ಗಮನ ಸೆಳೆದ ಅನಿವಾಸಿ ಕನ್ನಡಿಗರ ಯಕ್ಷಗಾನ

ಯಕ್ಷಗಾನ ಕಲಾವಿದರಿಗೆ ನೆರವಾಗುವ ಆಶಯ ; ಎರಡೂವರೆ ತಾಸು ಪ್ರದರ್ಶನ

Team Udayavani, May 28, 2020, 8:10 AM IST

ಗಮನ ಸೆಳೆದ ಅನಿವಾಸಿ ಕನ್ನಡಿಗರ ಯಕ್ಷಗಾನ

ಶಿರಸಿ: ಪ್ರದರ್ಶನ ಕಂಡ ಯಕ್ಷಗಾನದ ನೋಟ.

ಶಿರಸಿ: ಕೋವಿಡ್ ಲಾಕ್‌ಡೌನ್‌ ಕಲಾ ಪ್ರದರ್ಶನಕ್ಕೂ ಸಂಕಷ್ಟ ತಂದಿವೆ. ವೃತ್ತಿಪರರಿಗೆ ಬದುಕಿನ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂಥ ಕಲಾವಿದರಿಗೆ ನೆರವಾಗುವ ಹಾಗೂ ಯಕ್ಷಗಾನ ಕಲೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಯಕ್ಷ ಗೆಜ್ಜೆ ಕಟ್ಟಿದ್ದಾರೆ. ಭಾರತ ಕಲಾವಿದರಿಗೆ ನೆರವಾಗುವ ಆಶಯದಲ್ಲಿ ಅಮೇರಿಕಾದ ಅನಿವಾಸಿ ಕನ್ನಡಿಗರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಲಾಕ್‌ಡೌನ್‌ ನಡುವೆಯೂ ಅವರವರ ಮನೆಯಿಂದಲೇ ಝೂಂ ಆ್ಯಪ್‌ ಬಳಸಿ ಮನೆ ಮನೆಗೆ, ಮನ ಮನಕ್ಕೆ ಯಕ್ಷಗಾನದ ಸೊಗಸು ಹಂಚುವಲ್ಲಿ ಯಶಸ್ವಿಯಾಗಿದ್ದಾರೆ. ತಾಳಮದ್ದಲೆ ನಡೆಸಿ ಈಗ ಯಕ್ಷಗಾನವನ್ನೂ ರಂಗಕ್ಕೆ ತಂದು “ಲೈವ್‌’ ಯಕ್ಷಗಾನ ಉಣಬಡಿಸಿದ್ದಾರೆ!

ಯಾರಿವರೆಲ್ಲ?: ಅಮೆರಿಕಾ, ಕೆನಡಾ ದೇಶದಲ್ಲಿ ತಮ್ಮದೇ ಆದ ಬದುಕು ಕಂಡುಕೊಂಡ ಹವ್ಯಾಸಿ ಕಲಾವಿದರೂ, ಯಕ್ಷಗಾನ ಆಸಕ್ತರೂ ಸೇರಿ ಪ್ರದರ್ಶಿಸಿದ ಕಾಳಿದಾಸ ಆಖ್ಯಾನ ಏಕಕಾಲಕ್ಕೆ ಸಾವಿರ ಪ್ರೇಕ್ಷಕರು ಅವರವರ ಮನೆಯಲ್ಲೇ ಕುಳಿತು ಪ್ರದರ್ಶನ ವೀಕ್ಷಿಸಿದ್ದು ವಿಶೇಷವಾಗಿತ್ತು. ಕೊರೊನಾ ಕರಾಳತೆ ನಡುವೆ ಕಳೆದ ತಿಂಗಳು ಶ್ರೀಪಾದ ಹೆಗಡೆ ಅಮೆರಿಕಾ ಯಕ್ಷಗಾನ ಅಭಿಮಾನಿಗಳಿಗಾಗಿ ಒಂದು ತಾಳಮದ್ದಳೆ ಸಂಯೋಜಿಸಿದ್ದರು. ಒಂದೇ ಕಡೆ ಕುಳಿತು ತಾಳಮದ್ದಲೆ ಮಾಡಲು ಸಾಧ್ಯವಿಲ್ಲವಾದ್ದರಿಂದ ಝೂಂ ಆ್ಯಪ್‌ ಬಳಸಿ ನಡೆಸಿದರು. ಆಗ ಸುಮಾರು 300 ವೀಕ್ಷಕರು ಅದನ್ನು ವೀಕ್ಷಿಸಿ ಮೆಚ್ಚುಗೆ ನೀಡಿದ್ದರು. ಇದರ ಪರಿಣಾಮ ಯಕ್ಷಗಾನಕ್ಕೂ ಹೊರಳಿತು. ಕ್ಯಾಲಿಫೋರ್ನಿಯಾದ ಹವ್ಯಕ ಒಕ್ಕೂಟದ ಉಪಾಧ್ಯಕ್ಷ ಬಾಲಾ ಜೋಶಿ ನೆರವಾದರು. ಸ್ವತಃ ಯಕ್ಷಗಾನ ವೇಷಭೂಷಣ ಹೊಂದಿದ ಕಲಾವಿದರು ಸ್ವತಃ ಮೇಕಪ್‌ ಮಾಡಿಕೊಂಡು ಮನೆಯಲ್ಲೇ ವೇದಿಕೆ ನಿರ್ಮಾಣ ಮಾಡಿಕೊಂಡರು.

ಭಾಗವತ ಕೆ.ಜೆ. ಗಣೇಶ ಅವರ ತಂಡದ ಧ್ವನಿಮು ದ್ರಿತ ಹಿಮ್ಮೇಳ ಬಳಸಿಕೊಂಡು ಲೈವ್‌ ಆಟ ನಡೆಸಿದರು. ಬಾಲಾ ಜೋಶಿ, ಅಭಿರಾಮ್‌ ಮತ್ತು ವಿಠ್ಠಲ ಪುತ್ತೂರು ತಾಂತ್ರಿಕ ಸಹಾಯದ ಮೂಲಕ ಅಲ್ಲಿನ ಸನಾತನ ಯಕ್ಷರಂಗ ಕಲಾವಿದರ ಯಕ್ಷಗಾನ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.

6000 ಕಿ.ಮೀ ಅಂತರ!
ಅಮೆರಿಕಾದಲ್ಲೇ 75-100 ಕಿಮೀ ಅಂತರದಲ್ಲಿದ್ದರೆ, ಕಲಾಧರ ಪಾತ್ರ ಮಾಡಿದ ನವೀನ ಹೆಗಡೆ 6000 ಕಿಮೀ ದೂರದ ಕೆನಡಾದಲ್ಲಿದ್ದರು. ಸಾಫ್ಟವೇರ್‌ ಸೇರಿದಂತೆ ಅನೇಕ ಉದ್ಯೋಗದಲ್ಲಿರುವ ಹವ್ಯಾಸಿ ಕಲಾವಿದರು ಎರಡು ಗಂಟೆಗೂ ಅಧಿಕ ಕಾಲದ ಯಕ್ಷಗಾನ ಪ್ರದರ್ಶನ ನಡೆಸಿದರು. ಕಾಳಿದಾಸನಾಗಿ ಶ್ರೀಪಾದ ಹೆಗಡೆ, ಕಲಾಧರನಾಗಿ ನವೀನ ಹೆಗಡೆ, ವಿದ್ಯಾಧರೆಯಾಗಿ ಉಷಾ ಹೆಬ್ಟಾರ್‌, ಮಂತ್ರಿಯಾಗಿ ಅಶ್ವಿ‌ನಿ ಬಿಕೆ, ರಾಜನಾಗಿ ಗೋಪಾಲ ಭಟ್ಟ, ಕಾಳಿದೇವಿಯಾಗಿ ಶಾಂತಿಕಾ ಹೆಗಡೆ ಪಾತ್ರ ಮಾಡಿದರು. ಒಮ್ಮೆ ನರ್ತನ ಮಾಡಿದ ವಿಡಿಯೋ ಮಾಡಿಕೊಂಡು ನಂತರ ಲೈವ್‌ನಲ್ಲಿ ಸಂಭಾಷಣೆಗೆ ವೇಷದಲ್ಲೇ ಬಂದು ನಿಂತು ತಾಂತ್ರಿಕ ಸಮಸ್ಯೆ ಸರಿದೂಗಿಸಿಕೊಂಡರು. ವಿಡಿಯೋ ಎಡಿಟಿಂಗ್‌ ಅಶ್ವಿ‌ನಿ ಬಿಕೆ ನಡೆಸಿದರು.

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.