ಒಂದೇ ಬಾರಿ ಬಳಸಿ ಎಸೆಯುವಂತಹ ಪ್ಲಾಸ್ಟಿಕ್ ನ ಸಂಪೂರ್ಣ ನಿಷೇಧ ಸಾಧ್ಯವೇ ?
Team Udayavani, Sep 27, 2019, 3:58 PM IST
ಮಣಿಪಾಲ: ಪ್ಲಾಸ್ಟಿಕ್ ಎನ್ನುವುದು ಈ ಕಾಲದ ಅತಿ ದೊಡ್ಡ ಪಿಡುಗು. ಈ ಪಿಡುಗಿನಿಂದ ಮುಂದಿನ ತಲೆಮಾರನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ. ಒಂದೇ ಬಾರಿ ಬಳಸಿ ಎಸೆಯುವಂತಹ ಪ್ಲಾಸ್ಟಿಕ್ ನ ಸಂಪೂರ್ಣ ನಿಷೇಧ ಸಾಧ್ಯವೇ ? ಎಂಬ ಪ್ರಶ್ನೆಯನ್ನು ಉದಯವಾಣಿ ತನ್ನ ಓದುಗರಿಗೆ ಕೇಳಿತ್ತು. ಇದಕ್ಕೆ ಉಟ್ಟಮ ಪ್ರತಿಕ್ರಿಯೆ ದೊರಕಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ದಾವೂದ್ ಕೂರ್ಗ್; ಖಂಡಿತ ಸಾಧ್ಯ. ಜನರಿಗೆ ಇದರ ಬಗ್ಗೆ ಪರಿಣಾಮಕಾರಿಯಾಗಿ ತಿಳುವಳಿಕೆ ನೀಡಿದ್ರೆ ಜನರ ಬೆಂಬಲದೊಂದಿಗೆ ಯಶಸ್ಸು ಸಾಧಿಸಬಹುದು. ಇದು ನಾವು ಮುಂದಿನ ಪೀಳಿಗೆಗೆ ನೀಡಲಿರುವ ಬಹುದೊಡ್ಡ ಕೊಡುಗೆಯೂ ಆಗಬಹುದು.
ರೋಹಿಂದ್ರನಾಥ್ ಕೋಡಿಕಲ್ : ಒಂದು ಬಾರಿ ಮಾತ್ರ ಉಪಯೋಗವಾಗುವ ಪ್ಲಾಸ್ಟಿಕ್ ನಿಷೇಧ ಸಂಪೂರ್ಣ ಸರಿ. ಸಾರ್ವಜನಿಕರ ಸಹಕಾರ ಇದಕ್ಕೆ ತುಂಬಾ ಅಗತ್ಯ. ನಮ್ಮ ಮುಂದಿನ ಪೀಳಿಗೆಗೆ ಇದಕ್ಕಿಂತ ದೊಡ್ಡ ಕೊಡುಗೆ ಇಲ್ಲ.
ಮಂಜುನಾಥ್ ಎಸ್ ಎಂ ರಾಮ್ : ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಜನರನ್ನು ಸರಿಯಾದ ರೀತಿಯಲ್ಲಿ ಶಿಕ್ಷಿತರನ್ನಾಗಿಸಿ ಅರಿವು ಮೂಡಿಸುವುದು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆಯನ್ನು ಸಂಪೂರ್ಣ ನಿಷೇಧಿಸುವುದು. ಎರಡು ಉತ್ತಮ ಪರಿಹಾರಗಳಾಗಬಲ್ಲವು.
ದಿನೇಶ್ ರಾಜು ಪೂಜಾರಿ : ಮೊತ್ತ ಮೊದಲು ಪ್ಲಾಸ್ಟಿಕ್ ಚೀಲ ತಯಾರು ಮಾಡುವ ಕಂಪನಿಯನ್ನು ಬಂದ ಮಾಡಬೇಕು ಎಲ್ಲು ತಯರಾಗದ ಹಾಗೆ ನೊಡಿಕೊಳ್ಳ ಬೇಕು
ಮೊಹಮ್ಮದ್ ಹನೀಫ್ : ಸಾಧ್ಯ ಇದೆ ಫ್ಯಾಕ್ಟರಿ ಮಾಲೀಕರು ಈಗ ಇರುವ ಪ್ಲಾಸ್ಟಿಕ್ ದರವನ್ನು ಕೆಜಿ ಒಂದಕ್ಕೆ 50 ರೂಪಾಯಿ ಹೆಚ್ಚಿಸಬೇಕು ಈ ಹೆಚ್ಚುವರಿ 50 ಯಲ್ಲಿ ಕೆಜಿ ಒಂದರಂತೆ ಹಳೆ ಪ್ಲಾಸ್ಟಿಕ್ ವಾಪಸು ಜನರಿಂದ ಪಡೆಯಬೇಕು ಆಗ ನಮ್ಮ ಸುತ್ತು ಮುತ್ತ ಇರುವ ಎಲ್ಲಾ ಹಳೆ ಪ್ಲಾಸ್ಟಿಕ್ ಜನರು ಹೆಕ್ಕುತ್ತಾರೆ ಫ್ಯಾಕ್ಟರಿಯವರು ಹಳೆ ಪ್ಲಾಸ್ಟಿಕ್ ಆಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬೇಕು ಸರಕಾರ ಇದಕ್ಕೆ ಸಹಾಯ ಮಾಡಬೇಕು.
ಯಶ್ವಥ್ ಕುಮಾರ್ : ನಮ್ಮ ದೇಶದಲ್ಲಿ ಜನರಿಗೆ ಬುದ್ಧಿ ಹೇಳಿ ಕೈ ಜೋಡಿಸಿ ಜನರು ಬೆಂಬಲ ಕೊಟ್ಟರೆ 100% ಖಂಡಿತ ಸಾದ್ಯ ಆಗುತ್ತದೆ. ಈಗಲೆ ಪ್ಲಾಸ್ಟಿಕ್ ಮುಕ್ತ ಮಾಡಿದರೆ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತದೆ.
ನಾಗು ವಿ ಬಿ: ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ನಿಷೇಧ ಅಂತ ಜನಗಳಿಗೆ ಹೇಳೋ ಬದಲು ಆ ಪ್ಲಾಸ್ಟಿಕ್ ಚೀಲ ತಯಾರಿಸುವ ಕಂಪನಿಗೆ ಬೀಗ ಹಾಕಿದ್ರೆ ಆಯಿತು. ಮೈನ್ ಸ್ವಿಚ್ ಬಿಟ್ಟು ಇಲ್ಲಿ ಬರೀ ಸಬ್ ಸ್ವಿಚ್ ಆನ್ ಮಾಡಿದ್ರೆ ಆಗುತ್ತಾ ಕೆಲ್ಸ. ಎನ್ ಸಿಸ್ಟಮ್ ರೀ ನಮ್ ಗವರ್ನಮೆಂಟ್ ದ್ದು.
ಸೈಮನ್ ಫೆರ್ನಾಂಡಿಸ್: ಯಾಕೆ ಸಾಧ್ಯವಿಲ್ಲ? ಸಾಧ್ಯವಾಗಿಸಬೇಕು. ಅದರಿಂದಾಗುವ ಅನಾಹುತಗಳನ್ನು ಕಂಡ ಮೇಲೂ ಆಗುವುದಿಲ್ಲ ಎಂದು ಹೇಳುವುದು ಎಷ್ಟು ಸಮಂಜಸ..? ಸಾಧ್ಯವಾಗಿಸುವ ಮನಸ್ಥಿತಿ ನಮ್ಮದಾಗಬೇಕು. ಅಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು