ಆಟವಾಡುತ್ತಾ ದಾರಿ ತಪ್ಪಿದ ಪುಟಾಣಿ ಮಗು! ವಾಟ್ಸ್ ಆ್ಯಪ್ನಿಂದ ಪಾಲಕರ ಮಡಿಲು ಸೇರಿತು
Team Udayavani, Sep 23, 2020, 4:08 PM IST
ಅಥಣಿ: ಮನೆ ಎದುರು ರಸ್ತೆಯಲ್ಲಿ ಆಟ ಆಡುತ್ತ ದಾರಿ ತಪ್ಪಿ ಅಳುತ್ತಾ ನಿಂತಿದ್ದ ಪುಟಾಣಿ ಬಾಲಕ ಸ್ಥಳೀಯ ಸಮಾಜ ಸೇವಕ ಗಜಾನನ ಮಂಗಸೂಳಿಯವರ ನೆರವಿನಿಂದ ಪಾಲಕರ ಮಡಿಲು ಸೇರಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬಳಿಯ ತಮ್ಮ ನೆ ರಸ್ತೆಯಲ್ಲಿ ಪುಟ್ಟ ಮಗು ಅಳುತ್ತಿರುವುದನ್ನು ನೋಡಿದ ಗಜಾನನ ಮಂಗಸೂಳಿ, ಮಗುವನ್ನು ಹೆಸರು, ಮನೆಯ ಬಗ್ಗೆ ಕೇಳಿದ್ದಾರೆ. ಆದರೆ ಮಗುವಿಗೆ ಏನೂ ಹೇಳಲು ಬಂದಿಲ್ಲ. ಹೀಗಾಗಿ ವಾರ್ಡ್ ನಲ್ಲಿ ಸಂಚರಿಸಿ ಮಗುವಿನ ಬಗ್ಗೆ ವಿಚಾರಿಸಿದ್ದಾರೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಆದರೆ ಈ ಸಲಹೆಯಿಂದ ತೃಪ್ತರಾಗದ ಗಜಾನನ ಮಂಗಸೂಳಿ ಮಗುವಿನ ಫೋಟೋವನ್ನು ಪಟ್ಟಣದ ಗ್ರೂಪ್ ಗಳಿಗೆ ಹಾಕಿದ್ದಾರೆ. ಆ ವಾಟ್ಸ್ ಆ್ಯಪ್ ಸಂದೇಶ ತಮ್ಮ ಮಗುವನ್ನು ಹುಡುಕುತ್ತಿದ್ದ ಪಾಲಕರ ಗಮನಕ್ಕೂ ಬಂದಿದೆ. ಕೂಡಲೇ ಅವರು ಗಜಾನನ ಮಂಗಸೂಳಿ ಅವರನ್ನು ಸಂಪರ್ಕಿಸಿದ್ದಾರೆ. ಈ ಮಗು ಪಟ್ಟಣದ ಝಾರೆ ಗಲ್ಲಿಯ ಸಂಬಂಧಿಕರ ಮನೆಗೆ ಬಂದಿದ್ದ ಮಹಾರಾಷ್ಟ್ರದ ದಂಪತಿಗೆ ಸೇರಿದ್ದು ಎಂಬುದು ದೃಢಪಟ್ಟಿದೆ.
ಬಳಿಕ ಗಜಾನನ ಮಂಗಸೂಳಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಿಬ್ಬಂದಿ ನೆರವಿನಿಂದ ಮಗುವನ್ನು ಪಾಲಕರಿಗೆ ಹಸ್ತಾಂತರಿಸಿದ್ದಾರೆ. ಗಜಾನನ ಮಂಗಸೂಳಿ ಅವರ ಕಾರ್ಯಕ್ಕೆ ಪಟ್ಟಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!