ಹಾಳುಕೊಂಪೆಯಾದ ಬಸ್‌ ನಿಲ್ದಾಣ : ಕಸದ ರಾಶಿ, ಮುಳ್ಳುಕಂಟಿ, ಮೂತ್ರದ ಘಾಟು


Team Udayavani, Jan 23, 2022, 12:25 PM IST

ಹಾಳುಕೊಂಪೆಯಾದ ಬಸ್‌ ನಿಲ್ದಾಣ : ಕಸದ ರಾಶಿ, ಮುಳ್ಳುಕಂಟಿ, ಮೂತ್ರದ ಘಾಟು

ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಸದ ರಾಶಿ, ಬೆಳೆದು ನಿಂತ ಮುಳ್ಳುಕಂಟಿ, ಆವರಣದಕ್ಕೆ ಕಾಲಿಟ್ಟರೆ ಸಾಕು ಮೂಗಿಗೆ ರಾಚುವ ಮೂತ್ರ ವಿಸರ್ಜನೆ ಘಾಟು, ಸ್ವತ್ಛತೆಗೆ ಅದೆಷ್ಟೋ ಮೈಲು ದೂರದಲ್ಲಿದೆ ಎಂಬ ಭಾವನೆ..

ಇದು ಗೋಕುಲ ರಸ್ತೆಯಲ್ಲಿನ ಕೇಂದ್ರ ಬಸ್‌ ನಿಲ್ದಾಣದ ಚಿತ್ರಣ. ನಿಲ್ದಾಣ ವ್ಯಾಪ್ತಿಯಲ್ಲಿ ವಿಶಾಲ ಜಾಗವಿದೆ. ಆದರೆ ಅರ್ಧದಷ್ಟು ಜಾಗ ಗಿಡಗಂಟಿಗಳಿಂದ ತುಂಬಿದೆ. ಮೂತ್ರ ವಿಸರ್ಜನೆ, ಬಯಲು ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಕೇವಲ ಸಾರ್ವಜನಿಕರಷ್ಟೇ ಅಲ್ಲದೆ ಸಾರಿಗೆ ಸಿಬ್ಬಂದಿ ಸಹ ಬಯಲಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತದೆ. ಆವರಣದಲ್ಲಿ ಅಲ್ಲಲ್ಲಿ ಕಸದ ರಾಶಿ, ಕಂಡ ಕಂಡ ಕಡೆ ಗುಟಕಾ, ಎಲೆ-ಅಡಿಕೆ ತಿಂದು ಉಗಿದ ಕಲೆ ರಾಚುತ್ತವೆ.

ಗೋಕುಲ ರಸ್ತೆಯಲ್ಲಿ ನಿರ್ಮಾಣಗೊಂಡ ಹೊಸ ಬಸ್‌ ನಿಲ್ದಾಣ ಕೆಲ ವರ್ಷಗಳವರೆಗೆ ಇದ್ದೂ ಇಲ್ಲದ ಸ್ಥಿತಿಗೆ ತಲುಪಿತ್ತು. ಬಸ್‌ಗಳ ಹೆಚ್ಚಿನ ಸಂಚಾರ-ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ರಾತ್ರಿಯಾದರೆ ಅನೈತಿಕ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. ನಂತರದಲ್ಲಿ ಕೆಲವೊಂದು ರೂಟ್‌ಗಳ ಬಸ್‌ಗಳನ್ನು ಹೊಸ ಬಸ್‌ ನಿಲ್ದಾಣದಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು.
ಹಳೇ ಬಸ್‌ ನಿಲ್ದಾಣ ಪುನರ್‌ ನಿರ್ಮಾಣ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳನ್ನು ಗೋಕುಲ ರಸ್ತೆಯ ಬಸ್‌ ನಿಲ್ದಾಣಕ್ಕೆ, ಇನ್ನು ಕೆಲವು ಬಸ್‌ಗಳನ್ನು ಹೊಸೂರಿನಲ್ಲಿ ನಿರ್ಮಾಣಗೊಂಡ
ಪ್ರಾದೇಶಿಕ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣದಿಂದ ಬಸ್‌ಗಳ ಓಡಾಟ ಸಂಖ್ಯೆ ಹೆಚ್ಚಳವಾಗಿದೆಯಾದರೂ, ಸ್ವತ್ಛತೆ-ಸೌಲಭ್ಯಗಳ ಕೊರತೆ
ಎದ್ದು ಕಾಣುತ್ತಿದೆ.

ಹೆಸರಿಗಷ್ಟೇ ಉಚಿತ
ಬಸ್‌ ನಿಲ್ದಾಣಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದ್ದರೂ ಗುತ್ತಿಗೆ ಪಡೆದವರು ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮೂತ್ರ ವಿಸರ್ಜನೆಗೆ 2 ರಿಂದ 3 ರೂ.
ಹಾಗೂ ಶೌಚಾಲಯಕ್ಕೆ ಹೊದರೆ 10 ರೂ. ನೀಡಬೇಕಾಗಿದೆ. ರಾತ್ರಿ ವೇಳೆ ಮಹಿಳೆಯರು ಶೌಚಾಲಯ ಕಡೆ ಹೋಗದಂತ ಸ್ಥಿತಿ ಇದೆ ಎಂಬ ಆರೋಪ ಅನೇಕರದ್ದಾಗಿದೆ.

ಬಾಟಲಿ ನೀರೇ ಅನಿವಾರ್ಯ
ಎರಡು ಬದಿಯಲ್ಲಿ ಕುಡಿಯುವ ನೀರು ಎಂದು ನಾಮಫಲಕಗಳು ರಾರಾಜಿಸುತ್ತವೆ, ಆದರೆ ಅದನ್ನು ನಂಬಿಕೊಂಡು ಹೋದವರಿಗೆ ದೇವರೆ ಗತಿ. ಎರಡೂ ಕುಡಿಯುವ ನೀರಿನ ಕಟ್ಟೆಗಳು ಹಾಳಾಗಿದ್ದು, ಇಲಾಖೆಯಿಂದಲೇ ಅವೆರಡಕ್ಕೆ ಯಾರೂ ಹೋಗದಂತೆ ತಡೆಗೋಡೆ ನಿರ್ಮಿಸಲಾಗಿದೆ. ಹೊರ ಭಾಗದಲ್ಲಿರುವ ನೀರಿನ ಅರವಟಿಗೆಗಳು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಎರಡು ಬದಿಯಲ್ಲಿ ಒಂದೊಂದು ನೀರಿನ ಅರವಟಿಗೆ ಇದ್ದು, ಅವು ಕೂಡಾ ಸರಿಯಾದ ಸ್ವತ್ಛತೆ ಇಲ್ಲದೆ ಆಗಮಿಸುವ ಪ್ರಯಾಣಿಕರು ಅನಿರ್ವಾಯವಾಗಿ ಬಾಟಲಿ ನೀರಿಗೆ ಮೊರೆ ಹೋಗುವಂತಾಗಿದೆ.

ಸದ್ಬಳಕೆಯಾಗದ ಖಾಲಿ ಜಾಗ
ನಿಲ್ದಾಣದ ಒಳಭಾಗ ಸಾಕಷ್ಟು ಖಾಲಿ ಜಾಗ ಬಿಟ್ಟಿದ್ದು, ಯಾರು ಅವಿತುಕೊಂಡು ಕುಳಿತರೂ ಗೊತ್ತಾಗದ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ರಾತ್ರಿ ವೇಳೆ ಪ್ರಯಾಣಿಕರು
ಹೆದರುವಂತಾಗಿದೆ. ಆರಂಭದಲ್ಲಿ ನಿಲ್ದಾಣದ ಮುಂಭಾಗದಲ್ಲಿ ಉದ್ಯಾನವನ ಸಹ ನಿರ್ಮಾಣ ಮಾಡಲಾಗಿತ್ತು. ದಿನಕಳೆದಂತೆ ಎಲ್ಲವೂ ಕೂಡಾ ಹಾಳಾಗುತ್ತಿದ್ದು, ತ್ಯಾಜ್ಯ ಎಸೆಯುವ ತಾಣವಾಗತೊಡಗಿದೆ.

ಕಳೆದ ಬಾರಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದಾಗ ಈ ವಿಷಯಗಳು ನಮ್ಮ ಗಮನಕ್ಕೆ ಬಂದಿಲ್ಲ. ಇದೀಗ ಡಿಸಿ ಬದಲಾವಣೆಯಾಗಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ
ಸಭೆ ನಡೆಸಿ ಪ್ರಯಾಣಿಕರ ಅನುಕೂಲಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಹೊಸ ಬಸ್‌ ನಿಲ್ದಾಣದ ಸ್ವತ್ಛತೆಗೆ ಕೂಡಲೇ ಆದ್ಯತೆ
ನೀಡಲಾಗುವುದು.
– ಗುರುದತ್ತ ಹೆಗಡೆ, ಎಂ.ಡಿ. ವಾಕರಸಾ ಸಂಸ್ಥೆ ಹುಬ್ಬಳ್ಳಿ

ಪರ ಊರುಗಳಿಗೆ ರಾತ್ರಿ ತೆರಳುವ ಹಾಗೂ ಆಗಮಿಸುವ ಸಮಯದಲ್ಲಿ ನಿಲ್ದಾಣದ ಸ್ಥಿತಿ ನೋಡಿ ಭಯವಾಗುತ್ತದೆ. ಕುಟುಂಬದೊಂದಿಗೆ ಆಗಮಿಸಿದರೆ ಪರಿಸ್ಥಿತಿ ಹೇಳತೀರದು. ಮೂತ್ರ ವಿಸರ್ಜನೆಗೆ ಹೋದರೆ ಶುಲ್ಕ ವಸೂಲಿ ಮಾಡುತ್ತಾರೆ, ಉಚಿತ ಎಂದರೆ ಹೊರ ಹೋಗಿ ಎಂದು ದಬಾಯಿಸುತ್ತಾರೆ.
– ಸುರೇಶ ವಾಲಿ, ಖಾಸಗಿ ಕಂಪನಿ ಸೇಲ್ಸ್ ಮ್ಯಾನೇಜರ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.