Kundapura news: ಬೈಕ್ ಪಲ್ಟಿ; ಸವಾರರಿಬ್ಬರಿಗೆ ಗಾಯ
Team Udayavani, Sep 7, 2023, 12:22 AM IST
ಕುಂದಾಪುರ: ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಯ ರಾ.ಹೆ. 66ರಲ್ಲಿ ನಾಯಿ ಅಡ್ಡ ಬಂದು ಬೈಕ್ ಪಲ್ಟಿಯಾಗಿ ಸವಾರರಾದ ರಾಮಚಂದ್ರ ಹಾಗೂ ಚಂದ್ರಶೇಖರ ಆಚಾರ್ಯ ಗಾಯಗೊಂಡ ಘಟನೆ ಸೆ. 5ರಂದು ಸಂಜೆ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಢಿಕ್ಕಿ; ಪಾದಚಾರಿಗಳಿಬ್ಬರಿಗೆ ಗಾಯ
ಗಂಗೊಳ್ಳಿ: ಮುಳ್ಳಿಕಟ್ಟೆ ಜಂಕ್ಷನ್ ಬಳಿಯ ಸರ್ವಿಸ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುನೀತಾ ಹಾಗೂ ಅನುಷಾ ಅವರಿಗೆ ಕಾರು ಢಿಕ್ಕಿಯಾಗಿ ಗಾಯಗೊಂಡ ಘಟನೆ ಸೆ. 5ರಂದು ಸಂಜೆ 6.30 ರ ಸುಮಾರಿಗೆ ಸಂಭವಿಸಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಡಾ: ಬೈಕ್ಗಳ ಢಿಕ್ಕಿ; ಇಬ್ಬರಿಗೆ ಗಾಯ
ಗಂಗೊಳ್ಳಿ: ನಾಡಾ ರಾಮನಗರ ಸರ್ಕಲ್ ಸಮೀಪ ಎರಡು ಬೈಕ್ಗಳು ಢಿಕ್ಕಿಯಾಗಿದೆ. ಸವಾರ ದೀಪಕ್, ಇನ್ನೊಂದು ಬೈಕಿನ ಸವಾರ ಆದಿಲ್ ಅವರಿಗೆ ಗಾಯವಾಗಿದೆ. ಇಬ್ಬರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಕರಣ ದಾಖಲಾಗಿದೆ.
ಕುಂದಾಪುರ: ಮಟ್ಕಾ ಜುಗಾರಿ; ವಶಕ್ಕೆ
ಕುಂದಾಪುರ: ಎಸ್ಐ ವಿನಯ್ ಎಮ್. ಕೊರ್ಲಹಳ್ಳಿ ಅವರು ಪುರಸಭೆ ವ್ಯಾಪ್ತಿಯ ಮೀನು ಮಾರ್ಕೆಟ್ ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ಸತೀಶ ಖಾರ್ವಿ (45)ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತರರು ದಾಳಿ ವೇಳೆ ಓಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಾಗಿದೆ.