ಹೆಚ್ಚಿದ ಮಂಗಗಳ ಹಾವಳಿ: ರೈತರಲ್ಲಿ ಆತಂಕ
Team Udayavani, Aug 27, 2021, 5:55 PM IST
ಜಾವಗಲ್: ಹೋಬಳಿ ಮಲದೇವಿಹಳ್ಳಿ ಗ್ರಾಮದ ಹಲವಾರು ತೋಟಗಳಲ್ಲಿ ಕಳೆದ 4-5 ತಿಂಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದ್ದು ರೈತರು ಆತಂಕ ಪಡುವಂತಾಗಿದೆ.
ಮಲದೇವಿಹಳ್ಳಿ ಗ್ರಾಮದ ಎಂ.ಬಿ.ವಿಶ್ವನಾಥ, ಎಚ್. ಕೆ.ಮಂಜುನಾಥ, ಎಂ.ವಿ.ಸತೀಶ್ಕುಮಾರ್, ಎಂ.ಎನ್ .ಭೀಮೋಜಿರಾವ್, ಶಿವಲಿಂಗಪ್ಪ, ದೇವರಾಜು,ಕೃಷ್ಣಮೂರ್ತಿ ಸೇರಿದಂತೆ ಹಲವರ ಕೃಷಿಕರ ತೋಟಗಳಲ್ಲಿ20-30 ಮಂಗಗಳು ಎಲ್ಲಿಂದಲೋ ಆಗಮಿಸಿ ಬೀಡುಬಿಟ್ಟಿವೆ. ಮಂಗಗಳು ತೋಟಗಳಲ್ಲಿ ಬೆಳೆದ ತೆಂಗು, ಅಡಕೆ, ಮಾವು, ಬಾಳೆ ,ಹಲಸು ಮುಂತಾದ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದು ನಷ್ಟ ಉಂಟು ಮಾಡುತ್ತಿವೆ. ಇವುಗಳನ್ನು ಓಡಿಸಲು ಹೋದಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಇದರಿಂದ ಮಂಗಗಳ ಹಾವಳಿ ತಡೆಗಟ್ಟಲು ಹರಸಾಹಸ ಪಡುವಂತಾಗಿದೆ.
ಮಂಗಗಳ ಹಾವಳಿ ತಪ್ಪಿಸಿ ಸೂಕ್ತ ನಷ್ಟ ಪರಿಹಾರಕೊಡಿಸಿಕೊಡುವಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ನೇರ್ಲಿಗೆ ಗ್ರಾಪಂ ಪಿಡಿಒ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಸೀಕೆರೆ ವಲಯ ಅರಣ್ಯಾಧಿಕಾರಿಗಳು, ಸಹಾಯಕಕೃಷಿ ನಿರ್ದೇಶಕರು, ಸಹಾಯಕ ತೋಟಗಾರಿಕಾ ನಿರ್ದೇಶಕರು ಮುಂತಾದವರಿಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮಂಗಗಳ ಹಾವಳಿ ತಡೆಗಟ್ಟಿ ಬೆಳೆನಷ್ಟ ಪರಿಹಾರ ದೊರಕಿಸಿಕೊಡುವಂತೆಕೃಷಿಕರಾದ ಎಂ.ಬಿ.ವಿಶ್ವನಾಥ, ಎಚ್.ಕೆ.ಮಂಜುನಾಥ ಮತ್ತಿತರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬಿಗ್ ಬಿ ಬಾಡಿಗಾರ್ಡ್ಗೆ ಸಿಇಒಗಳ ಸಂಬಳಕ್ಕಿಂತ ಹೆಚ್ಚು ಆದಾಯ : ವರದಿ ಬೆನ್ನಲ್ಲೆ ವರ್ಗಾವಣೆ
ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು
ಈ ಭಾಗದಲ್ಲಿ ಕಳೆದ 20ವರ್ಷಗಳಿಂದ ಸರಿಯಾಗಿ ಮಳೆಬಾರದೆ ಕೆರೆಕಟ್ಟೆಗಳು ಬತ್ತಿ ಹೋಗಿವೆ. ಆಗಾಗ್ಗೆ ಬೀಳುವ ಅಲ್ಪ ಪ್ರಮಾಣದ ಮಳೆ ಹಾಗೂಕೊಳವೆಬಾವಿಹೊಂದಿರುವುದರಿಂದ ಅಲ್ಪ ಸ್ವಲ್ಪಬೆಳೆ ಕಾಣಬಹುದಾಗಿದೆ.ಈ ಅಲ್ಪ ಸ್ವಲ್ಪ ಪ್ರಮಾಣದಬೆಳೆ ಪಡೆಯಲು ತುಂಬಾ ತೊಂದರೆಯುಂಟಾಗುತ್ತಿದೆ. ಈ ಬಗ್ಗೆ ತಾಲೂಕು ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿ ಹಾಗೂಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಿ ಕಾಡು ಪ್ರಾಣಿಗಳಿಂದ ಉಂಟಾಗುವ ತೊಂದರೆಯಿಂದ ನಷ್ಟ ಪರಿಹಾರ ಕೊಡಿಸುವಂತೆ ಮನವಿಮಾಡಲಾಗಿದೆ. ಆದರೆ,ಈ ಬಗ್ಗೆ ತಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲವೆಂದು ತಿಳಿಸಿದ್ದಾರೆಂದು ರೈತರು ಮಾಹಿತಿ ನೀಡಿದ್ದಾರೆ.
– ರವಿಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ