ಪ್ರತೀ ಸ್ನೇಹ ಪ್ರೀತಿಯಾಗಬಹುದು, ಆದರೆ ಪ್ರತಿ ಪ್ರೀತಿ ಸ್ನೇಹವಾಗದು!

ಆ ಸಂಜೆ, ಕಡಲಿಗಿಳಿದ ಸೂರ್ಯನಿಗೊಲಿದ ಪ್ರೇಮ ಅವಳಿಗೊಲಿಯಲಿಲ್ಲ

Team Udayavani, Aug 6, 2023, 3:48 PM IST

ಪ್ರತೀ ಸ್ನೇಹ ಪ್ರೀತಿಯಾಗಬಹುದು, ಆದರೆ ಪ್ರತಿ ಪ್ರೀತಿ ಸ್ನೇಹವಾಗದು!

ಹೀಗೆ ಸಿಕ್ಕು ಹಾಗೆ ಜಾರಿ ಹೋಗುವ ಅದೆಷ್ಟೋ ಭೇಟಿಗಳ ನಡುವೆ ನಮ್ಮ ಮನಸ್ಸಿಗೆ ಒಲಿದು, ಇಳಿದು ಮನಸೆಂಬ ಪುಸ್ತಕದ ಸ್ನೇಹದ ಪುಟದಲ್ಲಿ ದಾಖಲಾಗುವುದು ಕೆಲವೊಂದಿಷ್ಟೇ ಪರಿಚಯಗಳು. ಎಲ್ಲ ಪರಿಚಯಗಳು ಸ್ನೇಹವಾಗಬೇಕೆಂದೇನಿಲ್ಲ. ಅಂತೆಯೇ ಎಲ್ಲ ಸ್ನೇಹಗಳು ಪ್ರೀತಿಯಾಗಬೇಕಂತಲೂ ಇಲ್ಲ. ಆದರೂ ಕೆಲವೊಮ್ಮೆ ಮುಂಜಾನೆ ಬಾನಿನಿಂದ ಸೋಸಿ ಬಂದ ಸೂರ್ಯನ ಕಿರಣಕ್ಕೆ ಮೊಗ್ಗೊಡೆದು ಅರಳಿದ ಕಮಲದಂತೆ ಇವೆರಡೂ ಸಂಭವಿಸುತ್ತದೆ.

ಸ್ನೇಹಿತನ ಕೈಹಿಡಿದು ನಡೆಯುವ ಅವಳಿಗೆ, ಪ್ರೀತಿ ಕಣ್ಣಲ್ಲಿದ್ದರೂ ಮಾತಿಗಿಳಿಸದ ಅಸಹಾಯಕತೆ ಕಾಡಿತ್ತು. ಅವಳ ಆ ಅಸಹಾಯಕತೆಗೆ ಇವಳು ನೊಂದಿದ್ದಾಗ ಅವನು ಸ್ನೇಹದ ಹೆಸರಿನಲ್ಲಿ ನೀಡಿದ್ದ ಆ ಸಹಾಯದ ಕಥೆ ಕಾರಣವಾಗಿತ್ತು. ಅವನೊಂದಿಗಿನ ಪ್ರತಿ ಭೇಟಿಗೂ ಅರ್ಥ ಹುಡುಕುವವಳು ಅವಳು. ಇನ್ನು ಅವನಂತೂ, ಅಪರಾತ್ರಿ ತನ್ನ ತಂದೆ ಯಾರದೋ ಕೈ ಹಿಡಿದು ನಡೆದರೆನ್ನುವ ಸುದ್ದಿ ಕೇಳಿದ ತಾಯಿಯ ಒಬ್ಬಂಟಿತನದ ಹಣೆಯನ್ನ ತನ್ನೆದೆಗವಚಿ ಸಂತೈಸಿದವನು. ನೊಂದ ಹೆಣ್ಣಿನ ಮನಸನ್ನು ಸಂತೈಸುವ ಪರಿಯನ್ನು ಅವನಿಗೆ ಹೇಳಿಕೊಡಬೇಕಾಗಿರಲಿಲ್ಲ.

ಹೀಗೆ ಸಮುದ್ರದಡದಲ್ಲಿ ಒಂದು ಸಂಜೆ ಅವರಿಬ್ಬರೂ ಹೆಜ್ಜೆ ಬೆರೆಸಿ ನಡೆಯುತ್ತಿರುವಾಗ ಅವನಮ್ಮ ಕಟ್ಟಿ ಅವನು ತಂದು ಕೊಟ್ಟಿದ್ದ ದುಂಡು ಮಲ್ಲಿಗೆ ಮುಡಿದುಕೊಂಡ ಅವಳು, ಅದನ್ನು ಪದೆ ಪದೇ ಮುಟ್ಟಿ ನೋಡಿಕೊಳ್ಳುತ್ತಿದ್ದಳು. ಅದೇನೋ ಕಾಣದ ವಿನೋದ ಅವಳಿಗೆ. ಅಲೆಗಳಿಂದ ಬೀಸಿದ ಗಾಳಿ, ಅವಳು ಮುಡಿದ ಮಲ್ಲಿಗೆಯ ಗಂಧವನ್ನು ಅವನ ಮುಖದತ್ತ ಹೊತ್ತು ತರುತ್ತಿತ್ತು. ಅದಕ್ಕೆ ಪ್ರತಿಯಾಗಿ ಅವನೂ ನಸುನಗುತ್ತಿದ್ದ. ಅವನ ಆ ನಗುವಿಗೂ ಅವಳು ಒಂದು ಅರ್ಥ ಕಲ್ಪಿಸಿಕೊಳ್ಳುತ್ತಿದ್ದಳು.

ನಾನಾ ಕಾರಣಗಳಿಂದ ಒಂದು ಸಂವತ್ಸರ ಭೇಟಿಯಾಗದ ಅವರು. ಭೇಟಿಯಾಗಬೇಕೆಂದುಕೊಂಡದ್ದು ಆ ಒಂದು ಮಳೆ ನಿಂತ ಸಂಜೆ. ಕಲ್ಲು ಬೆಂಚಿಗೊರಗಿ ಕೂತಿದ್ದ ಅವಳು, ಅವನು ಬಂದೊಡನೆ ತಬ್ಬಿ ಪ್ರೇಮ ನಿವೇದಿಸಿಯೇ ಬಿಟ್ಟಳು. ಏನೂ ಸ್ಪಂದಿಸದ ಅವನು ಕಣ್ಣು ಮುಚ್ಚಿದಾಗ. ಅವನ ತಾಯಿಯ ನೊಂದ ದನಿ ಅವಳ ನೀವೇದನಾ ದನಿಯನ್ನೂ ಮೀರಿ ಅವನ ಕಿವಿಯನ್ನಲಂಕರಿಸಿತ್ತು. ಆ ಸಂಜೆ, ಕಡಲಿಗಿಳಿದ ಸೂರ್ಯನಿಗೊಲಿದ ಪ್ರೇಮ ಅವಳಿಗೊಲಿಯಲಿಲ್ಲ. ಅದೇ ಅವರಿಬ್ಬರ ಕಾತುರದ ಕೊನೆಯ ಭೇಟಿ

ನಂತರ ಅವಳದೆಷ್ಟು ಬಾರಿ ಸ್ನೇಹಕ್ಕೆ ಕೈಚಾಚಿದರೂ. ಅವನು ಒಲ್ಲೆಯೆನ್ನದೆ ಒಟ್ಟಿಗಿದ್ದರೂ ಮುಂಚಿದ್ದ ಸ್ನೇಹದ ಸವಿ ಅವಳಿಗೆ ಸಿಗಲಿಲ್ಲ. ಅವನಿಗೂ ಸಹ. ಹೀಗೆ ಯಾವುದೋ ಭೇಟಿಗಳಿಗೆ ನಮ್ಮದೇ ಅರ್ಥವನ್ನು ನೀಡುವ ಗೋಜಿಗೆ ಹೋಗುವ ನಾವು ಅವರ ಜತೆ ನಮ್ಮನ್ನೂ ಕಳೆದುಕೊಂಡು ಬಿಡುತ್ತೇವೆ. ಸ್ನೇಹಕ್ಕೆ ಪ್ರೀತಿಯ ಹೆಸರನ್ನು ನೀವು ಕೊಡಬೇಡಿ. ಸ್ನೇಹದ ಪರಿ ಯನ್ನು ಮೀರಿದರೆ ಅದು ತನ್ನಷ್ಟಕ್ಕೆ ಆಗುತ್ತದೆ.

ದರ್ಶನ್‌ ಕುಮಾರ್‌
ದ್ವಿತೀಯ ಬಿ ಎ, ಪತ್ರಿಕೋದ್ಯಮ ವಿದ್ಯಾರ್ಥಿ.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.