನ ಗಿಡ ಬೆಳೆಯುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅಧಿಕಾರಿಯ ಈ ಉತ್ಸಾಹಕ್ಕೆ ಸಿಬ್ಬಂದಿ ಕೈ ಜೋಡಿಸಿದ್ದಾರೆ. ಪಾಳು ಬಿದ್ದಿದ್ದ ಜಾಗದಲ್ಲಿ ಹಣ್ಣಿನ ತೋಟ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಯಾವುದೇ ರಾಸಾಯನಿಕ ವಸ್ತು ಬಳಸದೇ ಹಣ್ಣಿನ ಗಿಡ ಬೆಳೆಸಲಾಗುತ್ತಿದೆ.
ಪಾಳು ಬಿದ್ದಿದ್ದ ಜಾಗದಲ್ಲಿ ಜೆಸಿಬಿ ಮೂಲಕ ಭೂಮಿ ಹದಗೊಳಿಸಿ ಹಣ್ಣಿನ ತೋಟದ ಕೆಲಸ ಆರಂಭಿಸಿದ್ದಾರೆ. ಕಲ್ಲು, ಮಣ್ಣು, ಗೊಬ್ಬರ ಹಾಕಿ ಜಮೀನಿನ ರೂಪ ನೀಡಿದ್ದಾರೆ. ಬಿಡುವಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರು ತೋಟದ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದಾರೆ.
15ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಬೆಳವಣಿಗೆ: ಕಳೆದೊಂದು ವರ್ಷದಿಂದ ಹಣ್ಣಿನ ತೋಟ ಮಾಡಿ 30 ಗುಂಟೆ ಜಾಗದಲ್ಲಿ ಮಾವು, ಸೇಬು, ಪಪ್ಪಾಯಿ, ಹಲಸು, ಪೇರಲ, ಚಿಕ್ಕು, ದಾಳಿಂಬೆ, ಲಿಂಬೆ, ಗುಡ್ಡನ್ನೆಲ್ಲಿ, ಟೆಂಗು, ಸೀತಾಫಲ, ನೇರಳೆ, ಗೋಡಂಬೆ, ವಾಟರ್ ಆ್ಯಪಲ್ ಸೇರಿದಂತೆ ಇನ್ನೂ ಹಲವಾರು ಹಣ್ಣಿನ ಸಸಿ ನೆಟ್ಟು ಗಿಡವಾಗಿಸಿ ಉತ್ತಮ ಫಲ ಬೆಳೆಯಲಾಗುತ್ತಿದೆ. ಬೆಳೆದ ಹಣ್ಣುಗಳನ್ನು ತಾವು ಸವಿದು, ಸಿಬ್ಬಂದಿ, ಕುಟುಂಬಕ್ಕೂ ನೀಡುತ್ತಿದ್ದಾರೆ.
ಖಾಲಿ ಜಾಗೆಯಲ್ಲಿ ಫಸಲು: ಪೊಲೀಸ್ ವಸತಿ ಗೃಹ ಸುತ್ತಮುತ್ತ ಸಾಕಷ್ಟು ಜಾಗೆ ಇದೆ. ಆ ಜಾಗದಲ್ಲಿ ಹೂವು, ಹಣ್ಣು, ತರಕಾರಿ ಬೆಳೆದು ಸದ್ಬಳಕೆ ಮಾಡಿಕೊಳ್ಳಬೇಕೆನ್ನುವ ದೃಷ್ಟಿಯಿಂದ ಹಣ್ಣಿನ ತೋಟ ನಿರ್ಮಾಣಕ್ಕೆ ಕೈ ಹಾಕಿ ತಾಜಾ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಸಿಬ್ಬಂದಿ ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಡಿವೈಎಸ್ಪಿ ಶಿವಾನಂದ ಕಟಗಿ ತಿಳಿಸುತ್ತಾರೆ.
ಪೊಲೀಸ್ ಎಂದರೆ ಭಯ ಅಲ್ಲ, ಗೌರವ ಮನೋಭಾವ ಎಲ್ಲರಲ್ಲಿ ಮೂಡಬೇಕು. ಕರ್ತವ್ಯದೊಂದಿಗೆ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು. ಶಿವಾನಂದ ಕಟಗಿ, ಡಿವೈಎಸ್ಪಿ, ಬೈಲಹೊಂಗಲ
ಸಿ.ವೈ. ಮೆಣಶಿನಕಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…