ಐಸಿಎ ಪ್ರಯತ್ನಕ್ಕೆ ಕಪಿಲ್, ಗಾವಸ್ಕರ್ ಬೆಂಬಲ
Team Udayavani, May 3, 2020, 5:45 AM IST
ಹೊಸದಿಲ್ಲಿ: ದೇಶವ್ಯಾಪಿ ಲಾಕ್ಡೌನ್ ಹಿನ್ನೆಲೆಯಲ್ಲಿ ಸುಮಾರು 30 ಕ್ರಿಕೆಟಿಗರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಇಂಡಿಯನ್ ಕ್ರಿಕೆಟರ್ ಅಸೋಸಿಯೇಶನ್ (ಐಸಿಎ) ಪ್ರಯತ್ನಕ್ಕೆ ಖ್ಯಾತ ಆಟಗಾರರಾದ ಸುನೀಲ್ ಗಾವಸ್ಕರ್ ಮತ್ತು ಕಪಿಲ್ ದೇವ್ ತಮ್ಮ ಬೆಂಬಲ ಘೋಷಿಸಿದ್ದಾರೆ ಎಂದು ಐಸಿಎ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದ್ದಾರೆ.
ಹಣದ ಆವಶ್ಯಕತೆಯಿರುವ ಮಾಜಿ ಕ್ರಿಕೆಟಿಗರಿಗೆ ನೆರವಾಗಲು ಐಸಿಎ ಈಗಾಗಲೇ 39 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ. ನಿಧಿ ಸಂಗ್ರಹಿಸುವ ಸಲುವಾಗಿ ಐಸಿಎಯ ಉಪಕ್ರಮಕ್ಕೆ ಗಾವಸ್ಕರ್, ಕಪಿಲ್ ಮಾತ್ರವಲ್ಲದೇ ಗೌತಮ್ ಗಂಭೀರ್ ಮತ್ತು ಗುಂಡಪ್ಪ ವಿಶ್ವನಾಥ್ ಬೆಂಬಲ ಸೂಚಿಸಿದ್ದಾರೆ.
ಗುಜರಾತ್ನ ಕಾರ್ಪೊರೆಟ್ ಸಂಸ್ಥೆಯೊಂದು ಕೂಡ ಬೆಂಬಲದ ಕೊಡುಗೆ ನೀಡಿದೆ ಎಂದು ಮಲ್ಹೋತ್ರಾ ಹೇಳಿದರು.
ಹಲವು ಮಾಜಿ ಕ್ರಿಕೆಟಿಗರು ನಮ್ಮ ಪ್ರಯತ್ನಕ್ಕೆ ಹಣದ ಕೊಡುಗೆ ನೀಡಿದ್ದಾರೆ. ಕಳೆದ ವಾರ ಅಜರುದ್ದೀನ್ ಹಣಕಾಸಿನ ಬೆಂಬಲ ನೀಡಿದ್ದಾರೆ. ಮೇ 15ರ ವರೆಗೆ ನಾವು ದೇಣಿಗೆಯನ್ನು ಸ್ವೀಕರಿಸಲಿದ್ದೇವೆ ಆಬಳಿಕ ಪ್ರತಿ ವಲಯದಿಂದ ಐದರಿಂದ ಆರು ಕ್ರಿಕೆಟಿಗರ ಪಟ್ಟಿ ಮಾಡಿ ಹಣವನ್ನು ವಿತರಿಸಲಾಗುವುದು ಎಂದು ಮಲ್ಹೋತ್ರಾ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ