ಆರೋಗ್ಯವೇ ಮೊದಲು: ಐಸಿಸಿ
Team Udayavani, May 24, 2020, 6:15 AM IST
ದುಬಾೖ: ಕೋವಿಡ್-19 ನಿಯಂತ್ರಿಸುವಲ್ಲಿ ಬಹಳಷ್ಟು ದೇಶಗಳು ವಿಫಲವಾಗಿರುವ ಕಾರಣ ಕ್ರಿಕೆಟ್ ಚಟುವಟಿಕೆಯನ್ನು ಮುಂದುವರಿ ಸಲು ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂಬುದಾಗಿ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಕೆಲವು ಮಾರ್ಗ ದರ್ಶಿ ಸೂತ್ರಗಳನ್ನೂ ರೂಪಿಸಿದೆ. “ಆರೋಗ್ಯವೇ ಮೊದಲು’ ಎಂಬುದು ಇದರಲ್ಲಿ ಪ್ರಮುಖವಾ ದುದು. ಇದಕ್ಕಾಗಿ ಪ್ರಧಾನ
ವೈದ್ಯಾ ಧಿಕಾರಿ ಅಥವಾ ಜೈವಿಕ ಸುರಕ್ಷಾ ಅಧಿಕಾರಿಯನ್ನು ನೇಮಿಸಬೇಕು ಎಂಬುದಾಗಿ ಹೇಳಿದೆ.
“ಕ್ರಿಕೆಟ್ ಪುನರಾರಂಭಿಸಲು ಭಾರೀ ಮುನ್ನೆಚ್ಚರಿಕೆ ವಹಿಸಬೇಕಿದೆ. ಸ್ಥಳೀಯವಾಗಿ ಕೋವಿಡ್-19 ಹಬ್ಬುವುದು ನಿಲ್ಲಬೇಕಾದುದು ಅತ್ಯಗತ್ಯ. ಆರೋಗ್ಯಕ್ಕೆ ನಮ್ಮ ಮೊದಲ ಆದ್ಯತೆ’ ಎಂಬುದಾಗಿ ಐಸಿಸಿ ತಿಳಿಸಿದೆ.
“ಅಭ್ಯಾಸಕ್ಕೆ ಇಳಿಯುವ ಮುನ್ನ ಕ್ರಿಕೆಟ್ ಪರಿಸರ, ತರಬೇತಿ ಸ್ಥಳ, ಚೇಂಜಿಂಗ್ ರೂಮ್ಸ್, ಅಲ್ಲಿನ ಪರಿಕರ, ಪ್ರಯಾಣ ನಿರ್ಬಂಧ… ಇವನ್ನೆಲ್ಲ ಗಮಿಸಬೇಕಾದುದು ಅಗತ್ಯ. ಸ್ಥಳೀಯ ಕ್ರಿಕೆಟ್ ಆಡಳಿತ ಸಂಸ್ಥೆಗಳು ಸರಕಾರದ ಆದೇಶವನ್ನು ಸ್ಪಷ್ಟವಾಗಿ ಪಾಲಿಸಬೇಕಿದೆ’ ಎಂದು ಐಸಿಸಿ ಹೇಳಿದೆ.
ಮಾರ್ಗದರ್ಶಿ ಸೂತ್ರಗಳು
ಪ್ರಯಾಣಕ್ಕೂ 14 ದಿನ ಮೊದಲು ನಿರಂತರ ದೇಹದ ಉಷ್ಣಾಂಶ ಪರೀಕ್ಷೆ ನಡೆಸುವುದು, ಅಭ್ಯಾಸದ ವೇಳೆ ಆಟಗಾರರ ನಡುವೆ ಕನಿಷ್ಠ ಒಂದೂವರೆ ಮೀ. ಅಂತರ ಕಾಯ್ದು ಕೊಳ್ಳುವುದು, ಚೆಂಡನ್ನು ಮುಟ್ಟುವ ಮೊದಲು ಕೈಯನ್ನು ಸ್ಯಾನಿಟೈಸ್ ಮಾಡುವುದು, ಬೌಲಿಂಗಿಗೂ ಮೊದಲು ತಮ್ಮ ಕ್ಯಾಪ್, ಜರ್ಕಿನ್, ಇತರ ಪರಿಕರಗಳನ್ನು ಅಂಪಾಯರ್ಗೆ ನೀಡದಿರುವುದು, ಅಂಗಳದಲ್ಲಿ ಸಂಭ್ರಮಾಚರಣೆ ನಡೆಸಲು ಗುಂಪುಗೂಡದಿರುವುದು, ಪ್ರಯಾಣಕ್ಕೆ ಬಾಡಿಗೆ ವಿಮಾನ ಬಳಕೆ… ಇವೆಲ್ಲ ಐಸಿಸಿಯ ನೂತನ ಮಾರ್ಗದರ್ಶಿ ಸೂತ್ರಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…