ಟೋಕಿಯೊ: ಕೋವಿಡ್ ತುರ್ತು ಸ್ಥಿತಿ ಹಿಂದೆಗೆತ
Team Udayavani, May 26, 2020, 5:11 PM IST
ಟೋಕಿಯೊ: ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಟೋಕಿಯೊ ಮತ್ತು ಉಳಿದ ನಾಲ್ಕು ಪ್ರದೇಶಗಳಲ್ಲಿ ಕೋವಿಡ್ ವೈರಸ್ ತುರ್ತು ಸ್ಥಿತಿಯನ್ನು ಹಿಂದೆಗೆದುಕೊಂಡಿದ್ದಾರೆ.
ಸರಕಾರಿ ನಿಯೋಜಿತ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಟೋಕಿಯೊ ಅಲ್ಲದೆ ಪಕ್ಕದ ಕನಗಾವ, ಚಿಬ ಮತ್ತು ಸೈತಮ ರಾಜ್ಯಗಳಲ್ಲಿ ಹಾಗೂ ಉತ್ತರದ ಹೊಕೈಡೊ ರಾಜ್ಯದಲ್ಲಿ ವಿಧಿಸಲಾಗಿದ್ದ ಕೋವಿಡ್ ತುರ್ತು ಸ್ಥಿತಿಯನ್ನು ಸೋಮವಾರ ಹಿಂದೆಗೆದುಕೊಳ್ಳಲಾಯಿತು.
ತುರ್ತುಸ್ಥಿತಿಯನ್ನು ಹಿಂದೆಗೆದುಕೊಂಡ ಮಾತ್ರಕ್ಕೆ ಸೋಂಕು ಅಂತ್ಯಗೊಂಡಿದೆಯೆಂದು ಭಾವಿಸಬೇಕಾಗಿಲ್ಲವೆಂದು ನುಡಿದ ಅಬೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಆರ್ಥಿಕತೆಯನ್ನು ಸರಿದೂಗಿಸುವುದು ನಮ್ಮ ಮುಂದಿರುವ ಗುರಿಯಾಗಿದೆ ಎಂದರು.
850 ಮಂದಿ ಬಲಿ
ಜಪಾನ್ನಲ್ಲಿ 16,600 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಸುಮಾರು 850 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಸಂಭವಿಸಿರುವಂತೆ ಸೋಂಕು ತೀವ್ರ ಸ್ವರೂಪ ಪಡೆಯುವುದನ್ನು ತಡೆಯುವಲ್ಲಿ ಜಪಾನ್ ಈತನಕ ಯಶಸ್ವಿಯಾಗಿದೆ.
ಆರ್ಥಿಕ ಹಿಂಜರಿತ
ಇದೇ ಸಮಯ ಜಗತ್ತಿನ ಮೂರನೆ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಜಪಾನ್ನಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿದೆ. ಅಬೆ ಅವರು ಕೋವಿಡ್ನ ನಿಭಾಯಿಸಿದ ರೀತಿಯ ಬಗ್ಗೆ ಸಾರ್ವಜನಿಕ ಅಸಮಾಧಾನವಿದ್ದು ಅವರಿಗೆ ಜನಬೆಂಬಲ ತೀವ್ರ ಕುಸಿದಿದೆ.
ಅವರ ಸಂಪುಟಕ್ಕೆ ಸಾರ್ವಜನಿಕ ಬೆಂಬಲ ಶೇ. 30ಕ್ಕಿಂತ ಕೆಳಗೆ ಕುಸಿದಿರುವುದು ಈಚಿನ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿದೆ. ಇದು ಅವರು 2012ರ ಡಿಸೆಂಬರ್ನಲ್ಲಿ ಅಧಿಕಾರಕ್ಕೆ ಮರಳಿದ ಬಳಿಕ ಅವರಿಗೆ ವ್ಯಕ್ತವಾಗಿರುವ ಅತಿಕನಿಷ್ಠ ಜನಬೆಂಬಲವಾಗಿದೆ.
ಅಬೆ ಅವರು ಎ. 7ರಂದು ಟೋಕಿಯೊ ಸಹಿತ ಜಪಾನಿನ ಹಲವು ಭಾಗಗಳಲ್ಲಿ ತುರ್ತು ಸ್ಥಿತಿ ಘೋಷಿಸಿದ್ದರು.ಅನಂತರ ಮಾಸಾಂತ್ಯ ಅದನ್ನು ಇಡೀ ದೇಶಕ್ಕೆ ವಿಸ್ತರಿಸಿದ್ದರು. ಬಳಿಕ ಮೇ ಅಂತ್ಯದವರೆಗೆ ವಿಸ್ತರಣೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ