ಹಬ್ಬದ ಹಿನ್ನೆಲೆ: ಜಾಜಿಗೂ ಬಂತು ಬಂಪರ್ ಬೆಲೆ
Team Udayavani, Oct 18, 2020, 7:07 AM IST
ಶಿರ್ವ: ಪಿತೃಪಕ್ಷದ ಬಳಿಕ ಏರಿಕೆ ಕಂಡಿದ್ದ ಶಂಕರಪುರ ಮಲ್ಲಿಗೆಯ ದರ ನವರಾತ್ರಿಯ ಮೊದಲ ದಿನದಿಂದಲೇ ಅಟ್ಟೆಗೆ ಕಟ್ಟೆಯಲ್ಲಿ ಗರಿಷ್ಠ ದರ 1,250 ರೂ. ಮುಂದುವರಿದಿದೆ. ಸತತ 11ನೇ ದಿನ ಇದೇ ಧಾರಣೆ ಇದೆ. ಇದರೊಂದಿಗೆ ಜಾಜಿ ದರವೂ ಏರುತ್ತಿದ್ದು, ಶನಿವಾರ ಅಟ್ಟೆಗೆ 1,050 ರೂ.ಗೆ ತಲುಪಿದೆ.
ವಿಪರೀತ ಮಳೆಯಿಂದಾಗಿ ಗಿಡಗಳು ಹಾಳಾಗಿ ಬೇಡಿಕೆಗನುಗುಣವಾಗಿ ಮಲ್ಲಿಗೆ ಮಾರುಕಟ್ಟೆಗೆ ಬರುತ್ತಿಲ್ಲ. ಇದೇ ವೇಳೆ ಜತೆಗೆ ಹಬ್ಬದ ಸಂದರ್ಭ ಬೇಡಿಕೆಯೂ ಇರುವುದರಿಂದ ನವರಾತ್ರಿಯಿಡೀ 1,250 ರೂ. ಮುಂದುವರಿದರೆ ಅದೂ ಒಂದು ದಾಖಲೆಯಾಗಲಿದೆ.
ಜಾಜಿಗೂ ಬಂಪರ್ ಬೆಲೆ
ಮಳೆಯಿಂದ ಇಳುವರಿ ಕುಂಠಿತಗೊಂಡು ಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿ ಜಾಜಿಯ ದರವೂ ಏರಿದೆ. ಮಲ್ಲಿಗೆ ಬೆಳೆ ಕಡಿಮೆಯಾಗಿರುವುದರಿಂದ ಬೆಳೆಗಾರರಿಗೆ ಯಾವುದೇ ಖರ್ಚಿಲ್ಲದೆ ಬೆಳೆಯುವ ಜಾಜಿಗೆ ಬಂಪರ್ ಬೆಲೆ ಬಂದಿದೆ. ಕಳೆದ ವಾರದಲ್ಲಿ 300-400 ರೂ. ಆಸುಪಾಸಿನಲ್ಲಿದ್ದ ಜಾಜಿದರ ಅ. 16ರಂದು ರೂ. 850 ಇದ್ದು ಶನಿವಾರ 1,050 ರೂ. ತಲುಪಿದೆ. ಕಳೆದ ವಾರದ ವರೆಗೆ ನಿರಂತರ ಮಳೆಬಂದು ಗಿಡಗಳು ಹಾಳಾಗಿ ಮಲ್ಲಿಗೆ ಹೂವಿನ ಅಭಾವದಿಂದಾಗಿ ಜಾಜಿಯೂ ಉತ್ತಮ ದರ ಕಾಯ್ದುಕೊಂಡಿದೆ.
ಮಾರುಕಟ್ಟೆಯಲ್ಲಿ ಶನಿವಾರ
ಕಟ್ಟೆ (ಬೆಳೆಗಾರರಿಂದ ಸಂಗ್ರಹಿಸಿ ವಿಲೇವಾರಿ ಮಾಡುವ ಸ್ಥಳ)ಯಲ್ಲಿ ಮಲ್ಲಿಗೆಗೆ ಗರಿಷ್ಠ ದರ ನಿಗದಿಯಾಗಿದ್ದರೂ ಮಾರುಕಟ್ಟೆಯಲ್ಲಿ ವಿಭಿನ್ನ ದರ ಇರುತ್ತದೆ. ಬೇಡಿಕೆಗನುಗುಣವಾಗಿ ಮತ್ತು ಊರಿನಿಂದ ಊರಿಗೆ ಈ ದರದಲ್ಲಿ
ವ್ಯತ್ಯಾಸ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು