ನಿರಂತರ ಮಳೆಗೆ ಬೆಳೆ ಹಾನಿ: ಎರಡನೇ ಬಾರಿಗೆ ಬಿತ್ತನೆಗೆ ರೈತರ ಅಣಿ
Team Udayavani, Oct 29, 2020, 2:42 PM IST
ದೋಟಿಹಾಳ: ಉತ್ತರ ಮತ್ತು ಹಸ್ತಾ ಮಳೆಗೆ ಬಿತ್ತನೆ ಮಾಡಿದ ಬೆಳೆ ನಿರಂತರ ಮಳೆಯಿಂದ ಮೊಳಕೆ ಒಡೆಯದೇ ಬೆಳೆ ಕೈಕೊಟ್ಟಿದ್ದರಿಂದ ಮತ್ತೂಮ್ಮೆ ಬಿತ್ತನೆಗೆ ಈಗ ರೈತರು ಅಣಿಯಾಗುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೇ ಸುರಿದ ಮಳೆಯಿಂದ ಗ್ರಾಮದ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆ ಮೊಳಕೆ ಕಾಣದೆ ಹಾಳಾಗಿ
ಹೋಗಿರುವುದರಿಂದ ಅನೇಕ ರೈತರು ಈಗ ಮತ್ತೂಮ್ಮ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಟಕಳ್ಳಕಿ ಗ್ರಾಮದ ರೈತ ವೀರಯ್ಯ ವಸ್ತ್ರದ ಅವರ ಮೂರು ಎಕರೆ ಹೊಲದಲ್ಲಿ ಕಳೆದ 22 ದಿನಗಳ ಹಿಂದೇ ಕಡಲೆ ಬೆಳೆಯನ್ನು ಸುಮಾರು 15 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಅತಿಯಾದ ಮಳೆಯಿಂದ ಬಿತ್ತಿದ ಬೀಜ ಮೊಳಕೆ ಕಾಣದೇ ಬೆಳೆ ಕೈಕೊಟ್ಟಿದ್ದರಿಂದ ಹೀಗ ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆಗೆ ಮುಂದಾಗಿದ್ದಾರೆ.
ಈ ಬಾರಿ ಬಹುತೇಕ ರೈತರು ಕಡಲೆ, ಬಿಳಿಜೋಳದ ಜೊತೆಗೆ ಕುಸುಬೆ, ಅಗಸಿ ಬೆಳೆಗಳನ್ನು ಮಿಶ್ರಬೆಳೆಗಳಾಗಿ ಬೆಳೆಯುತ್ತಿದ್ದಾರೆ.
ಕೆಲವರು ಬಿಳಿಜೋಳ ಬೆಳೆಯುವುದರಿಂದ “ನಮಗಾ ತಿನ್ನಾಕ ಜೋಳ ಸಿಗುತಾವ್ರಿ, ಅಲ್ಲದೆ ದನಕರುಗಳಿಗೂ ಮೇವು ಸಿಗತೈತ್ರೀ’ ಎಂದು ರೈತರು ತಿಳಿಸಿದರು.
ಇದನ್ನೂ ಓದಿ:ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ
ಗ್ರಾಮದ ಸುತ್ತಮುತ್ತಲು ಬಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು ರೈತರು ಎತ್ತಿನ ಬಂಡಿಗಳಲ್ಲಿ ಹೊಲಗಳಿಗೆ ತೆರಳುತ್ತಿರುವ
ದೃಶ್ಯಗಳು ಮರುಕಳಿಸಿವೆ. ಹಿಂಗಾರೂ ಬಿತ್ತನೆ ಮಾಡುವ ಕೂರಿಗೆ ಮತ್ತು ಹಿಂದೆ ಸಾಲು ಕಲೆಸುವ ಜೋಡಿ ಗಳೇವಿಗೆ ದಿನಕ್ಕೆ 2000ರೂ. ಗಳವರೆಗೆ ಬಾಡಿಗೆ ಇದೆ. ಬೀಜ ಅಕ್ಕಡಿ ಹಾಕುವ ಆಳುಗಳಿಗೆ ಕೂಲಿ 200ಕ್ಕೆ ಏರಿದೆ. ಹೊಟ್ಟು, ಮೇವು ಸೇರಿದಂತೆ ಕೃಷಿ
ಪರಿಕರಗಳು ಕೂಡ ದುಬಾರಿ ಆಗಿರುವುದರಿಂದ ರೈತರು ಕೃಷಿ ಮಾಡುವುದು ಸದ್ಯ ವರ್ಷದಿಂದ ವರ್ಷಕ್ಕೆ ಬಹಳ ಕಷ್ಟವಾಗುತ್ತದೆ ಎಂದು ರೈತರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ