Kaikamba: ನದಿಗೆ ಹಾರಿದ ವ್ಯಕ್ತಿ ನಾಪತ್ತೆ
Team Udayavani, Nov 22, 2023, 12:51 AM IST
ಕೈಕಂಬ: ಅಡ್ಡೂರು ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಶೂ ಲೇಸ್ ನೀರಿನಲ್ಲಿ ಹೋಯಿತೆಂದು ಅದನ್ನು ತರುವುದಾಗಿ ನದಿಗೆ ಹಾರಿದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಆತನ ಜತೆ ಬಂದ ಯುವಕ ಹೇಳಿದ್ದಾನೆ. ಅದರೆ ಬಜಪೆ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎನ್ನಲಾಗಿದೆ.
ಕಾವೂರು ಆಕಾಶಭವನದ ನಿವಾಸಿ ಪ್ರಶಾಂತ್ ಕುಮಾರ್ ನಾಪತ್ತೆಯಾದವರು ಎನ್ನಲಾಗಿದೆ. ಅವರು ಗೆಳಯನ ಜತೆ ಪೊಳಲಿ ದೇವಸ್ಥಾನಕ್ಕೆ ಬಂದಿದ್ದು ದೇವಸ್ಥಾನಕ್ಕೆ ತೆರಳುವ ಮುನ್ನ ನದಿಯಲ್ಲಿ ಸ್ನಾನ ಮಾಡುವ ವೇಳೆ ಈ ಘಟನೆ ಸಂಭವಿಸಿದೆ.
ಘಟನೆ ತಿಳಿದು ಅಗ್ನಿಶಾಮಕ ದಳದ ಸಿಬಂದಿ ನದಿಯಲ್ಲಿ ಹಾರಿದ ವ್ಯಕ್ತಿಯನ್ನು ಹುಡುಕಿದರೂ ಪತ್ತೆಯಾಗಿಲ್ಲ.